ಬ್ರೇಕಿಂಗ್ ನ್ಯೂಸ್
24-08-21 04:05 pm Headline Karnataka News Network ಸಿನಿಮಾ
ಮಾಜಿ ನೀಲಿ ತಾರೆ ಆಗಿದ್ದ ಸನ್ನಿ ಲಿಯೋನ್ ಇದೀಗ ಬಾಲಿವುಡ್ನಲ್ಲಿ ನಟಿಯಾಗಿ, ವಿಶೇಷ ಹಾಡುಗಳ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನೀಲಿ ಚಿತ್ರಗಳಲ್ಲಿ ಸನ್ನಿ ಲಿಯೋನ್ ಈಗ ನಟಿಸುತ್ತಿಲ್ಲ ಆದರೆ ಆಕೆಯ ನೀಲಿ ಚಿತ್ರಗಳಿಂದಾಗಿಯೇ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಸನ್ನಿ ಲಿಯೋನ್ ಪಡೆದುಕೊಂಡಿದ್ದಾರೆ. ಯಾವ ಮಟ್ಟಿಗೆಂದರೆ ಸನ್ನಿ ಲಿಯೋನ್ ಅಭಿಮಾನಿ ಸಂಘಗಳನ್ನು ತೆರೆಯುವಷ್ಟರ ಮಟ್ಟಿಗೆ ಸನ್ನಿ ಲಿಯೋನ್ಗೆ ಅಭಿಮಾನಿಗಳಿದ್ದಾರೆ.
ಕರ್ನಾಟಕದಲ್ಲಿಯೂ ಸನ್ನಿ ಲಿಯೋನ್ಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಇಲ್ಲ. ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರಗಳು, ಸಾಮೂಹಿಕ ಭೋಜನಗಳು ಸಹ ನಡೆಯುತ್ತವೆ. ಚಿಗುರು ಮೀಸೆ ಹುಡುಗರಂತೂ ಊರ ಜಾತ್ರೆಗೆ ಸಹ ಸನ್ನಿ ಲಿಯೋನ್ ಚಿತ್ರವುಳ್ಳ ಕಟೌಟ್ನಲ್ಲಿ ತಮ್ಮ ಚಿತ್ರವನ್ನು ಜೊತೆಯಾಗಿ ಹಾಕಿಸಿಕೊಂಡು ಕಾಲರ್ ಏರಿಸುತ್ತಾರೆ.
ಸನ್ನಿ ಲಿಯೋನ್ ಅಭಿಮಾನಿ ಸಂಘ ಹುಲ್ಲೂರು ಇದೀಗ ಹುಲ್ಲೂರು ಗ್ರಾಮದ ಕೆಲ ಯುವಕರು ತಮ್ಮನ್ನು ಸನ್ನಿ ಲಿಯೋನ್ ಅಭಿಮಾನಿ ಸಂಘದ ಸದಸ್ಯರು ಎಂದು ಹೇಳಿಕೊಂಡಿದ್ದು, ಊರ ಜಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿಸಿ ಅದರಲ್ಲಿ ಸನ್ನಿ ಲಿಯೋನ್ಳ ದೊಡ್ಡ ಚಿತ್ರವನ್ನು ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಶರಭಾರ್ಯ ಸ್ವಾಮಿ ಹಾಗೂ ರಾಜರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ ಎಂದು ಸ್ವಾಗತ ಕೋರಿದ್ದಾರೆ ಈ ಯುವಕರು.

ಚಿತ್ರದಲ್ಲಿ ಸನ್ನಿ ಲಿಯೋನ್ನ ಸಂಸ್ಕಾರಮಯ ಚಿತ್ರವನ್ನೇ ಮುದ್ರಿಸಲಾಗಿದೆ. ಸನ್ನಿ ಲಿಯೋನ್ ಮೈತುಂಬ ಉಡುಗೆ ತೊಟ್ಟು, ಹಿಂದು ಅಕ್ಷರಗುಳ್ಳ ಶಾಲು ಹೊದ್ದು ಕೈ ಮುಗಿಯುತ್ತಿರುವ ಚಿತ್ರವನ್ನು ಪೋಸ್ಟರ್ನಲ್ಲಿ ಮುದ್ರಿಸಲಾಗಿದೆ. ಆದರೆ ಅದು ಸನ್ನಿ ಲಿಯೋನ್ರ ನಿಜವಾದ ಚಿತ್ರವಲ್ಲ ಬದಲಿಗೆ ಯಾರದ್ದೊ ಚಿತ್ರಕ್ಕೆ ಸನ್ನಿ ಲಿಯೋನ್ ಮುಖವನ್ನು ಅಂಟಿಸಿ ಮುದ್ರಿಸಲಾಗಿದೆ. ಹುಲ್ಲೂರಿನ ಯುವಕರ ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಲವರು ಈ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.
ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು ಈ ಹಿಂದೆ ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಸನ್ನಿ ಲಿಯೋನ್ಳ ದೊಡ್ಡ ಕಟೌಟ್ ಮಾಡಿಸಿ ಊರ ಮಧ್ಯೆ ನಿಲ್ಲಿಸಿದ್ದರು. ಕಟೌಟ್ ಮೇಲೆ 'ಅನಾಥ ಮಕ್ಕಳ ತಾಯಿ ಸನ್ನಿ ಲಿಯೋನ್ಗೆ ಹುಟ್ಟುಹಬ್ಬದ ಶುಭಾಶಯ' ಎಂದು ಬರೆಸಿದ್ದರು. ಮಂಡ್ಯದ ಕೊಮ್ಮೇರಹಳ್ಳಿಯ ಯುವಕರ ಪ್ರೀತಿಗೆ ಮನಸೋತ ಸನ್ನಿ ಲಿಯೋನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕಟೌಟ್ನ ಚಿತ್ರವನ್ನು ಹಂಚಿಕೊಂಡು ಯುವಕರಿಗೆ ಧನ್ಯವಾದ ಹೇಳಿದ್ದರು.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm