ಆರೆಸ್ಸೆಸ್ ನೋಂದಣಿ ; ನನ್ನ ಪತ್ರ ವೈಯಕ್ತಿಕ ಅಲ್ಲ, ರಾಜ್ಯ ಸರ್ಕಾರದ ಪತ್ರಕ್ಕೆ ಅಧಿಕೃತ ಉತ್ತರ ನೀಡಬೇಕು, ಸಚಿವ ಖರ್ಗೆ ಸವಾಲು

17-06-26 04:48 pm       HK News Staffer   ಕರ್ನಾಟಕ

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ವಿಷಯಕ್ಕೆ ಸಂಬಂಧಿಸಿದಂತೆ ತಾನು ಬರೆದ ಪತ್ರಕ್ಕೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದುವರೆಗೆ ಉತ್ತರ ನೀಡಿಲ್ಲ. ನನ್ನ ಪತ್ರ ವೈಯಕ್ತಿಕ ಅಲ್ಲ. ಸರ್ಕಾರದ ಕಡೆಯಿಂದ ಬರೆದ ಪತ್ರಕ್ಕೆ ಅದೇ ರೀತಿಯ ಉತ್ತರ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು, ಜೂನ್ 17: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ವಿಷಯಕ್ಕೆ ಸಂಬಂಧಿಸಿದಂತೆ ತಾನು ಬರೆದ ಪತ್ರಕ್ಕೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದುವರೆಗೆ ಉತ್ತರ ನೀಡಿಲ್ಲ. ನನ್ನ ಪತ್ರ ವೈಯಕ್ತಿಕ ಅಲ್ಲ. ಸರ್ಕಾರದ ಕಡೆಯಿಂದ ಬರೆದ ಪತ್ರಕ್ಕೆ ಅದೇ ರೀತಿಯ ಉತ್ತರ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ದೆಹಲಿ‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾವು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆ ಪತ್ರ ಬರೆದಿದ್ದರಿಂದ ಅದಕ್ಕೆ ಉತ್ತರ ನೀಡುವುದು ಮೋಹನ್ ಭಾಗವತ್ ಅವರ ಕರ್ತವ್ಯ ಎಂದು ಭಾವಿಸಿದ್ದೇನೆ. ನನ್ನ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮೋಹನ್ ಭಾಗವತ್ ಮಾತನಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ತಪ್ಪು. ನಾನು ನನ್ನ ಪತ್ರವನ್ನು ಜೂನ್ 15ರಂದು ಕಳುಹಿಸಿದ್ದು, ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದೇನೆ. ಆದರೆ ಅವರು ಮಾಡಿದ ಆ ಮಾತುಕತೆ ಜೂನ್ 13 ಅಥವಾ 14ರಂದು ನಡೆದಿದೆ ಎಂದು ಹೇಳಿದರು.

ಕೇರಳದ ತ್ರಿಶೂರಿನಲ್ಲಿ ಜೂನ್ 13ರಂದು ಮೋಹನ್ ಭಾಗವತ್ ನೀಡಿದ ವಿವರಣೆ ನನ್ನ ಪತ್ರಕ್ಕೆ ಪ್ರತಿಕ್ರಿಯೆ ಅಲ್ಲ. ಅದು ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ ನೀಡದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೀಡಿದ ಉತ್ತರ ಎಂದು ಹೇಳಿದರು. ಜೂನ್ 15ರ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ. ಇದು ವೈಯಕ್ತಿಕ ಪತ್ರವಲ್ಲ, ರಾಜ್ಯ ಸರ್ಕಾರದ ಪರವಾಗಿ ಬರೆದ ಪತ್ರವಾಗಿದ್ದು, ಅದಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಅವರು ಹೇಳುವಂತೆ, ಸಂಘದ ಅತ್ಯುನ್ನತ ನೀತಿ ನಿರ್ಣಯ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿಯ ಪ್ರಕಾರ ರಾಜ್ಯದಲ್ಲಿ RSS ಗೆ 4,127 ಶಾಖೆಗಳು ಮತ್ತು 562 ರೋಡ್‌ ಶೋಗಳು ನಡೆದಿವೆ. ಇಂತಹ ಚಟುವಟಿಕೆ ನಡೆಸುವ ಸಂಘಟನೆ ಜವಾಬ್ದಾರಿಯಾಗಿರಬೇಕು ಎಂದು ಹೇಳಿದರು.