ಬ್ರೇಕಿಂಗ್ ನ್ಯೂಸ್
14-04-22 10:06 pm Source: Vijayakarnataka ಡಾಕ್ಟರ್ಸ್ ನೋಟ್
ಭಾರತೀಯ ಆಹಾರ ಪದ್ಧತಿಯ ಊಟದಲ್ಲಿ ವಿವಿಧ ಬಗೆಯ ಪದಾರ್ಥಗಳನ್ನು ಮಾಡುತ್ತಾರೆ. ಅದರಲ್ಲಿ ಹಪ್ಪಳ ಕೂಡ ಒಂದು. ಕೆಲವು ವಿಶೇಷ ಸಂದರ್ಭಗಳಲ್ಲಿ ಹಪ್ಪಳವಿಲ್ಲದೆ ಊಟವೇ ಮುಗಿಯುವುದಿಲ್ಲ. ಅದರಲ್ಲೇ ಹಲವು ರೀತಿಯ ವಿಧಗಳೂ ಇವೆ. ಮಸಾಲೆ ಹಪ್ಪಳ, ಖಾರದ ಹಪ್ಪಳ, ಸಿಹಿ ಹಪ್ಪಳ ಇತ್ಯಾದಿ, ಇನ್ನೂ ಹಳ್ಳಿಗಳಲ್ಲಿ ಹಲಸಿನ ಕಾಯಿ ಹಪ್ಪಳ, ಬೇರು ಹಲಸಿನ ಹಪ್ಪಳ, ಬಾಳೆಕಾಯಿ ಹಪ್ಪಳ ಹೀಗೆ ತರಹೇವಾರಿ ವಿಧಗಳನ್ನು ಕಾಣಬಹುದು. ಬಾಣೆಲೆಯಲ್ಲಿ ಕಾದ ಎಣ್ಣೆಯಲ್ಲಿ ಹಾಕಿ ತೆಗೆದರೆ ಗರಿ ಗರಿ ಹಪ್ಪಳ ತಿನ್ನಲು ಸಿದ್ಧ.
ಊಟದೊಂದಿಗೆ ಹಪ್ಪಳ ಸೇವಿಸಿದರೆ ಅದರ ರುಚಿಯೇ ಬೇರೆ. ಆದರೆ ಈ ರೀತಿ ಕರಿದ ಹಪ್ಪಳವನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನೀವು ನಂಬಲೇಬೇಕು. ಹೌದು. ಎಣ್ಣೆಯಲ್ಲಿ ಕರಿದ ಪದಾರ್ಥಗಳ ನಿಯಮಿತ ಸೇವನೆಯಿಂದ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಆದರೆ ಹಪ್ಪಳವನ್ನು ತಿನ್ನುವುದರಿಂದ ಯಾವೆಲ್ಲಾ ಅನಾರೋಗ್ಯ ಕಾಡಬಹುದು ಅಂತೀರಾ ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ.
ಮಸಾಲೆ ಪದಾರ್ಥಗಳ ಬಳಕೆಯಿಂದ ಹಾನಿ
ಕೆಲವು ಮಸಾಲೆಯುಕ್ತ ಹಪ್ಪಳಗಳು ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅಷ್ಟೇ ಹಾನಿಯನ್ನು ಉಂಟು ಮಾಡುತ್ತವೆ. ಮಸಾಲೆಯುಕ್ತ ಹಪ್ಪಳಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗಿ ಆಸಿಡಿಟಿ ಮತ್ತು ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳು ಬರುತ್ತವೆ. ಅದರಲ್ಲೂ ಹಸಿದ ಹೊಟ್ಟೆಯಲ್ಲಿ ಕರಿದ ಪದಾರ್ಥಗಳ ಸೇವನೆ ಕೆಟ್ಟದ್ದೇ. ಹೀಗಾಗಿ ಮಸಾಲೆಯುಕ್ತ ಹಪ್ಪಳಗಳು ಹೊಟ್ಟೆಯ ಸಮಸ್ಯೆಗಳಿಗೆ ಖಂಡಿತವಾಗಲೂ ಕಾರಣವಾಗುತ್ತವೆ. ಹೀಗಾಗಿ ರುಚಿಯಾಗಿದೆ ಎಂದು ಹಪ್ಪಳಗಳನ್ನು ತಿನ್ನುವ ಮುನ್ನ ಯೋಚಿಸಿಕೊಳ್ಳಿ.
ಅತಿಯಾದ ಉಪ್ಪು ದೇಹದ ಮೇಲೆ ಹಾನಿ ಮಾಡುತ್ತದೆ
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಮಸಾಲೆಯುಕ್ತ ಹಪ್ಪಳಗಳಲ್ಲಿ ಉಪ್ಪಿನ ಪ್ರಮಾಣ ಅಧಿಕವಾಗಿರುತ್ತದೆ. ಇದನ್ನು ತಿಂದಾಗ ದೇಹದಲ್ಲಿ ಸೋಡಿಯಂ ಅಂಶ ಜಾಸ್ತಿಯಾಗಿ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಲ್ಲದೆ ಹೆಚ್ಚು ಉಪ್ಪಿನ ಪದಾರ್ಥಗಳ ಸೇವನೆಯಿಂದ ಬಾಯಾರಿಕೆಯೂ ಅಧಿಕವಾಗುತ್ತದೆ. ನಿಯಮಿತವಾಗಿ ಹೆಚ್ಚು ಉಪ್ಪು ಮತ್ತು ಉಪ್ಪಿನ ಪದಾರ್ಥಗಳ ಸೇವನೆಯಿಂದ ಮೂಳೆಗಳ ಬಲವೂ ಕಡಿಮೆಯಾಗುತ್ತದೆ ಜೊತೆಗೆ ದೇಹದಲ್ಲಿ ಶಕ್ತಿಯೂ ಕುಂದುತ್ತದೆ. ಆದ್ದರಿಂದ ಮಾಸಾಲೆಯುಕ್ತ ಹಪ್ಪಳಗಳನ್ನು ತಿನ್ನುವ ಮುನ್ನ ಕೊಂಚ ಎಚ್ಚರಿಕೆಯಿರಲಿ.
ಎಣ್ಣೆಯಿಂದ ಹಾನಿ
ಹಪ್ಪಳ ಕರಿಯಲು ಎಣ್ಣೆಯನ್ನು ಬಳಸಲಾಗುತ್ತದೆ. ಹಪ್ಪಳ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಅದನ್ನು ಸೇವಿಸಿದಾಗ ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾಗುತ್ತದೆ. ಅಲ್ಲದೆ ಮರು ಬಳಕೆಯ ಎಣ್ಣೆ ಬಳಸಿ ಹಪ್ಪಳವನ್ನು ಕರಿದಾಗ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಪಕ್ಕಾ. ಹೆಚ್ಚು ಎಣ್ಣೆ ದೇಹಕ್ಕೆ ಸೇರಿ ಗಂಟಲಿನಲ್ಲಿ ಇನ್ಫೆಕ್ಷನ್, ಹೊಟ್ಟೆ ಭಾಗದಲ್ಲಿ ಬೊಜ್ಜು ಸೇರಿದಂತೆ ಮಧುಮೇಹ ಹಾಗೂ ಹೃದಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಹಪ್ಪಳಗಳನ್ನು ಖರೀದಿಸಿ ರುಚಿ ನೋಡುವ ಬದಲು ಮನೆಯಲ್ಲಿಯೇ ನೈಸರ್ಗಿಕ ಉತ್ಪನ್ನಗಳಿಂದ ಹಪ್ಪಳ ತಯಾರಿಸಿ ಸೇವಿಸಿ. ಆಗ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತದೆ.
ಮಲಬದ್ಧತೆ ಸಮಸ್ಯೆ
ಅರೇ ಹಪ್ಪಳದ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಾಡುವುದಾದರೂ ಹೇಗೆ ಎನ್ನುತ್ತೀರಾ? ಹೌದು, ಮಾರುಕಟ್ಟೆಯಲ್ಲಿ ಸಿಗುವ ಮಸಾಲೆ ಹಪ್ಪಳಗಳಿಗೆ ಅಲ್ಪ ಪ್ರಮಾಣದ ಮೈದಾ ಮಿಶ್ರಣವಾಗಿರುತ್ತದೆ. ಇದೇ ಕಾರಣಕ್ಕೆ ಹಪ್ಪಳವನ್ನು ಕರಿದು ತಿಂದಾಗ ಒಂಥರಾ ಹಿಟ್ಟನ್ನು ತಿಂದ ಅನುಭವವಾಗುತ್ತದೆ. ಈ ರೀತಿ ಆಹಾರವನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಜೀರ್ಣವಾಗದೆ ಹಾಗೆಯೇ ಉಳಿದು ಬಿಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಅಜೀರ್ಣತೆ ಉಂಟಾಗಿ ಹೊಟ್ಟೆನೋವು ಕೂಡ ಕಾಡುವ ಸಾಧ್ಯತೆ ಅಧಿಕವಾಗಿರುತ್ತದೆ. ಇದೇ ಕಾರಣದಿಂದ ಮಸಾಲೆ ಹಪ್ಪಳ ತಿನ್ನುವ ಮುಂಚೆ ಯೋಚಿಸಿಕೊಳ್ಳಿ.
Side Effects Of Eating Papad.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am