ಬ್ರೇಕಿಂಗ್ ನ್ಯೂಸ್
17-04-21 05:54 pm Source: FILMIBEAT ಸಿನಿಮಾ
ಬಾಲಿವುಡ್ ನೆಪೋಟಿಸಂ ವಿರುದ್ಧ ನಟಿ ಕಂಗನಾ ರಣಾವತ್ ಮತ್ತೆ ಗುಡುಗಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಬಿಟೌನ್ ಇಂಡಸ್ಟ್ರಿಯ ನೆಪೋಟಿಸಂಗೆ ಸಿಲುಕಿ ಪ್ರಾಣ ಕಳೆದುಕೊಂಡರು. ಈಗ ನೆಪೋಟಿಸಂ ಗ್ಯಾಂಗ್ ಮತ್ತೊಬ್ಬ ಯುವ ಕಾರ್ತಿಕ್ ಆರ್ಯನ್ ಮೇಲೆ ದುಷ್ಟ ಕಣ್ಣಿಟ್ಟಿದೆ ಎಂದು ಕ್ವೀನ್ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದ 'ದೋಸ್ತಾನ-2' ಚಿತ್ರದಿಂದ ಕಾರ್ತಿಕ್ ಆರ್ಯನ್ ಹೊರಬಂದಿದ್ದರು.
ಆರಂಭದಲ್ಲಿ ದೋಸ್ತಾನ 2 ಚಿತ್ರಕ್ಕೆ ಕಾರ್ತಿಕ್ ಆರ್ಯನ್ ನಾಯಕ ಎಂದು ಪ್ರಕಟಿಸಲಾಗಿತ್ತು. ಆದ್ರೀಗ, ಈ ಪ್ರಾಜೆಕ್ಟ್ನಿಂದ ಕಾರ್ತಿಕ್ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಸ್ಪಷ್ಟ ಕಾರಣ ಹೊರಬಿದ್ದಿಲ್ಲ.
ಕಾರಣ ಇಲ್ಲದೇ ಕಾರ್ತಿಕ್ ಆರ್ಯನ್ ಕೈಬಿಟ್ಟಿರುವ ಕರಣ್ ಜೋಹರ್ ಸಂಸ್ಥೆಯ ಈ ನಿರ್ಧಾರದ ವಿರುದ್ಧ ಕಂಗನಾ ರಣಾವತ್ ದನಿ ಎತ್ತಿದ್ದಾರೆ. ಸುಶಾಂತ್ ಸಿಂಗ್ ಅವರಂತೆ ಕಾರ್ತಿಕ್ ಆರ್ಯನ್ ಅವರ ಜೀವನ ಅಂತ್ಯಗೊಳಿಸಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಕಂಗನಾ ಮಾಡಿರುವ ಸರಣಿ ಟ್ವೀಟ್ ಇಲ್ಲಿದೆ. ಮುಂದೆ ಓದಿ...
ನೀವು ರಣಹದ್ದುಗಳು ಅವನನ್ನು ಬಿಟ್ಟುಬಿಡಿ
''ಕಾರ್ತಿಕ್ ಆರ್ಯನ್ ಸ್ವಂತ ಪ್ರತಿಭೆಯಿಂದ ಬಂದಿರುವ ನಟ ಹಾಗೂ ಸ್ವಂತ ಪ್ರತಿಭೆಯಿಂದ ಮುಂದುವರಿಯುವ ಯುವಕ. ನೆಪೋಟಿಸಂ ಗ್ಯಾಂಗ್ಗೆ ನನ್ನ ಮನವಿ ಏನಪ್ಪಾ ಅಂದ್ರೆ ದಯವಿಟ್ಟು ಕಾರ್ತಿಕ್ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಸುಶಾಂತ್ ಸಿಂಗ್ಗೆ ಮಾಡಿದ ರೀತಿ ಅವರ ಹಿಂದೆ ಹೋಗಿ ನೇಣು ಬಿಗಿದುಕೊಳ್ಳುವಂತೆ ಒತ್ತಾಯಿಸಬೇಡಿ. ನೀವು ರಣಹದ್ದುಗಳು ಅವನನ್ನು ಬಿಟ್ಟುಬಿಡಿ'' ಎಂದಿದ್ದಾರೆ ಕಂಗನಾ.

