ಬ್ರೇಕಿಂಗ್ ನ್ಯೂಸ್
26-10-21 05:28 pm Headline Karnataka News Network ದೇಶ - ವಿದೇಶ
ಬೀಜಿಂಗ್, ಅ.26: ಚೀನಾದಲ್ಲಿ ಮತ್ತೆ ಕೊರೊನಾ ಸೋಂಕಿನ ಆತಂಕ ಆವರಿಸಿದೆ. 40 ಲಕ್ಷ ಜನಸಂಖ್ಯೆ ಹೊಂದಿರುವ ಲ್ಯಾನ್ ಝು ಎನ್ನುವ ನಗರದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಅತ್ಯಂತ ಅಗತ್ಯವನ್ನು ಹೊರತುಪಡಿಸಿ ಜನರು ಮನೆಯಿಂದ ಹೊರಬಾರದಂತೆ ಕಟ್ಟಪ್ಪಣೆ ವಿಧಿಸಿದೆ.
ಕಳೆದ ಬಾರಿ 2019ರಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಆವರಿಸಿದಾಗ, ಬೀಜಿಂಗ್ ಸೇರಿದಂತೆ ಚೀನಾದ ನಗರಗಳಲ್ಲಿ ಲಾಕ್ಡೌನ್ ಹೇರಲಾಗಿತ್ತು. ಒಂದು ವರ್ಷದ ನಂತರ ಸೋಂಕು ಕಡಿಮೆಯಾದ ಬಳಿಕ ಜನಜೀವನ ಸಹಜ ಸ್ಥಿತಿಗೆ ಬಂದಿತ್ತು. ಆದರೆ, ಇದೀಗ ಕೆಲವು ನಗರಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮತ್ತೆ ಲಾಕ್ಡೌನ್ ಹೇರಲು ಮುಂದಾಗಿದೆ. ಜಗತ್ತಿನ ಇತರ ರಾಷ್ಟ್ರಗಳು ಕೋವಿಡ್ ಸೋಂಕಿನ ಮಧ್ಯೆಯೇ ಜೀವಿಸಲು ಮುಂದಾಗಿದ್ದರೆ, ಚೀನಾ ತನ್ನಲ್ಲಿ ಲಾಕ್ಡೌನ್ ಹೇರಿದ್ದು ಹೊಸ ಚಿಂತೆಗೆ ಕಾರಣವಾಗಿದೆ.
ಮಂಗಳವಾರ ಚೀನಾದಲ್ಲಿ 29 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ ಆರು ಕೇಸ್ ಚೀನಾದ ಉತ್ತರ ಭಾಗದ ಗ್ಯಾನ್ಸು ಪ್ರಾಂತದ ಲ್ಯಾನ್ ಝು ನಗರ ಒಂದರಲ್ಲೇ ಪತ್ತೆಯಾಗಿದೆ. ಹೀಗಾಗಿ ಆ ನಗರವನ್ನು ಪೂರ್ತಿಯಾಗಿ ಬಂದ್ ಮಾಡಲು ಸರಕಾರ ಆದೇಶ ಮಾಡಿದೆ. ಚೀನಾದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಕಂಡುಬಂದಿದ್ದು ಅ.17ರ ನಂತರ 198 ಪ್ರಕರಣಗಳು ಪತ್ತೆಯಾಗಿವೆ. ಲ್ಯಾನ್ ಝು ನಗರದಲ್ಲಿ 39 ಕೇಸು ಕಂಡುಬಂದಿದೆ.
ಲ್ಯಾನ್ ಝು ನಗರದಲ್ಲಿ ಬಸ್, ಟ್ಯಾಕ್ಸಿ ಓಡಾಟವನ್ನು ಸ್ಥಗಿತಗೊಳಿಸಲಾಗಿದ್ದು ಬೀಜಿಂಗ್ ಸೇರಿದಂತೆ ಇನ್ನಿತರ ನಗರಗಳಿಗೆ ಸಂಚರಿಸುವ ರೈಲುಗಳನ್ನೂ ನಿಲ್ಲಿಸಲಾಗಿದೆ. ಅಗತ್ಯ ವಸ್ತುಗಳು ಮತ್ತು ಮೆಡಿಕಲ್ ಅಂಗಡಿಯನ್ನೂ ಸೀಮಿತಗೊಳಿಸಿದ್ದು, ಜನರು ಅಗತ್ಯ ಕಾರ್ಯಗಳಿಗೆ ಮಾತ್ರ ಹೊರಬರುವಂತೆ ಸೂಚನೆ ನೀಡಲಾಗಿದೆ. ಲ್ಯಾನ್ ಝು ನಗರದಿಂದ ಸಂಪರ್ಕಿಸುವ ವಿಮಾನಗಳನ್ನೂ ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಇಲಾಖೆ ಸೋಂಕು ಹೆಚ್ಚುವ ಬಗ್ಗೆ ಸೂಚನೆ ನೀಡಿದ್ದು ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ.
China placed a city of four million people under lockdown on Tuesday, ordering them not to leave home except in emergencies, in a bid to eradicate a Covid cluster of just a few dozen confirmed cases.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm