ಬ್ರೇಕಿಂಗ್ ನ್ಯೂಸ್
20-10-22 07:24 pm Source: Vijayakarnataka ಡಾಕ್ಟರ್ಸ್ ನೋಟ್
ಉತ್ತಮ ಆರೋಗ್ಯಕರ ಆಹಾರವು ನಮ್ಮ ದೇಹಕ್ಕೆ ಬಹಳ ಮುಖ್ಯ. ಹಾಗಯೇ ನಾವು ಯಾವ ಸಮಯದಲ್ಲಿ ಆಹಾರವನ್ನು ಸೇವಿಸುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯ. ಆರೋಗ್ಯಕರ ಅಭ್ಯಾಸಗಳನ್ನು ನಮ್ಮ ಜೀವನದಲ್ಲಿ ಸೇರಿಸುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಹೊಟ್ಟೆ ಭಾರವಾಗುತ್ತದೆ. ಇದಕ್ಕೆಲ್ಲಾಆ ಕಾರಣ ನೀವು ಆಹಾರ ಸೇವಿಸುವ ಸಮಯ.
ಹಾಗಾದರೆ, ಈ ದೇಹದ ಒತ್ತಡವನ್ನು ನಿಭಾಯಿಸಲು ಯಾವ ಸಮಯದಲ್ಲಿ ಆಹಾರವನ್ನು ಸೇವಿಸಬೇಕು. ಮುಖ್ಯ ಊಟವನ್ನು ತಿನ್ನುವ ವೇಳಾಪಟ್ಟಿಯನ್ನು ಅನುಸರಿಸುವುದರಿಂದ ಮಾತ್ರ ನೀವು ಸಾರ್ವಕಾಲಿಕವಾಗಿ ಆರೋಗ್ಯವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಮುಖ್ಯ ಆಹಾರವನ್ನು ತಿನ್ನಲು ನೀವು ಅನುಸರಿಸಬೇಕಾದ ಕೆಲವು ಸರಳ ನಿಯಮಗಳು ಇಲ್ಲಿವೆ.
ಬೆಳಗಿನ ಉಪಾಹಾರ ಸಮಯ
![]()
ಉಪಾಹಾರಕ್ಕಾಗಿ, ಯಾವಾಗಲೂ ಫೈಬರ್ನಿಂದ ಕೂಡಿರುವ ಹಾಗೂ ಬೆಚ್ಚಗಿನ ಆಹಾರವನ್ನು ಸೇವಿಸಬೇಕೆಂದು ತಜ್ಞರು ಹೇಳುತ್ತಾರೆ. ತಣ್ಣನೆಯ ಆಹಾರವನ್ನು ತ್ಯಜಿಸಬೇಕು. ಏಕೆಂದರೆ ಮೆಟಾಬಾಲಿಸಮ್ಗೆ ಸೌಮ್ಯವಾದ ಪ್ರಾರಂಭದ ಅಗತ್ಯವಿರುತ್ತದೆ.
ಅದು ಬೆಚ್ಚಗಿನ ಉಪಹಾರಗಳಾದ ರಾಗಿ ರೊಟ್ಟಿ, ಬೆಚ್ಚಗಿನ ಓಟ್ ಮೀಲ್, ಗಂಜಿ ಅಥವಾ ಬೇಯಿಸಿದ ಮೊಟ್ಟೆಗಳಂತಹ ಬೆಚ್ಚಗಿನ ಉಪಹಾರಗಳು ಸುಲಭವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೆಳಿಗ್ಗೆ 7 ಗಂಟೆಗೆ ನಿಮ್ಮ ಉಪಹಾರವನ್ನು ತಿನ್ನಲು ಸೂಚಿಸಲಾಗುತ್ತದೆ.
ಊಟದ ಸಮಯ
![]()
ಊಟದ ವಿಷ್ಯಕ್ಕೆ ಬಂದಾಗ ಊಟವು ಹಗುರವಾಗಿರಬಾರದು ಎಂದು ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ. ಇದು ಹೆಚ್ಚು ಅಥವಾ ಹಗುರವಾಗಿರಬಾರದು, ಆದರೆ ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಸಮತೋಲಿತ ಊಟ ಮಾಡಬೇಕು.
ಈ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಮಧ್ಯಾಹ್ನದ ಊಟವನ್ನು ನೀವು ಸೇವಿಸಿದಾಗ, ನಿಮ್ಮ ದೇಹವು ಈ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ಊಟವು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿರಬೇಕು ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಮಧ್ಯಾಹ್ನದ ಊಟವನ್ನು 12:30 ರಿಂದ 2 ಗಂಟೆಯೊಳಗೆ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಸ್ನ್ಯಾಕಿಂಗ್

ಬೆಳಗಿನ ಉಪಾಹಾರ ಮತ್ತು ಊಟದ ನಡುವೆ ನಿಮಗೆ ಹಸಿವಾಗಿದ್ದರೆ, ಸ್ವಲ್ಪ ಹಣ್ಣುಗಳನ್ನು ಸೇವಿಸಲು ತಜ್ಞರು ಸೂಚಿಸುತ್ತಾರೆ. ಈ ಸಮಯದಲ್ಲಿ ಮಾತ್ರ ಹಣ್ಣುಗಳ ಸರಿಯಾದ ಪ್ರಯೋಜನಗಳನ್ನು ಪಡೆಯಬಹುದು. ನೀವು ಈಗಾಗಲೇ ಹೆಚ್ಚು ಆಹಾರಗಳನ್ನು ಸೇವಿಸಿದ್ದರೆ ನಂತರ ಅವುಗಳನ್ನು ತಿನ್ನಬಾರದು.
ಇದು ನಿಮ್ಮ ದೇಹದಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಯಾವುದೇ ಹಣ್ಣುಗಳನ್ನು ತಿನ್ನುತ್ತಿದ್ದರೆ, ಅವುಗಳನ್ನು ಬೆಳಿಗ್ಗೆ 11 ಗಂಟೆಗೆ ಸೇವಿಸಿ ಮತ್ತು ಅದರ ನಂತರ ಸೇವಿಸಬೇಡಿ.
ಸಂಜೆಯ ತಿಂಡಿ

ಸಂಜೆ, ಆಹಾರದಲ್ಲಿ ಹಣ್ಣಿನ ರಸವನ್ನು ಸೇವಿಸಲು ಸೂಚಿಸಲಾಗುತ್ತದೆ. ಇದು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಊಟದ ಸಮಯದವರೆಗೆ ಉಳಿಸಿಕೊಳ್ಳಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಸಂಜೆಯ ಸಮಯದಲ್ಲಿ, ಒಬ್ಬ ವ್ಯಕ್ತಿಯು ನಿಶ್ಯಕ್ತಿಯನ್ನು ಅನುಭವಿಸುತ್ತಾನೆ.
ಅಂತಹ ಸಮಯದಲ್ಲಿ ಹಣ್ಣಿನ ರಸವನ್ನು ಕುಡಿಯುವುದು ಅದನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ, ಹಣ್ಣಿನ ರಸವನ್ನು ಸಂಜೆ 4 ಗಂಟೆಯೊಳಗೆ ತೆಗೆದುಕೊಳ್ಳಲು ಪ್ರಯತ್ನಿಸಿ.
ಭೋಜನದ ಸಮಯ
![]()
ಭೋಜನವು ದಿನದ ಕೊನೆಯ ಊಟವಾಗಿದ್ದಯ, ಹಗುರವಾಗಿರಬೇಕು. ಈ ರೀತಿಯಾಗಿ ಹೊಟ್ಟೆಯು ಹಗುರವಾಗಿರುತ್ತದೆ ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ತಜ್ಞರು ದಿನದ ಕೊನೆಯ ಊಟವನ್ನು ಮಲಗುವ ಕನಿಷ್ಠ 2 ಗಂಟೆಗಳ ಮೊದಲು ಸೇವಿಸಬೇಕು ಎಂದು ಶಿಫಾರಸು ಮಾಡುತ್ತಾರೆ. ಅಂದರೆ ಸಂಜೆ 6:30 ರಿಂದ 8 ರವರೆಗೆ ತಿನ್ನಬೇಕು. ಪ್ರಮುಖ ಊಟಗಳ ನಡುವೆ 4-6 ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಬೇಕು.
Which Is The Right Time To Eat Main Meals To Avoid Gastric.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am