ಬ್ರೇಕಿಂಗ್ ನ್ಯೂಸ್
14-06-22 01:34 pm Mangalore Correspondent ಕರಾವಳಿ
ಮಂಗಳೂರು, ಜೂನ್ 14: ಮಂಗಳೂರು ನಗರದಲ್ಲಿ ಏಂಟಿ ಟೆರರಿಸಂ ಸ್ಕ್ವಾಡ್ ಅನ್ನುವ ಹೊಸ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯಿಂದ ಆಯ್ದ 35 ಸಿಬಂದಿಯನ್ನು ಬೆಂಗಳೂರಿನಲ್ಲಿ ವಿಶೇಷ ತರಬೇತುಗೊಳಿಸಿ ಭಯೋತ್ಪಾದಕ ವಿರೋಧಿ ದಳವನ್ನು ಹೊಸತಾಗಿ ರಚಿಸಲಾಗಿದೆ.
ಪ್ರತೀ ಜಿಲ್ಲೆಯಲ್ಲಿ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯುಆರ್ ಟಿ) ಅನ್ನುವ ವಿಭಾಗ ಇದೆ. ಸಿಎಆರ್ ಯೂನಿಟ್ ನಲ್ಲಿರುವ ಈ ಸಿಬಂದಿಯನ್ನು ಬೆಂಗಳೂರಿನಲ್ಲಿ ವಿಶೇಷ ತರಬೇತಿಗೆ ಕಳಿಸಲಾಗುತ್ತದೆ. ಕ್ವಿಕ್ ರೆಸ್ಪಾನ್ಸ್ ಟೀಮ್ ಸೇರಬೇಕಿದ್ದಲ್ಲಿ ಬೆಂಗಳೂರಿನ ಕೂಡ್ಲು ಎಂಬಲ್ಲಿ ಸೆಂಟರ್ ಫಾರ್ ಕೌಂಟರ್ ಟೆರರಿಸಂ (ಸಿಸಿಟಿ) ಅನ್ನುವ ಘಟಕದಲ್ಲಿ ತರಬೇತು ಪಡೆಯಬೇಕು. ಪ್ರತಿ ವರ್ಷ ಈ ರೀತಿಯ ತರಬೇತಿಗೆ 30 ಸಿಬಂದಿಯನ್ನು ಕಳಿಸಲಾಗುತ್ತದೆ. ಈ ಬಾರಿ ಮಂಗಳೂರಿನ ಸಿಎಆರ್ ವಿಭಾಗದಿಂದ 35 ಮಂದಿ ತರಬೇತಿ ಪಡೆದು ಬಂದಿದ್ದಾರೆ ಎಂದು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಉಪಾಯುಕ್ತ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ನಗರ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆಯಾದಲ್ಲಿ ಹೇಗೆ ಎದುರಿಸಬೇಕು, ಜನರ ಮಧ್ಯೆ ಕಾರ್ಯ ನಿರ್ವಹಿಸುವುದು ಹೇಗೆ ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ ಸಶಸ್ತ್ರ ಬಳಕೆ ಬಗ್ಗೆ ಅವರಿಗೆ ತರಬೇತಿ ನೀಡಲಾಗುವುದು ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ತರಬೇತಿ ಮುಗಿಸಿ ಬಂದ 35 ಮಂದಿಯಿಂದ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಗೌರವ ವಂದನೆ ಸ್ವೀಕರಿಸಿದರು. ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಮಾಹಿತಿ ಪ್ರಕಾರ, ಈ ಹಿಂದೆ ಇದ್ದ ಕ್ವಿಕ್ ರೆಸ್ಪಾನ್ಸ್ ತಂಡವನ್ನೇ ಸಿಸಿಟಿ ಎಂದು ಹೆಸರಿಸಲಾಗುತ್ತದೆ. ಹೊಸ ತಂಡಕ್ಕೆ ಸುಬ್ರಹ್ಮಣ್ಯ ಎಂ. ಚೀಫ್ ಆಗಿರುತ್ತಾರೆ. ತಲಾ 15 ಮಂದಿಯ ಎರಡು ತಂಡ ಇರುತ್ತದೆ. ಐದು ಜನ ಹೆಚ್ಚುವರಿ ಸಿಬಂದಿ ಇರುತ್ತಾರೆ. ಸಾಮಾನ್ಯವಾಗಿ ವಿಐಪಿಗಳು, ಮುಖ್ಯಮಂತ್ರಿ ಬರುವ ಸಂದರ್ಭದಲ್ಲಿ ಇವರನ್ನು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ. ಇವರಿಗೆ ಪ್ರತ್ಯೇಕ ಸಮವಸ್ತ್ರವೂ ಇರುತ್ತದೆ.
City anti-terrorism squad under the internal security department is ready to serve the city as well as the limits of commissionerate. The team has 35 police personnel. The team undertook two months of training at Centre for Counter Terrorism (CCT) at Koodlu of Bengaluru.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
23-06-25 04:37 pm
HK News Desk
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
23-06-25 11:47 am
Udupi Correspondent
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm