ಬ್ರೇಕಿಂಗ್ ನ್ಯೂಸ್
18-11-22 05:47 pm Mangalore Correspondent ಕರಾವಳಿ
ಉಳ್ಳಾಲ, ನ.18 : ವಿಪರೀತ ಕುಡಿತದ ಚಟ ಮತ್ತು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಯುವ ಭಾಗವತನೊಬ್ಬ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇರಾ ಗ್ರಾಮದ ಮೂಳೂರು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಯುವ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು (39) ಆತ್ಮಹತ್ಯೆಗೈದ ದುರ್ದೈವಿ. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಶಿಷ್ಯರಾಗಿದ್ದ ಕೀರ್ತನ್ ಶೆಟ್ಟಿ ಭಾಗವತರಾಗಿ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ಇತ್ತೀಚಿನ ದಿನಗಳಲ್ಲಿ ಕುಡಿತದ ಚಟವನ್ನ ಮೈಗಂಟಿಸಿಕೊಂಡಿದ್ದರು. ವಿವಾಹಿತರಾಗಿದ್ದ ಕೀರ್ತನ್ ಶೆಟ್ಟಿಯವರಿಗೆ ಪತ್ನಿ, ಅವಳಿ ಗಂಡು ಮಕ್ಕಳಿದ್ದು ಕಳೆದ ಕೆಲವು ವರ್ಷಗಳಿಂದ ಮಾನಸಿಕವಾಗಿ ಖಿನ್ನತೆ ಹೊಂದಿದ್ದರು ಎನ್ನಲಾಗಿದೆ. ಬಪ್ಪನಾಡು ಸೇರಿದಂತೆ ಕೆಲವೊಂದು ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕೀರ್ತನ್ ಶೆಟ್ಟಿ ಮೂಲತಃ ವಗೆನಾಡಿನವರಾಗಿದ್ದು ನಾಲ್ಕು ವರ್ಷಗಳ ಹಿಂದೆ ಇರಾ ಕುಂಡಾವು ಬಳಿ ಸ್ಥಳ ಖರೀದಿಸಿ ಮನೆ ಕಟ್ಟಿ ಪತ್ನಿ ಮಕ್ಕಳ ಜತೆ ಅಲ್ಲಿಯೇ ವಾಸಿಸುತ್ತಿದ್ದರು.

ಆದರೆ ಕೌಟುಂಬಿಕ ಸಮಸ್ಯೆಯಿಂದ ಕೀರ್ತನ್ ಶೆಟ್ಟಿ ಮೂಳೂರಿನ ಬಾಡಿಗೆ ಮನೆಯೊಂದರಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು. ಕುಡಿತದ ಚಟದಿಂದಾಗಿ ಇತ್ತೀಚೆಗೆ ಪ್ರಸಿದ್ಧ ಮೇಳಗಳಲ್ಲಿ ಅವಕಾಶ ಸಿಗದೇ ಇದ್ದುದರಿಂದ ಮಕ್ಕಳ ಮೇಳಗಳಲ್ಲಿ ಸೇವೆ ನೀಡುತ್ತಿದ್ದರು. ಈ ಬಾರಿಯ ತಿರುಗಾಟಕ್ಕೆ ಮೇಳಗಳು ಸಿದ್ಧತೆ ನಡೆಸಿದ್ದು ಪ್ರಸಿದ್ಧ ಮೇಳಗಳಲ್ಲಿ ಅವಕಾಶ ಸಿಗದೇ ಇದ್ದರಿಂದ ನೊಂದಿದ್ದರು ಎನ್ನಲಾಗಿದೆ. ಕಳೆದ ವರ್ಷ ನೂತನ ಮೇಳವೊಂದಕ್ಕೆ ಆಯ್ಕೆಯಾಗಿದ್ದರೂ ಕೇವಲ ಎರಡು ಬಾರಿ ಮಾತ್ರ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತ್ತು. ಮೇಳದಲ್ಲಿ ಭಾಗವತಿಕೆ ನಡೆಸುತ್ತಿದ್ದಾಗಲೂ ಕಂಬ್ಳಪದವು ಸಮೀಪ ರಬ್ಬರ್ ಟ್ಯಾಪಿಂಗ್ ಗಾಗಿ ತಡರಾತ್ರಿ ಮೂರು ಗಂಟೆಯಿಂದ ಆರು ಗಂಟೆ ತನಕ ದುಡಿಯುತ್ತಿದ್ದರು.

ಮೇಳಗಳಲ್ಲಿ ಮೊದಲ ಭಾಗವತಿಕೆಗೆ ಅವಕಾಶ ಕೇಳುತ್ತಿದ್ದು ಅವಕಾಶ ಸಿಕ್ಕರೂ ಕುಡಿತದ ಚಟದಿಂದಾಗಿ ಮೇಳದ ಸಂಚಾಲಕರು ಮತ್ತೆ ತಮ್ಮ ಮೇಳಕ್ಕೆ ಸೇರಿಸುತ್ತಿರಲಿಲ್ಲ ಎಂಬ ಆರೋಪ ಇದೆ. ಹಾಗಿದ್ದರೂ ಬಪ್ಪನಾಡು ಮೇಳದ ಎವರ್ ಗ್ರೀನ್ ಪ್ರಸಂಗ "ಬನತ ಬಂಗಾರ್" ಪ್ರದರ್ಶನ ನೀಡುತ್ತಿದ್ದ ಸಂದರ್ಭ ಗಿರೀಶ್ ರೈ ಕಕ್ಕೆಪದವಿಗೆ ಅಪಘಾತವಾದಾಗ ಆ ದಿನಗಳಲ್ಲಿ ಆ ಸ್ಥಾನವನ್ನು ಕೀರ್ತನ್ ಶೆಟ್ಟಿ ತುಂಬಿದ್ದರು. ಸುಮಧುರ ಕಂಠ ಸಿರಿಯಿಂದ ಯಕ್ಷಗಾನ ಕಲಾಪ್ರೇಕ್ಷಕರ ಮನಸ್ಸನ್ನೂ ಗೆದ್ದಿದ್ದರು. ಯುವ ಭಾಗವತನ ದುರಂತ ಸಾವು ಯಕ್ಷಗಾನ ಕಲಾಪ್ರೇಕ್ಷಕರಿಗೆ ನಷ್ಟ ಉಂಟುಮಾಡಿದೆ. ಕೊಣಾಜೆ ಠಾಣೆಯಲ್ಲಿ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಾಗಿದೆ.
Ullal Financial crises 41 year old Yuva Bagawata Keerthan Shetty commits suicide in Mangalore. He was mentally disturbed due to family issues.
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm