ಬ್ರೇಕಿಂಗ್ ನ್ಯೂಸ್
07-04-21 04:23 pm Headline Karnataka News Network ಸಿನಿಮಾ
ಚೆನ್ನೈ, ಎ.7 ; ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟ ಶರತ್ ಕುಮಾರ್ ಹಾಗೂ ಅವರ ಪತ್ನಿ, ನಟಿ ರಾಧಿಕಾಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆನ್ನೈ ವಿಶೇಷ ನ್ಯಾಯಾಲಯ ಒಂದು ವರ್ಷ ಶಿಕ್ಷೆ ವಿಧಿಸಿದೆ.
ಶರತ್ ಕುಮಾರ್ ಹಾಗೂ ನಟಿ ರಾಧಿಕಾ ದಂಪತಿ ಮೇಲಿನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾರಥಿ, ರಾಜಕುಮಾರ್, ಸೀತಾರಾಮ ಕಲ್ಯಾಣ, ಸಂತೆಯಲ್ಲಿ ನಿಂತ ಕಬೀರ ಕನ್ನಡ ಸಿನಿಮಾಗಳಲ್ಲಿ ಶರತ್ ಕುಮಾರ್ ನಟಿಸಿದ್ದಾರೆ. ನಟಿ ರಾಧಿಕಾ ಅವರು ವಿಷ್ಣುವರ್ಧನ್, ದ್ವಾರಕೀಶ್ ಸೇರಿ ಹಲವರ ಜೊತೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರ್ಯಾಡಿಯೆಂಟ್ ಮೀಡಿಯಾ ದೂರಿನ ಪ್ರಕಾರ, ಪಾಲುದಾರಿಕೆ ಹೊಂದಿದ್ದ ಶರತ್ ಕುಮಾರ್, ರಾಧಿಕಾ, ಲಿಸ್ಟಿನ್ ಅವರು ರ್ಯಾಡಿಯೆಂಟ್ ಸಂಸ್ಥೆಯಿಂದ 1.50 ಕೋಟಿ ರೂಪಾಯಿ ಹಣ ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತೆಯಾಗಿ ಎರಡು ಚೆಕ್ಗಳನ್ನು ನೀಡಿದ್ದರು. ನಂತರ ಶರತ್ ಕುಮಾರ್ 50 ಲಕ್ಷ ರೂಪಾಯಿ ಕೈಸಾಲ ಪಡೆದು ಹತ್ತು ಲಕ್ಷ ಮೌಲ್ಯದ ಐದು ಚೆಕ್ಗಳನ್ನು ಭದ್ರತೆಯಾಗಿ ನೀಡಿದ್ದರು. ಆದರೆ ಚೆಕ್ಗಳನ್ನು ನಗದು ಮಾಡಿಕೊಳ್ಳಲು ಬ್ಯಾಂಕಿಗೆ ಸಲ್ಲಿಸಿದಾಗ ಏಳೂ ಚೆಕ್ಗಳು ಬೌನ್ಸ್ ಆಗಿವೆ. ಹಾಗಾಗಿ ಶರತ್ ಕುಮಾರ್, ರಾಧಿಕಾ ಹಾಗೂ ಲಿಸ್ಟಿನ್ ವಿರುದ್ಧ ಸಿನಿಮಾ ಫೋನ್ ಯಾನ್ ಸ್ ಸಂಸ್ಥೆಯಾದ ರ್ಯಾಡಿಯಂಟ್ ಮೀಡಿಯಾ ಸಂಸ್ಥೆ ದೂರು ದಾಖಲಿಸಿತ್ತು.
2015 ರಲ್ಲಿ ಶರತ್ ಕುಮಾರ್, ರಾಧಿಕಾ ಒಡೆತನದ 'ಮ್ಯಾಜಿಕ್ ಫ್ರೇಮ್ಸ್' ಸಂಸ್ಥೆಯಿಂದ 'ಇದು ಎನ್ನ ಮಾಯಂ' ಹೆಸರಿನ ತಮಿಳು ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದರು. ಸಿನಿಮಾದಲ್ಲಿ ಕೀರ್ತಿ ಸುರೇಶ್, ನಟ ವಿಕ್ರಂ ಪ್ರಭು, ಕನ್ನಡದ ನಟಿ ಕಾವ್ಯಾ ಶೆಟ್ಟಿ, ನಾಸರ್ ಅವರುಗಳು ನಟಿಸಿದ್ದರು. ಈ ಸಿನಿಮಾ ನಿರ್ಮಾಣಕ್ಕಾಗಿಯೇ ಶರತ್ ಕುಮಾರ್ ರ್ಯಾಡಿಯೆಂಟ್ ಸಂಸ್ಥೆಯಿಂದ 2 ಕೋಟಿ ಹಣ ಸಾಲ ಪಡೆದಿದ್ದರು.
The Special Court trying cases against MP and MLAs on Wednesday convicted actor couple Sarathkumar, Radhika and one other person in a 2018 cheque bounce case and sentenced them to one year's imprisonment. The court also imposed a penalty of Rs 5 crores in connection with the case.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm