ಬ್ರೇಕಿಂಗ್ ನ್ಯೂಸ್
05-06-22 09:08 pm Mangalore Correspondent ಕರಾವಳಿ
ಬಂಟ್ವಾಳ, ಜೂನ್ 5 : ಕನ್ಯಾನ ಬಳಿಯ ಕಣಿಯೂರು ಎಂಬಲ್ಲಿ ಜೆಸಿಬಿ ಚಾಲಕನ ಧಾವಂತಕ್ಕೆ ಸೈಕಲ್ ಚಲಾಯಿಸುತ್ತಿದ್ದ ಬಾಲಕ ದುರಂತ ಸಾವು ಕಂಡ ಘಟನೆ ನಡೆದಿದೆ.
ಕನ್ಯಾನದಿಂದ ಕಣಿಯೂರಿಗೆ ಬರುತ್ತಿದ್ದ ಜೆಸಿಬಿ, ಸೈಕಲಿನಲ್ಲಿ ತೆರಳುತ್ತಿದ್ದ ಅಖಿಲ್ ಎಂಬ 13 ವರ್ಷದ ಬಾಲಕನ ಮೇಲೆ ಹರಿದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವು ಕಂಡಿದ್ದು ಇದನ್ನು ನೋಡಿ ಗಾಬರಿಯಾದ ಚಾಲಕ ಸೈಕಲನ್ನು ಎತ್ತಿ ಬದಿಗಿಟ್ಟು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ನೋಡಿದ್ದು ಜೆಸಿಬಿ ಚಲಾಯಿಸುತ್ತಿದ್ದ ಗದಗ ಜಿಲ್ಲೆಯ ಮೂಲದ ಸಾದಿಕ್ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಬಳಿಕ ವಿಷಯ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಬಂದಿದ್ದು ಜೆಸಿಬಿ ಮತ್ತು ಆರೋಪಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಚಾಲಕ ನಶೆಯಲ್ಲಿದ್ದ ಎನ್ನಲಾಗುತ್ತಿದ್ದು ಅದರಿಂದಾಗಿ ಬಾಲಕನ ನೋಡದೆ ಜೆಸಿಬಿ ಚಲಾಯಿಸಿಕೊಂಡು ಬಂದಿದ್ದ. ಸೈಕಲ್ ಟೈರ್ ಸಹಿತ ಪುಡಿ ಪುಡಿಯಾಗಿದ್ದು ಬಾಲಕನೂ ಅಪ್ಪಚ್ಚಿಯಾಗಿ ರಸ್ತೆ ಬದಿಗೆ ಬಿದ್ದಿದ್ದ. ವಿಟ್ಲ ಪೊಲೀಸರು ಜೆಸಿಬಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
A JCB ran over a cyclist driven by a small boy and killed him on the spot in Kaniyooru of Kanyan. The JCB was on its way to Kaniyooru as it was employed for carrying out works at an industrialist's house. The driver of the JCB was said to be under the influence of alcohol. The deceased boy has been identified as Mohammed Akhil, son of Hasainaar, resident of Kaniyooru.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
19-09-26 03:37 pm
HK News Staffer
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
19-09-26 10:11 am
HK News Staffer
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am