ಬ್ರೇಕಿಂಗ್ ನ್ಯೂಸ್
12-09-20 02:43 pm Headline Karnataka News Network ದೇಶ - ವಿದೇಶ
ಮಂಡ್ಯ, ಸೆಪ್ಟೆಂಬರ್ 12: ಡ್ರಗ್ಸ್ ದಂಧೆಯಲ್ಲಿ ಜಮೀರ್ 100% ಇದ್ದಾರೆ, ಅದರಲ್ಲಿ ಸಂಶಯವಿಲ್ಲ. ರಾಜಕಾರಣದಲ್ಲಿ ಇಂಟರ್ನಲ್ ವ್ಯವಹಾರ ಇಟ್ಟುಕೊಂಡಿರೋದರಿಂದ ಜಮೀರನನ್ನು ಅರೆಸ್ಟ್ ಮಾಡ್ತಿಲ್ಲ. ಹೀಗೆಂದು ಸರಕಾರವನ್ನು ಜರೆದವರು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್.
ಮಂಡ್ಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮುತಾಲಿಕ್, ಈ ಡ್ರಗ್ಸ್ ದಂಧೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳವರೂ ಇದ್ದಾರೆ. ಇವ್ರೀಗ ಧಮ್ ತೋರಿಸಬೇಕು. ಜಮೀರ ಆಗಿರಲಿ, ಯಾರೇ ಇದ್ದರೂ ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ನಟಿ ಸಂಜನಾ ಜೊತೆಗೆ ಆಕೆಯ ಗಂಡ ಅಜೀದ್ ಕೂಡ ಡ್ರಗ್ ದಂಧೆಯಲ್ಲಿ ಇದ್ದಾನೆ. ಇನ್ನು ಲವ್ ಜಿಹಾದ್ ಮತ್ತು ಡ್ರಗ್ಸ್ ದಂಧೆ ಇವೆರಡಕ್ಕೂ ನೇರ ಕನೆಕ್ಟ್ ಇದೆ. ಇವೆಲ್ಲ ಪಾತಕಗಳಿಗೆ ಪಾಕಿಸ್ತಾನದಲ್ಲಿ ಕುಳಿತ ದಾವೂದ್ ಇಬ್ರಾಹಿಮನೇ ಮೂಲ ಪುರುಷ. ಹಿಂದೆ ಅಜೀಮ್ ಅಸ್ತಾನ ಎಂಬ ದೇಶದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿದ್ದಾರೆ. ಬಾಲಿವುಡ್ ಸೇರಿ ಎಲ್ಲ ಕಡೆಯೂ ಇವರ ಕಬಂಧ ಬಾಹು ಇದೆ ಎಂದಿದ್ದಾರೆ ಮುತಾಲಿಕ್.

ಈ ಜಮೀರ ತನ್ನ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರ ನಟ- ನಟಿಯರನ್ನು ಕರೆಸುತ್ತಾರೆ. ಏನ್ ಸುಮ್ನೆ ಬರ್ತಾರಾ ಅವ್ರೆಲ್ಲ.. ವ್ಯವಸ್ಥಿತ ಜಾಲದಲ್ಲಿ ಜಮೀರ್ ಇರೋದು ನಿಶ್ಚಿತವಾಗಿದೆ. ಈಗ ಬಿಜೆಪಿ ಸರಕಾರ ಧಮ್ ತೋರಿಸಬೇಕು. ಜಮೀರ್ ನನ್ನು ಒದ್ದು ಒಳಗೆ ಹಾಕಬೇಕು, ಪಾದರಾಯನಪುರ, ಡಿಜೆ ಹಳ್ಳಿ ಗಲಾಟೆಗೂ ಡ್ರಗ್ಸ್ ಕಾರಣ ಆಗಿತ್ತು. ಆಗೆಲ್ಲ ಜಮೀರ್ ಹೆಸರು ಕೂಡ ಕೇಳಿಬಂದಿತ್ತು. ಈಗ ಅವಕಾಶ ಬಂದಿದೆ, ಈತನನ್ನು ಜೈಲಿಗೆ ತಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಡ್ರಗ್ಸ್ ಪ್ರಕರಣವನ್ನು ಸಿಬಿಐಗೆ ವಹಿಸಬಾರದು. ಸಿಬಿಐ ಬಗ್ಗೆ ವಿಶ್ವಾಸವಿಲ್ಲ. ಎಲ್ಲ ಸೇರಿ ಮುಚ್ಚಿ ಹಾಕುತ್ತಾರೆ ಎಂದು ಹೇಳಿದರು.
Join our WhatsApp group for latest news updates
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm