ಬ್ರೇಕಿಂಗ್ ನ್ಯೂಸ್
11-06-22 10:34 am Mangalore Correspondent ಕರಾವಳಿ
ಬಂಟ್ವಾಳ, ಜೂನ್ 11: ಇತ್ತೀಚೆಗೆ ಬಂಟ್ವಾಳ ತಾಲೂಕಿನ ಚೆಂಡ್ತಿಮಾರ್ ಎಂಬಲ್ಲಿ ನಡೆದ ಅಪಘಾತದಲ್ಲಿ 2 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಇದೀಗ ಅಪಘಾತಕ್ಕೊಳಗಾದ ಕಾರಿನ ಡ್ಯಾಶ್ ಬೋರ್ಡ್ ಒಳಗಡೆ ನಗದು ಇದ್ದ ಪ್ಯಾಕೆಟ್ ಪತ್ತೆಯಾಗಿದ್ದು, ಅದನ್ನು ಬಂಟ್ವಾಳ ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಮಡಂತ್ಯಾರಿನಲ್ಲಿ ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದ ರೋಶನ್ ಸೆರಾವೋ ಪ್ರಯಾಣಿಸುತ್ತಿದ್ದ ಕಾರು ಜೂನ್ 1ರಂದು ಟ್ಯಾಂಕರ್ ಡಿಕ್ಕಿಯಾಗಿ ಅಪಘಾತವಾಗಿತ್ತು. ಘಟನೆಯಲ್ಲಿ ರೋಶನ್ ಸೆರಾವೋ ಸ್ಥಳದಲ್ಲೇ ಸಾವು ಕಂಡಿದ್ದರು. ಆದರೆ ರೋಶನ್ ಸೆರಾವೋ ಮುನ್ನಾ ದಿನದ ಎರಡು ಲಕ್ಷ ರೂಪಾಯಿ ಕ್ಯಾಟರಿಂಗ್ ವ್ಯವಹಾರದ ಕಲೆಕ್ಷನ್ ಹಣವನ್ನು ಪಡೆದು ಕಾರಿನಲ್ಲಿ ಹಿಂತಿರುಗುತ್ತಿದ್ದರು. ಅಪಘಾತದ ಬಳಿಕ ಹಣ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ತನಿಖೆ ಆರಂಭಗೊಂಡಿತ್ತು. ಮೊದಲಿಗೆ, ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ತಪಾಸಣೆ ನಡೆಸಲಾಗಿತ್ತು. ಕಾರಿನಲ್ಲಿ ಡ್ಯಾಶ್ ಬೋರ್ಡ್ ನೋಡಿದರೆ ಹಣದ ಬ್ಯಾಗ್ ಕಾಣಿಸಿರಲಿಲ್ಲ. ಅಪಘಾತ ನಡೆದಿದ್ದ ಸಂದರ್ಭದಲ್ಲಿಯೂ ಪೊಲೀಸರು ಮತ್ತು ಕುಟುಂಬಸ್ಥರು ಕಾರಿನಲ್ಲಿ ತಪಾಸಣೆ ನಡೆಸಿದ್ದರು. ಹಣ ಮತ್ತು ದಾಖಲೆ ಪತ್ರಗಳಿದ್ದ ಬ್ಯಾಗ್ ಪತ್ತೆಯಾಗಿರಲಿಲ್ಲ. ಪೊಲೀಸರು ನುರಿತ ಮೆಕ್ಯಾನಿಕ್ ಕರೆಸಿ ಕಾರಿನಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಅದೇ ಡ್ಯಾಶ್ ಬೋರ್ಡ್ ಒಳಗಡೆ ಹಣದ ಬ್ಯಾಗ್ ಪತ್ತೆಯಾಗಿದೆ.
ಹೊಸ ರೀತಿಯ ಆಧುನಿಕ ಕಾರುಗಳಲ್ಲಿ ಅಪಘಾತವಾದೊಡನೆ, ಡ್ಯಾಶ್ ಬೋರ್ಡ್ ಡ್ರಾವರ್ ಫೋಲ್ಡ್ ಆಗುವಂತಿದ್ದು, ಅದೇ ರೀತಿ ಹಣದ ಬ್ಯಾಗ್ ಇದ್ದುದು ಒಳಗಡೆ ಹೋಗಿತ್ತು. ಮೆಕ್ಯಾನಿಕ್ ತಪಾಸಣೆ ನಡೆಸಿದಾಗ ಡ್ಯಾಶ್ ಬೋರ್ಡಿನ ಇನ್ನೊಂದು ಫೋಲ್ಡರಲ್ಲಿ ಬ್ಯಾಗ್ ಕಂಡುಬಂದಿತ್ತು. ಮೇಲ್ನೋಟಕ್ಕೆ ಬ್ಯಾಗ್ ಕಾಣಿಸದೇ, ಡ್ಯಾಶ್ ಬೋರ್ಡ್ ಕೂಡ ಖಾಲಿಯಾಗಿ ಕಾಣಿಸುವುದು ಇದರ ವಿಶೇಷ.
A few days ago, it was said that Rs 2.03 lac cash that was kept in the car, which met with accident at Chanditmar of taluk, went missing from the vehicle. It is found that the cash is in fact intact inside the dashboard drawer of the car and the same was handed over to the family members.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
14-11-25 03:34 pm
Mangalore Correspondent
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
14-11-25 11:16 am
Mangalore Correspondent
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm