ಬ್ರೇಕಿಂಗ್ ನ್ಯೂಸ್
16-08-21 10:58 am Filmbeat: Manjunatha C ಸಿನಿಮಾ
ಹಿಂದಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ 12 ನಿನ್ನೆ ಮುಕ್ತಾಯವಾಗಿದೆ. ನಿನ್ನೆ ನಡೆದ ಫಿನಾಲೆಯಲ್ಲಿ ಅಂತಿಮ ಸುತ್ತಿಗೆ ಬಂದಿದ್ದ ಗಾಯಕರು ಪ್ರಶಸ್ತಿಗಾಗಿ ಸೆಣೆಸಾಡಿದರು, ಅಂತಿಮವಾಗಿ ಪ್ರಶಸ್ತಿಯು ಪವನ್ದೀಪ್ ಪಾಲಾಗಿದೆ.
ಸತತವಾಗಿ 12 ಗಂಟೆಗಳ ಕಾಲ ನಡೆದ ಫಿನಾಲೆಯಲ್ಲಿ ಆರು ಸ್ಪರ್ಧಿಗಳು ಪ್ರಶಸ್ತಿಗಾಗಿ ಗಾಯನದ ಮೂಲಕ ಸೆಣಸಾಡಿದರು. ಪವನ್ದೀಪ್ ರಾಜನ್, ಅರುಣಿತಾ ಕಂಜಿಲಾಲ್, ಎಂಡಿ ಧನಿಶ್, ನಿಹಾಲ್ ಟುರೊ, ಶಣ್ಮುಕಪ್ರಿಯ, ಸೈಲ್ ಕಾಂಬ್ಳೆ ಅವರುಗಳು ಫಿನಾಲೆ ವೇದಿಕೆ ಮೇಲೆ ಗಾನ ಸುಧೆ ಹರಿಸಿದರು.
ಅಂತಿಮವಾಗಿ ಪವನ್ದೀಪ್ ರಾಜನ್ ಅನ್ನು ವಿನ್ನರ್ ಆಗಿ ಘೋಷಿಸಲಾಯ್ತು. ಅರುಣಿತಾ ಕಂಜಿಲಾಲ್ ಮೊದಲ ರನರ್ಅಪ್, ಸೈಲ್ ಕಾಂಬ್ಳೆ ಅನ್ನು ಎರಡನೇ ರನ್ನರ್ ಅಪ್ ಆಗಿ ಘೋಷಿಸಲಾಯ್ತು. ಶೋ ವಿಜೇತ ಪವನ್ದೀಪ್ಗೆ 25 ರ ಮೊತ್ತದ ಚೆಕ್ ಹಾಗೂ ಟ್ರೋಫಿಯನ್ನು ನೀಡಲಾಯ್ತು.
ಶೋ ಅನ್ನು ಜಡ್ಜ್ ಮಾಡಿದ ಅನು ಮಲ್ಲಿಕ್, ಹಿಮೇಶ್ ರೆಶಮಿಯಾ, ಸೋನು ಕಕ್ಕರ್ ಅವರುಗಳು ಎಲ್ಲ ಸ್ಪರ್ಧಿಗಳು ಚೆನ್ನಾಗಿ ಹಾಡಿದರೆಂದು ಹುರಿದುಂಬಿಸಿದರು. ಆದರೆ ಪವನ್ದೀಪ್ ರಾಜನ್ ಪ್ರದರ್ಶನ ಅತ್ಯದ್ಭುತವಾಗಿತ್ತೆಂದು ಕೊಂಡಾಡಿದರು.
ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಪವನ್ದೀಪ್ ರಾಜನ್, ''ಇಂಡಿಯನ್ ಐಡಲ್ನಲ್ಲಿ ಭಾಗವಹಿಸಿದ್ದೇ ಕನಸು ನನಸಾದಂಥಹಾ ಅನುಭವ. ಫಿನಾಲೆವರೆಗೆ ಬಂದಿದ್ದು ಇನ್ನೂ ಅದ್ಭುತ ಅನುಭವ. ಶೋನ ವಿಜೇತ ನಾನಾಗಿದ್ದೇನೆ ಎಂಬುದನ್ನು ಇನ್ನೂ ನನಗೆ ನಂಬಲಾಗುತ್ತಿಲ್ಲ. ಇದೊಂದು ದೊಡ್ಡ ಗೌರವ ನನಗೆ. ನನಗೆ ಮತ ಹಾಕಿ ನಾನು ಗೆಲ್ಲುವಂತೆ ಮಾಡಿದ ಎಲ್ಲ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತನೆ. ಇಂಡಿಯನ್ ಐಡಲ್ ವರೆಗೆ ನನ್ನ ಪಯಣದಲ್ಲಿ ಜೊತೆಯಾಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಇಂಡಿಯನ್ ಐಡಲ್ನ ಎಲ್ಲ ಸಂಗೀತಗಾರರಿಗೆ, ನಮ್ಮ ಕೋಚ್ಗಳಿಗೆ ಈ ಟ್ರೋಫಿ ನಿಮ್ಮೆಲ್ಲರಿಗೂ ಸೇರಿದ್ದು'' ಎಂದಿದ್ದಾರೆ.
(Kannada Copy of Filmbeat Kannada)
Pawandeep Rajan took home Indian Idol 12 trophy along with the prize money of Rs lakh. The other finalists were Arunita Kanjilal, Mohd Danish, Sayli Kamble, Nihal Tauro and Shanmukha Priya.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 03:01 pm
Mangalore Correspondent
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm