ಬ್ರೇಕಿಂಗ್ ನ್ಯೂಸ್
18-03-21 01:03 pm Source: FILMIBEAT ಸಿನಿಮಾ
ಸಣ್ಣ ಪಾತ್ರ ಮಾಡಿದವರಿಗೂ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ 'ಕೆಜಿಎಫ್'. ನಟಿಸಿದವರಿಗೆ ಮಾತ್ರವಲ್ಲ ತಂತ್ರಜ್ಞರಿಗೆ, ತೆರೆ ಹಿಂದೆ ಕೆಲಸ ಮಾಡಿದವರಿಗೂ ದೊಡ್ಡ ಹೆಸರನ್ನು ಗಳಿಸಿಕೊಟ್ಟಿದೆ ಕೆಜಿಎಫ್. ಕೆಜಿಎಫ್ ಸಿನಿಮಾದ ಹಿಂದಿ ಡಬ್ನಲ್ಲಿ 'ಗಲಿ-ಗಲಿ' ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ ಆ ನಂತರ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾದರು.
ಇದೀಗ ಈ ನಟಿ ಮದುವೆ ಆಗುತ್ತಿದ್ದಾರೆ. 'ನಾಗಿನ್' ಧಾರಾವಾಹಿಯಿಂದಲೂ ಸಖತ್ ಖ್ಯಾತಿ ಗಳಿಸಿರುವ ಈ ನಟಿ ಸೂರಜ್ ನಂಬಿಯಾರ್ ಎಂಬುವರೊಂದಿಗೆ ಕೆಲವ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಈ ಇಬ್ಬರೂ ವಿವಾಹವಾಗಲಿದ್ದಾರೆ. ಮೌನಿ ರಾಯ್ ಪೋಷಕರು ಹಾಗೂ ಸೂರಜ್ ನಂಬೂದಿರಿ ಪೋಷಕರು ನಟಿ ಮಂದಿರಾ ಬೇಡಿ ಅವರ ನಿವಾಸದಲ್ಲಿ ಪರಸ್ಪರ ಒಟ್ಟಾಗಿ ಚರ್ಚೆ ನಡೆಸಿದ್ದಾರೆ.
ಈ ಭೇಟಿಗೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವರ್ಷಾರಂಭದಲ್ಲಿ ಮೌನಿ ರಾಯ್ ಅವರು ಸೂರಜ್ ನಂಬಿಯಾರ್ ಅವರ ಕುಟುಂಬದೊಂದಿಗೆ ದುಬೈ ನಲ್ಲಿ ಹೊಸ ವರ್ಷಾಚರಣೆ ಮಾಡಿದ್ದರು. ಆ ವಿಡಿಯೋ ಸಹ ವೈರಲ್ ಆಗಿತ್ತು. ಆಗಲೇ ಮೌನಿ ಹಾಗೂ ಸೂರಜ್ ವಿವಾಹವಾಗುತ್ತಾರೆ ಎನ್ನಲಾಗಿತ್ತು.
ಇದೀಗ ಮಂದಿರಾ ಬೇಡಿ ಮನೆಯಲ್ಲಿ ಪರಸ್ಪರ ಭೇಟಿಯಾಗಿದ್ದ ಈ ಯುವ ಜೋಡಿಯ ಪೋಷಕರು ವಿವಾಹ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇನ್ನು ನಟಿ ಮೌನಿ ರಾಯ್ ಹಲವಾರು ಟಿವಿ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಬಿಗ್ಬಾಸ್ ನಲ್ಲಿಯೂ ಅತಿಥಿಯಾಗಿ ಭಾಗವಹಿಸಿದ್ದಾರೆ.
ನಾಗಿನ್ ಗೂ ಮೊದಲು 'ದೇವೋಂಕಿ ದೇವ್ ಮಹಾದೇವ್' ಧಾರಾವಾಹಿಯಲ್ಲಿ ಸತಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅಮಿತಾಬ್, ರಣಬೀರ್ ಕಪೂರ್, ಆಲಿಯಾ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮೌನಿ ರಾಯ್.
This News Article Is A Copy Of FILMIBEAT
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am