ಬ್ರೇಕಿಂಗ್ ನ್ಯೂಸ್
02-06-22 08:06 pm Source: Vijayakarnataka ಡಾಕ್ಟರ್ಸ್ ನೋಟ್
ಈಗ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣಿನ ಸೀಸನ್, ಈ ಸೀಸನ್ನಲ್ಲಿ ಈ ಎರಡು ಹಣ್ಣುಗಳನ್ನು ತಿನ್ನದವರೇ ಇಲ್ಲ ಎನ್ನಬಹುದು. ಅದರಲ್ಲೂ ಯಾರ ಮನೆಯಲ್ಲಿ ಹಲಸಿನ ಮರ ಇದೆಯೋ ಅವರಿಗಂತೂ ಮೂರು ಹೊತ್ತು ಹೊಟ್ಟೆತುಂಬಾ ಹಲಸಿನ ಹಣ್ಣು ತಿನ್ನುವ ಭಾಗ್ಯ. ಹಲಸಿನ ಹಣ್ಣು ಎಷ್ಟು ರುಚಿಯಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಅದು ಕಾಯಿ ಇದ್ದಾಗ ಪಲ್ಯ ಮಾಡಿ ತಿನ್ನುತ್ತೇವೆ. ಅದೇ ಹಣ್ಣಾದಾಗ ಹಾಗೆಯೇ ತಿನ್ನುತ್ತೇವೆ. ಹಲಸಿನ ಹಣ್ಣಿನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಅನ್ನೋದು ಬಹುತೇಕರಿಗೆ ಗೊತ್ತೇ ಇದೆ. ಆದರೆ ಹಲಸಿನ ಹಣ್ಣನ್ನು ತಿಂದ ಮೇಲೆ ಅದರ ಬೀಜಗಳನ್ನು ಹೆಚ್ಚಿನವರು ಬಿಸಾಡುತ್ತಾರೆ.
ಹಲಸಿನ ಬೀಜಗಳನ್ನು ಬಿಸಾಡದಿರಿ

ಇನ್ನೂಕೆಲವರು ಹಲಸಿನ ಬೀಜವನ್ನು ತಿನ್ನಲು ರುಚಿಯಾಗಿರುತ್ತದೆ ಎಂದು ಸಾಂಬಾರ್ಗೆ ಮಿಕ್ಸ್ ಮಾಡಿ ಹಾಕಿರುತ್ತಾರೆ. ಆದರೆ ಅದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಅನ್ನೋದು ಗೊತ್ತೇ ಇರೋದಿಲ್ಲ. ನೀವು ಹಳ್ಳಿಗಳಲ್ಲಿ ನೋಡಿರುವಿರಿ ಹಲಸಿನ ಬೀಜಗಳನ್ನು ಬೇಯಿಸಿ ಸಿಪ್ಪೆ ಸುಲಿದು ತಿನ್ನುತ್ತಾರೆ. ಇನ್ನೂ ಕೆಲವರು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ರೋಗನಿರೋಧಕ ಶಕ್ತಿ

ಹಲಸಿನ ಬೀಜವನ್ನು ಸೇವಿಸುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಯಾವುದೇ ರೋಗವು ನಮ್ಮನ್ನು ಅಷ್ಟು ಸುಲಭವಾಗಿ ಆಕ್ರಮಿಸುವುದಿಲ್ಲ. ಇದು ಪ್ರತಿರಕ್ಷಣಾ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಲ್ಲಿ ವಿಟಮಿನ್ ಎ ಕೂಡಾ ಇದೆ. ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಚರ್ಮಕ್ಕೆ ಒಳ್ಳೆಯದು

ಹಲಸಿನ ಬೀಜಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಅಂಶವು ಅಕಾಲಿಕ ವಯಸ್ಸಾದ, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಉಂಟುಮಾಡುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೀವು ಈ ಬೀಜಗಳನ್ನು ತಣ್ಣನೆಯ ಹಾಲಿನೊಂದಿಗೆ ಪುಡಿಮಾಡಿ ಪೇಸ್ಟ್ ರೀತಿ ತಯಾರಿಸಿ ನಿಮ್ಮ ಮುಖಕ್ಕೆ ನಿಯಮಿತವಾಗಿ ಹಚ್ಚಿ. ಹಚ್ಚಿದ 15-20 ನಿಮಿಷಗಳ ನಂತರ ತೊಳೆಯಿರಿ.
ಫೈಬರ್ ಅಂಶಗಳಿವೆ
![]()
ಹಲಸಿನ ಬೀಜಗಳು ಆರೋಗ್ಯಕರ ಫೈಬರ್ಗಳಿಂದ ತುಂಬಿದ್ದು ಅದು ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಹಲಸಿನ ಬೀಜಗಳು ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಲ್ಲವು. ಒಟ್ಟಾರೆ ಕರುಳಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ನಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ
![]()
ನಮ್ಮ ದೇಹಕ್ಕೆ ಹಿಮೋಗ್ಲೇಬಿನ್ನ ಅವಶ್ಯಕತೆ ಬಹಳಷ್ಟಿದೆ. ಹಲಸಿನ ಬೀಜಗಳು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಕಬ್ಬಿಣದಿಂದ ಸಮೃದ್ಧವಾಗಿದೆ. ಇದು ಹೆಚ್ಚು ಕೆಂಪು ರಕ್ತ ಕಣಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೀಮೋಗ್ಲೇಬಿನ್ ಕಡಿಮೆ ಇರುವವರು ಹಲಸಿನ ಬೀಜಗಳನ್ನು ಸೇವಿಸುವುದು ಒಳ್ಳೆಯದು.
B ಜೀವಸತ್ವಗಳಿಂದ ಸಮೃದ್ಧವಾಗಿದೆ

ನಮ್ಮ ದೇಹದ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ B ಜೀವಸತ್ವಗಳು ಪ್ರಮುಖ ಪಾತ್ರವಹಿಸುತ್ತವೆ. ಇದು ನಮ್ಮ ಶಕ್ತಿಯ ಮಟ್ಟಗಳು, ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರೋಗ್ಯಕರ ಕೋಶಗಳನ್ನು ಉತ್ತೇಜಿಸುತ್ತದೆ. ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಪ್ರೊಟೀನ್ ಸಮೃದ್ಧ
![]()
ಹಲಸಿನ ಬೀಜಗಳು ಪ್ರೊಟೀನ್-ಸಮೃದ್ಧವಾಗಿದ್ದು ಅದು ನಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ತೂಕವನ್ನು ಇಳಿಸಲು ಸಹಕಾರಿಯಾಗಿದೆ. ಹಾಗಾಗಿ ತೂಕ ನಷ್ಟದ ಡಯೆಟ್ಲ್ಲಿ ನೀವು ಹಲಸಿನ ಬೀಜಗಳನ್ನು ಸೇರಿಸಬಹುದು.
Health Benefits Of Jackfruit Seeds.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am