ಸಿಂಘು ಗಡಿ ; ರೈತರ ಧರಣಿ ಪ್ರದೇಶದಲ್ಲಿ ಯುವಕನ ಕೈ, ಕಾಲು ಕಡಿದು ಬರ್ಬರ ಕೊಲೆ

15-10-21 06:01 pm       Headline Karnataka News Network   ದೇಶ - ವಿದೇಶ

ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಿರತರಾಗಿರುವ ದೆಹಲಿ – ಹರ್ಯಾಣ ಗಡಿಭಾಗ ಸಿಂಘು ನಲ್ಲಿ 35 ವರ್ಷದ ದಲಿತ ಯುವಕನನ್ನು ಅತ್ಯಂತ ಅಮಾನುಷವಾಗಿ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

ನವದೆಹಲಿ, ಅ.15: ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಿರತರಾಗಿರುವ ದೆಹಲಿ – ಹರ್ಯಾಣ ಗಡಿಭಾಗ ಸಿಂಘು ನಲ್ಲಿ 35 ವರ್ಷದ ದಲಿತ ಯುವಕನನ್ನು ಅತ್ಯಂತ ಅಮಾನುಷವಾಗಿ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

ಪಂಜಾಬ್ ಮೂಲದ ಲಖ್ ಬೀರ್ ಸಿಂಗ್ ಮೃತ ಯುವಕ. ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಸಂಘಟನೆಯ ಕಾರ್ಯಕರ್ತನಲ್ಲ. ಹರ್ಯಾಣದ ಸೋನಿಪತ್ ಜಿಲ್ಲೆಯ ರೈತರ ಪ್ರತಿಭಟನೆ ನಡೆಸುತ್ತಿರುವ ಪ್ರದೇಶ ಕುಂಡ್ಲಿ ಎಂಬಲ್ಲಿ ಈತನ ಶವ ಪತ್ತೆಯಾಗಿದೆ. ಆತನ ಒಂದು ಕಾಲು ಮತ್ತು ಒಂದು ಕೈಯನ್ನು ಕಡಿಯಲಾಗಿತ್ತು. ಅಲ್ಲದೆ, ಕಬ್ಬಿಣದ ಬ್ಯಾರಿಕೇಡಿಗೆ ಶವವನ್ನು ಕಟ್ಟಲಾಗಿತ್ತು.

ಪ್ರತಿಭಟನೆ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು, ಈ ಘಟನೆಯ ಹೊಣೆಯನ್ನು ನಿಹಾಂಗ್ ಸಿಖ್ಖರ ಮೇಲೆ ಹೊರಿಸಿದ್ದಾರೆ. ಯುವಕ ಈ ಹಿಂದೆ ನಿಹಾಂಗ್ ಗ್ರೂಪಿಗೆ ಸೇರಿದ್ದ. ಅವರೇ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಕೃತ್ಯ ಯಾರು ಮಾಡಿದ್ದಾರೆಂದು ತಿಳಿದಿಲ್ಲ. ಪ್ರಕರಣ ದಾಖಲಿಸಿದ್ದು, ವಿಡಿಯೋ ಆಧರಿಸಿ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

The body of a man was found with the right foot and left hand cut off at a farmers' protest site at Singhu on the Haryana-Delhi border. Videos seem to show Nihangs - 'warrior' Sikhs - over the body. A murder case against unknown people has been filed