ಈ ಚಿಲ್ಲರೆಗಳಿಗೆ ಹೆದರುವ ಅಗತ್ಯವಿಲ್ಲ
''ಕಾರ್ತಿಕ್ ಈ ಚಿಲ್ಲರೆಗಳಿಗೆ ಹೆದರುವ ಅಗತ್ಯವಿಲ್ಲ. ಅಸಹ್ಯವಾದ ಲೇಖನಗಳು ಹಾಗೂ ಪ್ರಕಟಣೆಗಳನ್ನು ಬಿಡುಗಡೆ ಮಾಡುವುದರ ಮೂಲಕ ನಿಮ್ಮ ವ್ಯಕ್ತಿತ್ವದ ಮೇಲೆ ಮಸಿ ಬಳಿಯುವ ಪ್ರಯತ್ನ ಇದಾಗಿರುತ್ತದೆ. ಸುಶಾಂತ್ ಸಿಂಗ್ ಅವರ ಮೇಲೂ ಡ್ರಗ್ಸ್ ವ್ಯಸನ ಹಾಗೂ ವೃತ್ತಿಪರತೆ ಮೇಲೆ ಕಟ್ಟ ಅಭಿಪ್ರಾಯ ಮೂಡಿಸುವ ಕೆಲಸ ಮಾಡಲಾಯಿತು'' ಎಂದು ಕಂಗನಾ ಟೀಕಿಸಿದ್ದಾರೆ.

ನಿಮ್ಮ ಜೊತೆ ನಾವು ಇದ್ದೇವೆ
''ನಾವು ನಿಮ್ಮೊಂದಿಗಿದ್ದೇವೆ ಎಂದು ತಿಳಿದುಕೊಳ್ಳಿ, ಇಂದು ನೀವು ಏಕಾಂಗಿಯಾಗಿರಬೇಕು. ಪ್ರತಿಯೊಬ್ಬರಿಗೂ ಈ ನಾಟಕ ತಿಳಿದಿದೆ. ಇದರ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನೀವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಿ, ನಿಮ್ಮ ಪ್ರವೃತ್ತಿಯನ್ನು ನಂಬಿರಿ ಮತ್ತು ಶಿಸ್ತುಬದ್ಧರಾಗಿರಿ'' ಎಂದು ನಟಿ ಕಂಗನಾ ಸಲಹೆ ನೀಡಿದ್ದಾರೆ.

ಬ್ಲಾಕ್ ಲಿಸ್ಟ್ ಮಾಡಿದ ಕರಣ್ ಜೋಹರ್
ಕಾರ್ತಿಕ್ ಆರ್ಯನ್, ಜಾಹ್ನವಿ ಕಪೂರ್ ಹಾಗೂ ನವನಟಿ ಲಕ್ಷ್ಯ ತಾರಬಳಗದಲ್ಲಿ 'ದೋಸ್ತಾನ-2' ಸಿನಿಮಾ ಘೋಷಣೆ ಮಾಡಲಾಗಿತ್ತು. ಆದ್ರೀಗ, ಕಾರ್ತಿಕ್ ಈ ಚಿತ್ರದಿಂದ ಹೊರಬಂದಿದ್ದಾರೆ. ಧರ್ಮ ಪ್ರೊಡಕ್ಷನ್ ಸಂಸ್ಥೆ ಕಾರ್ತಿಕ್ ಆರ್ಯನ್ ಅವರನ್ನು ಬ್ಲಾಕ್ ಲಿಸ್ಟ್ ಮಾಡಿದೆ. ಕರಣ್ ಜೋಹರ್ ಮತ್ತೆ ಕಾರ್ತಿಕ್ ಜೊತೆ ಸಿನಿಮಾ ಮಾಡದಿರಲು ನಿರ್ಧರಿಸಿದ್ದಾರೆ.
This News Article Is A Copy Of FILMIBEAT
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm