ಬ್ರೇಕಿಂಗ್ ನ್ಯೂಸ್
30-09-21 12:07 pm Source: News 18 Kannada ಡಾಕ್ಟರ್ಸ್ ನೋಟ್
ಕರಿದ ತಿಂಡಿ ಮಾಡಿದ ಬಳಿಕ ಉಳಿದಬಳಕೆ ಮಾಡಿದ ಎಣ್ಣೆಯನ್ನು ಪುನಃ ಅಡುಗೆಗೆ ಬಳಕೆ ಮಾಡುವುದು ಸಾಮಾನ್ಯ. ಈ ಕರಿದ ಎಣ್ಣೆಯನ್ನು ಪಲ್ಯ, ಸಾರಿನ ಒಗ್ಗರಣೆಗೆ ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಮತ್ತೊಮ್ಮೆ ಕರಿಯಲು ಕೂಡ ಬಳಸುತ್ತಾರೆ. ಆದರೆ, ಈ ರೀತಿ ಎಣ್ಣೆಗಳನ್ನು ಪದೇ ಪದೇ ಮರು ಬಳಕೆ ಮಾಡುವುದು ಸುರಕ್ಷಿತವೇ?
ಕರಿದ ಎಣ್ಣೆಯನ್ನು ಸಾಧಾರಣವಾಗಿ ಒಮ್ಮೆ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದನ್ನು ದೀರ್ಘ ಕಾಲದವರೆಗೆ ಬಿಟ್ಟು, ಮತ್ತೆ ಕರಿಯಲು ಅಥವಾ ಇನ್ನಿತರ ಅಡುಗೆಗೆ ಬಳಸುವುದು ಸುರಕ್ಷಿತವಲ್ಲ.
ದೀರ್ಘ ಕಾಲದ ಬಳಿಕೆ ಬಳಕೆ ಮಾಡಿದ ಎಣ್ಣೆಯನ್ನು ಮರು ಬಳಕೆ ಮಾಡುವುದರಿಂದ ಅನೇಕ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇವು ಕೆಟ್ಟ ಕೊಬ್ಬನ್ನು ಉತ್ಪತ್ತಿ ಮಡುತ್ತದೆ. ಇದರಿಂದ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆ ಕೂಡ ಇದೆ.

ಕರಿದ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಬಾರಿ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಸೂಕ್ತವಲ್ಲ. ಇದರಿಂದ ಹೃದ್ರೋಗ, ಅಲ್ಜೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗು ಸಾಧ್ಯತೆ ಇದೆ.
ಎಣ್ಣೆಯನ್ನು ದೀರ್ಘಕಾಲದವರೆಗೆ ಬಿಸಿ ಮಾಡಿದ್ದರೆ ಅದನ್ನು ಮತ್ತೆ ಹುರಿಯಲು ಬಳಸಬಾರದು. ಹಾಗೆಯೇ ಬೇಯಿಸಿದ ಆಹಾರಕ್ಕೆ ಕೂಡ ಇದರ ಬಳಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು

ಅಡುಗೆ ಎಣ್ಣೆಗಳನ್ನು ಅತಿಯಾಗಿ ಕುದಿಸುವುದು ಆರೋಗ್ಯಕ್ಕೆ ಹಾನಿಕಾರಕ ಕೂಡ. ಇವುಗಳನ್ನು ಡುಗೆಯಲ್ಲಿ ಮರು ಬಳಕೆ ಮಾಡುವುದರಿಂದ ಕೆಲ ಹಾನಿಕಾರಕ ಅಂಶ ಬಿಡುಗಡೆಯಾಗುತ್ತದೆ.
ಇನ್ನು ಈ ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವ ಬದಲು ಬಯೋಡೀಸೆಲ್ ತಯಾರಿಸಿದರೆ ಮಾಲಿನ್ಯದ ಸಮಸ್ಯೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತಜ್ಞ ಪಿವಿಎನ್ ಮಾಧವ್.

ಕೇಂದ್ರ ಸರ್ಕಾರ ಕೂಡ ಕರಿದ ಎಣ್ಣೆಯನ್ನು ಜೈವಿಕ ಡೀಸೆಲ್ ಉತ್ಪಾದನೆಗೆ ಮಾತ್ರ ಬಳಸಲು 2018 ರಲ್ಲಿ ಆದೇಶ ಹೊರಡಿಸಿತು. ಅಲ್ಲದೇ ಈ ಎಣ್ಣೆಯಲ್ಲಿ ಹೇಗೆ ಡಿಸೇಲ್ ತಯಾರಿಸಬಹುದು ಎಂದು ಕೂಡ ವಿವರಿಸಿದ್ದರು.
ಅಡುಗೆ ಮಾಡಿದ ನಂತರ ಉಳಿದ ಎಣ್ಣೆಯನ್ನು ತಣ್ಣಗಾಗಿಸಿ ನಂತರ ಸ್ಟ್ರೈನರ್ ಮೂಲಕ ಗಾಳಿಯಾಡದ ಪಾತ್ರೆಯಲ್ಲಿ ಸುರಿಯಬೇಕು. ಆಗ ಆ ಎಣ್ಣೆಯಲ್ಲಿ ಯಾವುದೇ ಆಹಾರ ಕಣಗಳು ಇರುವುದಿಲ್ಲ.

ಎಣ್ಣೆಯನ್ನು ಮರುಬಳಕೆ ಮಾಡುವ ಮೊದಲು ಪ್ರತಿ ಬಾರಿ ಎಣ್ಣೆಯ ಬಣ್ಣ ಮತ್ತು ದಪ್ಪವನ್ನು ಪರೀಕ್ಷಿಸಬೇಕು. ಇಲ್ಲ ಆರೋಗ್ಯಕ್ಕೆ ಹಾನಿ ಹೆಚ್ಚು. ಈ ಹಿನ್ನಲೆ ಆರೋಗ್ಯ ದೃಷ್ಟಿಯಿಂದ ಈ ಬಗ್ಗೆ ಯೋಚಿಸಿ ಬಳಕೆ ಮಾಡಬೇಕು
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm