ಬ್ರೇಕಿಂಗ್ ನ್ಯೂಸ್
20-09-21 03:39 pm Megha Shree, Boldsky ಡಾಕ್ಟರ್ಸ್ ನೋಟ್
ನಮ್ಮ ಆರೋಗ್ಯ ಉತ್ತಮವಾಗಿರಲು ನಿತ್ಯ ಸೌತೆಕಾಯಿ ಸೇವಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತೂ ಸಹ ಗೊತ್ತಿರುವ ಸತ್ಯವೇ.
ಸೌತೆಕಾಯಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ ಮತ್ತು ಅವುಗಳ ಆರೋಗ್ಯ ಪ್ರಯೋಜನಗಳು ಮತ್ತು ಸೌಂದರ್ಯದ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.
ನಿತ್ಯ ಸೌತೆಕಾಯಿ ಸೇವಿಸಬೇಕು ಎಂದಾದರೂ ಅತಿಯಾಗಿ ಸೇವಿಸಿದರೆ ಅರೋಗ್ಯಕ್ಕೆ ಕುತ್ತಾಗಬಹುದು ಎಂಬ ಸತ್ಯ ನಿಮಗೆ ಗೊತ್ತೆ?. ಹೌದು ಅತಿಯಾಗಿ ಸೌತೆಕಾಯಿ ಸೇವಿಸಿದರೆ ಕೆಲವು ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ಸೌತೆಕಾಯಿ ತಿನ್ನುವುದರಿಂದ ಎದುರಾಗಬಹುದಾದ ಕೆಲವು ಪ್ರಮುಖ ಅಡ್ಡಪರಿಣಾಮಗಳು ಏನು ಮುಂದೆ ನೋಡೋಣ:
ಸೌತೆಕಾಯಿಯಲ್ಲಿರುವ ವಿಷತ್ವ
ಸೌತೆಕಾಯಿಯು ಆರೋಗ್ಯಕರವಾಗಿದ್ದರೂ ಇದರಲ್ಲಿ ಸಣ್ಣದಾದ ಕಹಿಯ ಅಂಶ ಇರುತ್ತದೆ. ಸೌತೆಕಾಯಿಯ ಈ ಸಣ್ಣ ಭಾಗಗಳು ಅತ್ಯಂತ ವಿಷಕಾರಿ ಟ್ರೈಟರ್ಪೆನಾಯ್ಡ್ಗಳು ಅಥವಾ ಕುಕುರ್ಬಿಟಾಸಿನ್ಸ್ ಸಂಯುಕ್ತಗಳನ್ನು ಹೊಂದಿರುತ್ತವೆ. ಆದ್ದರಿಂದ ನಾವು ಸೌತೆಕಾಯಿ ಸೇವನೆ ಮಿತಿಯಲ್ಲಿರಬೇಕು.
ನಮಗೆ ಹಲವು ಬಾರಿ ಸೌತೆಕಾಯಿ ತಿನ್ನುವ ವೇಳೆ ಅದು ತುಂಬಾ ಕಹಿಯಾಗಿರುವುದು ಮತ್ತು ಅದನ್ನು ಉಗುಳಲು ಬಯಸುತ್ತೇವೆ. ಆದಷ್ಟು ಕಹಿಯಾದ ಸೌತೆಕಾಯಿಯನ್ನು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಈ ರಸವು ವಿಷಕಾರಿ ಸಂಯುಕ್ತಕ್ಕೆ ಹೆಚ್ಚು ಒಳಗಾಗುತ್ತದೆ.
1. ನೀರಿನಂಶದ ನಷ್ಟದಿಂದ ಅಸಮತೋಲನ
ಅತಿಯಾದ ಸೌತೆಕಾಯಿ ಸೇವನೆಯೂ ನಿಮ್ಮ ದೇಹದಲ್ಲಿ ನೀರಿನಂಶದ ಕೊರತೆಯನ್ನು ಮಾಡಬಹುದು ಎಂಬುದು ಗೊತ್ತೆ. ಇದು ದೇಹದ ಅಸಮತೋಲನಕ್ಕೆ ಕಾರಣವಾಗಬಹುದು. ಸೌತೆಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ದ್ರವದ ನಷ್ಟಕ್ಕೆ ಮುಖ್ಯ ಕಾರಣವೆಂದರೆ ಸೌತೆಕಾಯಿ ಬೀಜಗಳಲ್ಲಿ ಕುಕುರ್ಬಿಟಾಸಿನ್ ಮತ್ತು ಕೊಬ್ಬಿನ ಎಣ್ಣೆ.
ಸೌತೆಕಾಯಿಯಲ್ಲಿರುವ ಕುಕುರ್ಬಿಟಾಸಿನ್ ಮತ್ತು ಕೊಬ್ಬಿನ ಎಣ್ಣೆ ಈ ಸಂಯುಕ್ತಗಳು ಮೂತ್ರವರ್ಧಕವಾಗಿದ್ದು, ಸೌತೆಕಾಯಿಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರ ವಿಸರ್ಜನೆಯ ಆವರ್ತನವನ್ನು ಹೆಚ್ಚಿಸಬಹುದು ಇದು ಅಂತಿಮವಾಗಿ ನಮ್ಮ ದೇಹದಿಂದ ದ್ರವಗಳು ಮತ್ತು ಎಲೆಕ್ಟ್ರೋಲೈಟ್ಗಳ ನಷ್ಟಕ್ಕೆ ಕಾರಣವಾಗುತ್ತದೆ, ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಇದು ನಿರ್ಜಲೀಕರಣಕ್ಕೂ ಕಾರಣವಾಗಬಹುದು.
2. ಅತಿಯಾದ ನೀರಿನಂಶ ಇರುವ ಸೌತೆಕಾಯಿ
ಸೌತೆಕಾಯಿ ನೀರಿನ ಅತ್ಯುತ್ತಮ ಮೂಲವಾಗಿದೆ. ಸೌತೆಕಾಯಿಯ ತೂಕದ ಸುಮಾರು 90 ಪ್ರತಿಶತದಷ್ಟು ನೀರು ಇರುತ್ತದೆ. ಈ ನೀರು ನಮಗೆ ಆರ್ಧ್ರಕ ಮತ್ತು ಉಲ್ಲಾಸವನ್ನು ನೀಡುತ್ತದೆ ಮತ್ತು ನಮ್ಮ ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ. ಆದರೂ, ಸೌತೆಕಾಯಿಗಳ ಅತಿಯಾದ ಸೇವನೆಯು ದೇಹದಲ್ಲಿನ ರಕ್ತದ ಒಟ್ಟು ಪ್ರಮಾಣವನ್ನು ಹೆಚ್ಚಿಸುತ್ತದೆ, ನಮ್ಮ ರಕ್ತನಾಳಗಳು ಮತ್ತು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಮೂತ್ರಪಿಂಡಗಳ ಅತಿಯಾದ ಹೊರೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
3. ಅತಿಯಾದ ವಿಟಮಿನ್ ಸಿ ಯ ಅಡ್ಡ ಪರಿಣಾಮ
ಸೌತೆಕಾಯಿಯು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದ್ದು ಅದು ಉತ್ಕರ್ಷಣ ನಿರೋಧಕವಾಗಿದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಅನೇಕ ರೋಗಗಳಿಂದ ನಮ್ಮನ್ನು ತಡೆಯುತ್ತದೆ. ಉತ್ಕರ್ಷಣ ನಿರೋಧಕಗಳಾಗಿರುವುದರಿಂದ, ಇದು ನಮ್ಮ ದೇಹದ ಸ್ವತಂತ್ರ ರಾಡಿಕಲ್ಗಳೊಂದಿಗೆ ಹೋರಾಡುತ್ತದೆ, ಅವುಗಳನ್ನು ಸ್ಥಿರಗೊಳಿಸುತ್ತದೆ ಮತ್ತು ನಮ್ಮ ದೇಹದ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಆದರೆ, ನೆನಪಿರಲಿ ವಿಟಮಿನ್ ಸಿ ಯ ಈ ಎಲ್ಲಾ ಪ್ರಯೋಜನವು ಶಿಫಾರಸು ಮಾಡಿದ ಡೋಸೇಜ್ನಲ್ಲಿ ಸೇವಿಸಿದಾಗ ಮಾತ್ರ ಪ್ರಯೋಜನಕಾರಿ, ಅತಿಯಾದರೆ ದೇಹದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ವಿಟಮಿನ್ C ಹೆಚ್ಚು ಸೇವಿಸಿದಾಗ ಪ್ರೋ ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಸ್ವತಂತ್ರ ರಾಡಿಕಲ್ಗಳ ಬೆಳವಣಿಗೆ, ಹರಡುವಿಕೆಯನ್ನು ಪ್ರಚೋದಿಸುತ್ತದೆ ಮತ್ತು ಈ ಸ್ವತಂತ್ರ ರಾಡಿಕಲ್ಗಳು ನಮ್ಮ ದೇಹದೊಳಗೆ ಮುಕ್ತವಾಗಿ ಸಂಚರಿಸಬಹುದು, ಇದು ನಮ್ಮ ದೇಹದ ಜೀವಕೋಶಗಳನ್ನು ಹಾನಿಗೊಳಿಸಬಹುದು ಮತ್ತು ಹೆಚ್ಚಿಸಬಹುದು ಕ್ಯಾನ್ಸರ್, ಮೊಡವೆ, ಅಕಾಲಿಕ ವಯಸ್ಸಾಗುವಿಕೆ ಇತ್ಯಾದಿ ಅಪಾಯ ಹೆಚ್ಚು.
4. ಜೀವಸತ್ವಗಳು ಮತ್ತು ಖನಿಜಗಳು
ಸೌತೆಕಾಯಿಯು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ ಮತ್ತು ಸೌತೆಕಾಯಿಯ ಚರ್ಮವು ಸಿಲಿಕಾ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂನಂತಹ ಖನಿಜ, ನಾರಿನಾಂಶಗಳಿಂದ ಸಮೃದ್ಧವಾಗಿದ್ದು ಈ ಎಲ್ಲಾ ಸಂಯುಕ್ತಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆದರೆ ಅವುಗಳನ್ನು ಮಿತಿಯಲ್ಲಿ ಸೇವಿಸಬೇಕಿದೆ. ಬದಲಾಗಿ ಅತಿಯಾದ ಸೇವನೆಯಿಂದ ಈ ಖನಿಜಗಳು ಮತ್ತು ವಿಟಮಿನ್ಗಳು ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಹಾನಿಕಾರಕ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಅತಿಯಾದ ವಿಟಮಿನ್ ಸಿ ನಮ್ಮ ದೇಹದ ಜೀವಕೋಶಗಳಿಗೆ ಹಾನಿಯುಂಟು ಮಾಡುವ ಫ್ರೀ ರಾಡಿಕಲ್ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೆಲವು ಪರಿಸ್ಥಿತಿಗಳಲ್ಲಿ ಅತಿಯಾದ ಪೊಟ್ಯಾಶಿಯಂ ಮೂತ್ರಪಿಂಡಗಳ ಮೇಲೆ ಸಹ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಅತಿಯಾದ ಫೈಬರ್ ಕರುಳಿನ ಅನಿಲ, ಉಬ್ಬುವುದು ಮತ್ತು ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು.
5. ಹಾನಿಕಾರಕ ಮೇಣದ ಲೇಪನ
ಸೌತೆಕಾಯಿಗಳು ಬಹಳ ದುರ್ಬಲವಾದ ಅಥವಾ ಸೂಕ್ಷ್ಮವಾದ ತರಕಾರಿ, ಅಂದರೆ ಅವು ಸುಲಭವಾಗಿ ಮುರಿಯಬಹುದು. ಇದು ರೈತರಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ, ಆದ್ದರಿಂದ ಹೆಚ್ಚಿನ ರೈತರು ಬೆಳೆಯುವ ಅಥವಾ ಕೀಳುವ ಹಂತದಲ್ಲಿ ಸೌತೆಕಾಯಿಯ ಮೇಲೆ ಮೇಣ ಮಾಡುತ್ತಾರೆ. ಈ ಮೇಣದ ಲೇಪನವು ಸೌತೆಕಾಯಿಯನ್ನು ಕೀಟಗಳಿಂದ ರಕ್ಷಿಸುತ್ತದೆ ಮತ್ತು ಸಾಗಿಸುವಾಗ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಲೇಪನಕ್ಕೆ ಬಳಸುವ ಮೇಣವು ಈಥೈಲ್ ಆಲ್ಕೋಹಾಲ್, ಸಾಬೂನುಗಳು ಮತ್ತು ಹಾಲಿನ ಕ್ಯಾಸೀನ್ ನಂತಹ ಸಂಯುಕ್ತಗಳಿಂದ ಮಾಡಲ್ಪಟ್ಟಿದೆ, ಈ ಹಾಲಿನ ಕ್ಯಾಸೀನ್ ಅಲರ್ಜಿಯಂಥ ಸಮಸ್ಯೆಯನ್ನು ಉಂಟುಮಾಡಬಹುದು.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm