ಬ್ರೇಕಿಂಗ್ ನ್ಯೂಸ್
17-11-21 01:04 pm Mangaluru Correspondent ದೇಶ - ವಿದೇಶ
ನವದೆಹಲಿ, ನ.17: ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ ಸ್ಥಾಪಕ ಮತ್ತು ವಿವಾದಾತ್ಮಕ ಭಾಷಣಕಾರ ಝಾಕಿರ್ ನಾಯ್ಕ್ ಮೇಲಿನ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯ ಮತ್ತೆ 5 ವರ್ಷಗಳಿಗೆ ವಿಸ್ತರಿಸಿದೆ.
ಈ ಬಗ್ಗೆ ಗೃಹ ಸಚಿವಾಲಯದಿಂದ ಆದೇಶ ಹೊರಡಿಸಲಾಗಿದ್ದು, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹೆಸರಲ್ಲಿ ದೇಶದ ಆಂತರಿಕ ಭದ್ರತೆಗೆ ಸವಾಲಾಗಬಲ್ಲ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ದೇಶದ ಶಾಂತಿ, ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತರುವ ಮತ್ತು ಜಾತ್ಯತೀತ ನೆಲೆಗಳಿಗೆ ಅಪಾಯ ಸಾಧ್ಯತೆ ಇದೆ ಅನ್ನುವ ನಿಟ್ಟಿನಲ್ಲಿ ನಿಷೇಧ ಮುಂದುವರಿಸಿದ್ದಾಗಿ ಹೇಳಿದೆ. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಉಲ್ಲೇಖಿಸಿ 2016ರಲ್ಲಿ ಹೊರಡಿಸಿದ್ದ ಆದೇಶವನ್ನು ಗೃಹ ಇಲಾಖೆ ಮತ್ತೆ ಉಲ್ಲೇಖಿಸಿದೆ.
ದೇಶದ್ರೋಹದ ಚಟುವಟಿಕೆಯಡಿ ಇಸ್ಲಾಮಿಕ್ ರೀಸರ್ಚ್ ಫೌಂಡೇಶನನ್ನು ಮೊದಲ ಬಾರಿಗೆ 2016ರ ನವೆಂಬರ್ 17 ರಂದು ಕೇಂದ್ರ ಸರಕಾರ ಐದು ವರ್ಷಗಳ ಅವಧಿಗೆ ನಿಷೇಧ ವಿಧಿಸಿತ್ತು. ಇದೇ ನವೆಂಬರ್ 17ಕ್ಕೆ ನಿಷೇಧ ಅವಧಿ ಮುಗಿಯುವುದರಿಂದ ಅದಕ್ಕೂ ಮೊದಲೇ ನ.15ರಂದು ಮತ್ತೆ ಐದು ವರ್ಷಕ್ಕೆ ಸಂಘಟನೆಯನ್ನು ನಿಷೇಧಿಸಿ ಆದೇಶ ಮಾಡಿದೆ.
ಭಾರತೀಯ ಮೂಲದ ಡಾ.ಝಾಕೀರ್ ನಾಯ್ಕ್ ವಿರುದ್ಧ ಪ್ರಚೋದನಾತ್ಮಕ ಭಾಷಣಗಳಿಂದಾಗಿ 2016ರಲ್ಲಿ ವಿವಿಧ ಕಡೆ ಪ್ರಕರಣ ದಾಖಲಾಗಿತ್ತು. ಸಮುದಾಯಳ ನಡುವೆ ಕಿಚ್ಚು ಹಚ್ಚುವ ಭಾಷಣ ಮತ್ತು ದೇಶವಿರೋಧಿ ಕೃತ್ಯದ ಚಟುವಟಿಕೆ ಹಿನ್ನೆಲೆಯಲ್ಲಿ ಕೇಸು ದಾಖಲಾದ ಬೆನ್ನಲ್ಲೇ ಝಾಕಿರ್ ನಾಯ್ಕ್ ದೇಶ ಬಿಟ್ಟು ಹೋಗಿದ್ದು ಮಲೇಶ್ಯಾದಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತಿದೆ.
The Centre on Monday extended for five years the ban imposed on the Islamic Research Foundation (IRF), headed by India-born preacher Zakir Naik, currently based in Malaysia. The Islamic Research Foundation was first declared an unlawful organisation under the Unlawful Activities (Prevention) Act, 1967 (37 of 1967) by the central government on November 17, 2016.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm