ಬ್ರೇಕಿಂಗ್ ನ್ಯೂಸ್
15-12-22 10:46 pm Mangalore Correspondent ಕರಾವಳಿ
ಮಂಗಳೂರು, ಡಿ.15: ಪಚ್ಚನಾಡಿ ಗ್ರಾಮದ ಕಾರ್ಮಿಕ ನಗರದ ಸರ್ವೆ ನಂಬರ್ 158ರಲ್ಲಿ ಎರಡು ಎಕರೆ ಸರಕಾರಿ ಭೂಮಿಯಿದ್ದು, ಸ್ಥಳೀಯ ಕಾರ್ಪೊರೇಟರ್ ಸಂಗೀತಾ ನಾಯಕ್ ಮತ್ತು ಆಕೆಯ ಪತಿ ರವೀಂದ್ರ ನಾಯಕ್ ಸೇರಿ ಆ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಸ್ಥಳೀಯರು ಆಟವಾಡಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸುತ್ತಿದ್ದ ಜಾಗವನ್ನು ಇವರು ತಮಗೆ ಬೇಕಾದವರಿಗೆ ಮಾರಾಟ ಮಾಡಲು ಮುಂದಾಗಿದ್ದನ್ನು ಖಂಡಿಸುತ್ತೇವೆ ಎಂದು ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವ ಹೇಳಿದ್ದಾರೆ.
ಸದ್ರಿ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಾಣಕ್ಕೆ ಗುರುತು ಹಾಕಲಾಗಿದೆ. ಸ್ಥಳೀಯರು ಇದಕ್ಕೆ ಆಕ್ಷೇಪಿಸಿದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸರಕಾರಿ ಜಾಗವೆಂದು ಹೇಳಿದ್ದರೂ, ರಾತ್ರಿ ವೇಳೆ ಕಾರ್ಪೊರೇಟರ್ ಗಂಡ ಸ್ಥಳಕ್ಕೆ ಬಂದು ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ತಡೆಯಲು ಬಂದ ಸಾರ್ವಜನಿಕರ ಜೊತೆ ಗೂಂಡಾ ರೀತಿ ವರ್ತಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವರ್ತನೆಯನ್ನು ಕಾಣಬಹುದು.
ಒಂದು ಕಡೆ ಕಾರ್ಪೊರೇಟರ್ ಸಂಗೀತಾ ನಾಯಕ್, ಸದ್ರಿ ಜಾಗವನ್ನು ಕುಮ್ಕಿ ಜಾಗವೆಂದು ಹೇಳುತ್ತಾರೆ. ಕುಮ್ಕಿ ಆಗಿದ್ದರೆ, ಸ್ಥಳೀಯ ವ್ಯಕ್ತಿಗಳ ಖಾಸಗಿ ವರ್ಗ ಜಾಗಕ್ಕೆ ಸೇರುವಂಥದ್ದು. ಆ ಜಾಗದ ಹಕ್ಕುದಾರ ಖಾಸಗಿ ವ್ಯಕ್ತಿ ಮಾತ್ರ ಆಗಿರುತ್ತಾನೆ. ಅದನ್ನು ಸರಕಾರ ಸಾರ್ವಜನಿಕ ಬಳಕೆಗೆ ಪರಭಾರೆ ಮಾಡುವುದಾದರೆ, ಮಹಾನಗರ ಪಾಲಿಕೆ ವಶಕ್ಕೆ ಪಡೆದು ಕಂದಾಯ ಭೂಮಿಯೆಂದು ಘೋಷಣೆ ಮಾಡಬೇಕು. ಸರಕಾರಿ ಜಾಗವೆಂದು ಘೋಷಿಸಿ ಮನೆ ರಹಿತರಿಗೆ ನೀಡುವ ಕ್ರಮ ಆಗಬೇಕು. ಆದರೆ, ಅದ್ಯಾವುದೇ ಕೆಲಸ ಆಗದೇ ರಾತ್ರೋರಾತ್ರಿ ಬಂದು ಸರಕಾರಿ ಜಾಗದಲ್ಲಿ ಹಕ್ಕುದಾರಿಕೆ ತೋರುವುದು ಸರಿಯಲ್ಲ. ಎರಡು ಎಕರೆ ಭೂಮಿಯನ್ನು ಸೂಕ್ತವಾಗಿ ಬಳಸಿದರೆ, 400 ಮಂದಿಗೆ ವಸತಿ ನೀಡಲು ಸಾಧ್ಯವಿದೆ. ಇವರು ಯಾರೋ ತಮಗೆ ಬೇಕಾದವರಿಗೆ, ಹಣ ಪಡೆದು ನಿವೇಶನ ನೀಡಲು ತೊಡಗಿದರೆ ಅದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಮೊಯ್ದೀನ್ ಬಾವ ಹೇಳಿದರು.
ಈ ಬಗ್ಗೆ ಸ್ಥಳೀಯರ ಪ್ರತಿಭಟನೆಗೆ ಕಾಂಗ್ರೆಸ್ ಸಹಕಾರ ನೀಡುವುದಲ್ಲದೆ, ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗುವುದು. ಮಹಾನಗರ ಪಾಲಿಕೆಗೂ ದೂರು ನೀಡುತ್ತೇವೆ. ಸರಕಾರಿ ಜಾಗವನ್ನು ಅಕ್ರಮ ಪರಭಾರೆ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಉಮೇಶ್ ದಂಡಕೇರಿ ಸೇರಿದಂತೆ ಪಚ್ಚನಾಡಿ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.
Former legislator and Congress leader Moideen Bhawa alleged that government sites were being allotted illegally in the labourers colony by the local corporator's husband.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm