ಬ್ರೇಕಿಂಗ್ ನ್ಯೂಸ್
09-04-22 10:02 pm Source: Vijayakarnataka ಡಾಕ್ಟರ್ಸ್ ನೋಟ್
ಬೆಳಗ್ಗಿನ ಸಮಯ ಅತ್ಯಮೂಲ್ಯವಾದದ್ದು.ದಿನದ ಆರಂಭ ಉಲ್ಲಾಸಭರಿತವಾಗಿದ್ದರೆ ಇಡೀ ದಿನ ಖುಷಿಯಾಗಿರಬಹುದು. ದಿನದ ಆರಂಭದಲ್ಲಿಯೇ ಆರೋಗ್ಯಕರ ಆಹಾರ ಸೇವಿಸಿದರೆ ದಿನ ಪೂರ್ತಿ ಚೈತನ್ಯಪೂರ್ಣವಾಗಿ, ಖುಷಿಯಾಗಿರಬಹುದು. ಪ್ರತಿದಿನ ಬಹುತೇಕರಿಗೆ ದಿನ ಆರಂಭವಾಗುವುದೇ ಚಹಾದಿಂದ. ಬೆಳಗ್ಗೆ ಎದ್ದು ಒಂದು ಸ್ಟ್ರಾಂಗ್ ಟೀ ಕುಡಿದು ಪೇಪರ್ ಓದಿದ ಮೇಲೆಯೇ ಅಂದಿನ ಕೆಲಸ ಆರಂಭ.
ಒಂದು ಚಹಾದಿಂದ ಮನಸ್ಸು ಆಹ್ಲಾದತೆಯನ್ನು ಪಡೆಯುತ್ತದೆ ಎಂದರೆ ಆರೋಗ್ಯಕ್ಕೆ ಹಿತವಾದ, ನ್ಯುಟ್ರಿಷಿಯನ್ಭರಿತ ಪಾನೀಯಗಳನ್ನು ಸೇವಿಸಿದರೆ ದಿನದ ಪ್ರತೀ ಕ್ಷಣವನ್ನೂ ಚಟುವಟಿಕೆಯಿಂದ ಕಳೆಯಬಹುದು. ಜೊತೆಗೆ ಆರೋಗ್ಯವನ್ನೂ ಉತ್ತಮವಾಗಿಟ್ಟುಕೊಳ್ಳಬಹುದು. ಕೆಲವು ಪಾನೀಯಗಳನ್ನು ಬೆಳಗ್ಗೆ ಸೇವಸಿದರೆ ದೇಹದಲ್ಲಿ ಶಕ್ತಿ ಅಧಿಕವಾಗುತ್ತದೆ. ಅಂತಹ ಪಾನೀಯಗಳು ಯಾವುವು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಆರೋಗ್ಯಕ್ಕೆ ಹಿತವಾದ ಪಾನೀಯಗಳ ಪಟ್ಟಿ. ಇದನ್ನು ನೀವೂ ಟ್ರೈ ಮಾಡಿ.
ಲಿಂಬು ಮತ್ತು ಚಿಯಾ ಬೀಜಗಳು
ದೇಹದ ತೂಕ ಇಳಿಸಿಕೊಳ್ಳಲು ಲಿಂಬು ಪಾನಕ ಉತ್ತಮ ಪಾನೀಯ ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಸ್ವಲ್ಪ ಚಿಯಾ ಬೀಜಗಳನ್ನು ಸೇರಿಸಿದರೆ ಆರೋಗ್ಯ ಗುಣ ದುಪ್ಪಟ್ಟಾಗುತ್ತದೆ. ಹೌದು. ಪ್ರತಿನಿತ್ಯ ಲಿಂಬು ಪಾನಕಕ್ಕೆ ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಿ ಕುಡಿಯಿರಿ. ಇದು ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಹೀಗಾಗಿ ನಿಮ್ಮ ದಿನದ ಆರಂಭ ಲಿಂಬು ಮತ್ತು ಚಿಯಾ ಬೀಜದ ಜ್ಯೂಸ್ನಿಂದಾಗಿರಲಿ.
ಗ್ರೀನ್ ಟೀ
ದೇಹಕ್ಕೆ ಸರ್ವರೀತಿಯಲ್ಲಿಯೂ ಸಹಾಯ ಮಾಡುವ ಗ್ರೀನ್ ಟೀಯನ್ನು ಬೆಳಗ್ಗಿನ ಸಮಯದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಗ್ರೀನ್ ಟೀ ನಿಮ್ಮ ದಿನದ ಆರಂಭಕ್ಕೆ ಉತ್ತಮ ಸಂಗಾತಿಯಾಗಲಿದೆ. ದೇಹದ ಅತಿಯಾದ ತೂಕ ಇಳಿಕೆಗೆ, ಮೂಡ್ ರಿಫ್ರೆಶ್ ಮಾಡಲು ಅಷ್ಟೇ ಯಾಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಲು ಕೂಡ ಗ್ರೀನ್ ಟೀ ಸಹಕಾರಿಯಾಗಿದೆ. . ಗ್ರೀನ್ ಟೀ ಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಗ್ರೀನ್ ಟೀ ಸೇವಿಸಿ. ದಿನವನ್ನು ಆರಂಭಿಸಿ.
ಎಳನೀರು
ತೆಂಗಿನ ನೀರಿನ ಸಿಹಿ ರುಚಿಯೊಂದಿಗೆ ನಿಮ್ಮ ದಿನವನ್ನು ಉಲ್ಲಾಸಕರವಾಗಿ ಪ್ರಾರಂಭಿಸಿ. ಈ ನೀರು ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿಟ್ಟುಕೊಂಡಿದೆ. ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಳನೀರನ್ನು ಕುಡಿದ ಮೇಲೆ ಸಿಗುವ ತಿರುಳು ಹೊಟ್ಟೆಯನ್ನು ತುಂಬಿಸುತ್ತದೆ. ಆರೋಗ್ಯಕ್ಕೂ ಹಿತವಾಗಿರುವ ಎಳನೀರು ದೇಹವನ್ನು ತಂಪಾಗಿಡುತ್ತದೆ. ಬೇಸಿಗೆಯಲ್ಲಿ ಇದು ಹೆಚ್ಚು ಉತ್ತಮವಾಗಿದೆ. ಅದ್ದರಿಂದ ಆದಷ್ಟು ಎಳನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ.
ತರಕಾರಿಗಳ ಜ್ಯೂಸ್
ಬೇಸಿಗೆಯ ಬೆಸ್ಟ್ ಫ್ರೆಂಡ್ ಎಂದರೆ ತರಕಾರಿ, ಸೊಪ್ಪುಗಳ ಜ್ಯೂಸ್. ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿಗಳ ಜ್ಯೂಸ್ ಸೇವನೆ ಮಾಡಿದರೆ ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ. ಬಿಸಿಲಿಗೆ ದೇಹ ನಿರ್ಜಲೀಕರಣವೂ ಆಗುವುದಿಲ್ಲ. ಇಡೀ ದಿನ ಕ್ರಿಯಾಶೀಲರಾಗಿರಲು ಹಸಿರು ಜ್ಯೂಸ್ಗಳು ನೆರವಾಗುತ್ತವೆ. ಬೀಟ್ರೂಟ್, ಸೌತೆಕಾಯಿ, ಪಾಲಕ್, ನುಗ್ಗೆಸೊಪ್ಪಿನ ಜ್ಯೂಸ್ ಹೀಗೆ ಹೆಚ್ಚು ಪ್ರೋಟೀನ್, ಕಬ್ಬಿಣಾಂಶವಿರುವ ಪಾನೀಯಗಳಿಂದ ದಿನ ಆರಂಭವಾಗಲಿ. ದೇಹವೂ ಸದೃಢವಾಗಿ ಸಣ್ಣ ಪುಟ್ಟ ಕಾಯಿಲೆಗಳೂ ದೇಹವನ್ನು ಆವರಿಸುವುದಿಲ್ಲ.
ಅಲೋವೆರಾ ಜ್ಯೂಸ್
ಜ್ಯೂಸ್ಗಳ ಪೈಕಿ ಅದ್ಭುತ ಶಕ್ತಿ ಹೊಂದಿರುವ ಅಲೋವೆರಾ ಜ್ಯೂಸ್ ಇಡೀ ದೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೇರಳವಾದ ಪೌಷ್ಠಿಕಾಂಶ ಪಾನೀಯವಾಗಿರುವುದರಿಂದ, ಅಲೋವೆರಾ ಜ್ಯೂಸ್ ಚರ್ಮದ ಆರೋಗ್ಯವನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಇದು ನಿಮ್ಮ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಪಾನೀಯವಾಗಿದೆ. ಅಲೋವೆರಾ ದೇಹವನ್ನು ತಂಪಾಗಿರಿ ಬೇಸಿಗೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
These Drinks Improve Your Health.
27-06-25 05:38 pm
Bangalore Correspondent
Five Tigers Die Male Mahadeshwara Forest: ಮಲೆ...
27-06-25 02:46 pm
ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು ; 22ರ...
26-06-25 10:37 pm
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 04:56 pm
Mangalore Correspondent
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
27-06-25 07:27 pm
HK News Desk
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am