ಬ್ರೇಕಿಂಗ್ ನ್ಯೂಸ್
22-03-21 11:57 am Source: FILMIBEAT ಸಿನಿಮಾ
ಕೊರೊನಾ ಲಾಕ್ಡೌನ್ ನಂತರ ನಟ ಸೋನು ಸೂದ್ ಎಂಬ 'ಖಳನಟ'ನ ಮಾನವೀಯ ಮುಖ ದೇಶಕ್ಕೆ ಪರಿಚಯವಾಯ್ತು. ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರು, ಬಡವರ ಪಾಲಿಗೆ ದೇವರಂತೆ ಒದಗಿಬಂದ ಸೋನು ಸೂದ್, ಲಾಕ್ಡೌನ್ನಿಂದಾಗಿ ಬೇರೆ-ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಮಂದಿಯನ್ನು ತಮ್ಮದೇ ಖರ್ಚಿನ ಮೂಲಕ ಅವರವರ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದರು. ಕೊರೊನಾ ಸಮಯದಲ್ಲಿ ಸೋನು ಸೂದ್ ಮಾಡಿದ ಕಾರ್ಯ ದೇಶವ್ಯಾಪಿ ಪ್ರಶಂಸೆಗೆ ಪ್ರಾಪ್ತಿಯಾಯಿತು. ಖಳನಟನ ಪಾತ್ರಗಳಲ್ಲಿ ನಟಿಸುತ್ತಿದ್ದ ಸೋನು ಸೂದ್ ನಿಜಜೀವನದಲ್ಲಿ 'ಹೀರೋ' ಎಂಬುದು ಮನದಟ್ಟಾಯಿತು.
ಇದೀಗ ಜನಪ್ರಿಯ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಸೋನು ಸೂದ್ಗೆ ಗೌರವ ಸೂಚಿಸಲೆಂದು, ತನ್ನ ವಿಮಾನದ ಮೇಲೆ ದೊಡ್ಡದಾಗಿ ಸೋನು ಸೂದ್ರ ಚಿತ್ರವನ್ನು ಪ್ರಕಟಿಸಿದೆ. ಜೊತೆಗೆ 'ಸಂರಕ್ಷಕ ಸೋನು ಸೂದ್ಗೆ ಸೆಲ್ಯೂಟ್' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದಾರೆ. ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಸೋನು ಸೂದ್,
'ಪಂಜಾಬ್ನ ಮೋಗಾ ದಿಂದ ಮುಂಬೈಗೆ ರಿಸರ್ವ್ ಇಲ್ಲದ ಟಿಕೆಟ್ನಲ್ಲಿ ಪ್ರಯಾಣಿಸುತ್ತಿದ್ದಿದ್ದು ಇನ್ನೂ ನೆನಪಿದೆ. ಈ ಪ್ರೀತಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ. ನನ್ನ ಪೋಷಕರನ್ನು ನಾನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ ಸೋನು.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಸೋನು ಸೂದ್ ಅವರ ರೈಲ್ವೆ ಪಾಸ್ನ ಚಿತ್ರವೊಂದು ವೈರಲ್ ಆಗಿತ್ತು. ರೈಲಿನಲ್ಲಿ ಓಡಾಡಲು ಕಷ್ಟಪಡುತ್ತಿದ್ದ ಸೋನು ಸೂದ್ ಇಂದು ಸಾವಿರಾರು ಜನರನ್ನು ವಿಮಾನಗಳ ಮೂಲಕ ಮನೆಗಳಿಗೆ ಕಳಿಸುತ್ತಿದ್ದಾರೆ ಎಂಬ ವಾಕ್ಯಗಳೊಂದಿಗೆ ಆ ಚಿತ್ರ ಸಖತ್ ವೈರಲ್ ಆಗಿತ್ತು. ಮುಂಬೈನ ಲೋಕಲ್ ರೈಲಿನಲ್ಲಿ ಪಾಸ್ ಪಡೆದು ಓಡಾಡುತ್ತಿದ್ದ ಸೋನು ಸೂದ್ ಚಿತ್ರ ಇಂದು ವಿಮಾನದ ಮೇಲೆ ಮದ್ರಿತವಾಗಿದೆ.
This News Article Is A Copy Of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am