ಬ್ರೇಕಿಂಗ್ ನ್ಯೂಸ್
16-02-23 08:00 pm Mangalore Correspondent ಕರಾವಳಿ
ಮಂಗಳೂರು, ಫೆ.16 : ಗುಣಮಟ್ಟದ ಪುಸ್ತಕ ಪ್ರಕಟಣೆಯ ಮೂಲಕ ಕೊಂಕಣಿ ಸಾಹಿತ್ಯದ ಬೆಳವಣಿಗೆ ನವಚೇತನ ತುಂಬುವ ಆಶಯದೊಂದಿಗೆ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜಾ, ದುಬೈ ಇವರ ಮಹತ್ವಾಕಾಂಕ್ಷಿ ಯೋಜನೆ ’ಮೈಕಲ್ ಡಿಸೋಜಾ ವಿಶನ್ ಕೊಂಕಣಿ’ ಕಾರ್ಯಕ್ರಮಕ್ಕೆ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಒಪ್ಪಂದಕ್ಕೆ ಸಹಿ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ವಿಶ್ವ ಕೊಂಕಣಿ ಕೇಂದ್ರದ ಪರವಾಗಿ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಮತ್ತು ವಿಶನ್ ಕೊಂಕಣಿ ಪರವಾಗಿ ಮೈಕಲ್ ಡಿಸೋಜಾ ಒಪ್ಪಂದಕ್ಕೆ ಸಹಿ ಮಾಡಿದರು. "ಕೊಂಕಣಿ ಸಾಹಿತ್ಯ ಅಭಿವೃದ್ದಿಯಾಗಬೇಕಾದರೆ ಉತ್ತಮ ಗುಣಮಟ್ಟದ ಪುಸ್ತಕಗಳು ಪ್ರಕಟವಾಗಬೇಕು. ಮುದ್ರಣ ಹಾಗೂ ವಿತರಣಾ ವೆಚ್ಚದಲ್ಲಿ ಇಂದು ಗಣನೀಯ ಏರಿಕೆಯಾಗಿರುವುದರಿಂದ ಪ್ರಕಾಶಕರು ಪುಸ್ತಕ ಪ್ರಕಟಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅಂತಿಮವಾಗಿ ನಷ್ಟವಾಗುವುದು ಸೃಜನಶೀಲ ಸಾಹಿತಿಗಳಿಗೆ ಮತ್ತು ಕೊಂಕಣಿ ಸಾಹಿತ್ಯಕ್ಕೆ. ಸಾಹಿತಿ ಮತ್ತು ಪ್ರಕಾಶಕರಿಗೆ ಮುದ್ರಣ ವೆಚ್ಚವನ್ನು ಭರಿಸುವುದು ತೊಡಕಾಗಬಾರದು ಎಂಬ ದೃಷ್ಟಿಯಿಂದ ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಮುಂದಿನ ಐದು ವರ್ಷಗಳಲ್ಲಿ ನೂರು ಪುಸ್ತಕ ಮುದ್ರಿಸುವ ಗುರಿಯನ್ನು ಇಟ್ಟುಕೊಂಡು ಅನುದಾನ ನೀಡಲಾಗುವುದು. ಈ ಗುರಿ ತಲುಪುವಲ್ಲಿ ವಿಶ್ವದ ಮೇರು ಕೊಂಕಣಿ ಸಂಸ್ಥೆ, ವಿಶ್ವ ಕೊಂಕಣಿ ಕೇಂದ್ರ ಸಾಂಸ್ಥಿಕ ಬೆಂಬಲ ನೀಡಿ ಸಹಕರಿಸಲಿದೆ. ಕೊಂಕಣಿ ಸಾಹಿತಿಗಳು ಮತ್ತು ಪ್ರಕಾಶಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಕಲ್ ಡಿಸೋಜಾ ಅಭಿಪ್ರಾಯಪಟ್ಟರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಮಾತನಾಡಿ "ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಸಮಗ್ರವಾಗಿ ಬೆಳೆಯಬೇಕಾದರೆ ಎಲ್ಲರನ್ನೂ ಒಳಗೊಳ್ಳುವ ಸಮಷ್ಟಿ ಭಾವ ಮುಖ್ಯ. ಕೇಂದ್ರದ ಸ್ಥಾಪಕ ಬಸ್ತಿ ವಾಮನ್ ಶೆಣೈ ಅವರು ನಮಗೆ ಸಮಷ್ಟಿ ಭಾವವನ್ನು ಬಳುವಳಿಯಾಗಿ ಕೊಟ್ಟಿದ್ದಾರೆ. ಅವರು ನಮ್ಮ ಪ್ರತೀ ಹೆಜ್ಜೆಗೆ ಪ್ರೇರಣೆ ಎಂದರು.
ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಟ್ರಸ್ಟಿ - ಕವಿ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ| ಬಿ. ದೇವದಾಸ ಪೈ, ಡಾ| ಬಿ. ದೇವದಾಸ ಪೈ, ವಿಶ್ವ ಕೊಂಕಣಿ ಕೇಂದ್ರದ ಸಂಯೋಜಕಿ ಸಹನಾ ಕಿಣಿ, ಕವಿ, ಚಿಂತಕ ಟೈಟಸ್ ನೊರೊನ್ಹಾ, ಹಿರಿಯ ರಂಗಕರ್ಮಿ ಎಡ್ಡಿ ಸಿಕ್ವೇರಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಕೋಶಾಧಿಕಾರಿ ರೋಶನ್ ಮಾಡ್ತಾ ಹಾಗೂ ನಾಸಿರ್ ಉಪಸ್ಥಿತರಿದ್ದರು.
ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗುರುದತ್ತ ಬಂಟ್ವಾಳಕಾರ್ ಸ್ವಾಗತಿಸಿದರು. ವಿಶನ್ ಕೊಂಕಣಿ ಯೋಜನೆಯ ಪ್ರಧಾನ ಸಂಪಾದಕ ಎಚ್ಚೆಮ್ ಪೆರ್ನಾಲ್ ಯೋಜನೆಯ ರೂಪು ರೇಷೆಗಳ ಬಗ್ಗೆ ವಿವರಿಸಿದರು. ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ.ಆರ್. ಭಟ್ ವಂದಿಸಿದರು.
ಏನಿದು ವಿಶನ್ ಕೊಂಕಣಿ ?
ಕೊಂಕಣಿ ಪುಸ್ತಕಗಳ ಪ್ರಕಾಶನಕ್ಕೆ ಅನುದಾನ ಯೋಜನೆಯೇ ವಿಶನ್ ಕೊಂಕಣಿ. ಯೋಜನೆಯ ಅವಧಿ : 5 ವರ್ಷ, ಗುರಿ : 100 ಪುಸ್ತಕ, ಅಂದಾಜು ವೆಚ್ಚ : ಸುಮಾರು 40 ಲಕ್ಷ, ಯಾರು ಅರ್ಹರು : ಸೃಜನಶೀಲ ಬರಹಗಾರರು, ಸಾಹಿತ್ಯ ಪ್ರಕಾರ : ಕತೆ - ಕಾದಂಬರಿ, ಕವಿತೆ, ಪ್ರಬಂಧ, ನಾಟಕ ಕೃತಿ ಇತ್ಯಾದಿ. ಅನುದಾನ ಪ್ರಕ್ರಿಯೆ: ಆಯ್ಕೆ ಸಮಿತಿಯ ಅವಗಾಹನೆಗೆ ಸಲ್ಲಿಸಲು ನಿಯತಕಾಲಿಕವಾಗಿ ಹಸ್ತ ಪ್ರತಿಗಳನ್ನು ಆಹ್ವಾನಿಸಲಾಗುವುದು ಎಂದು ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.
World Konkani Centre on Thursday entered into a Memorandum of Understanding (MoU) with Michael D’Souza, Dubai-based NRI entrepreneur, philanthropist and patron of the Centre to provide publication grants to 100 Konkani books.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm