ಬ್ರೇಕಿಂಗ್ ನ್ಯೂಸ್
11-09-20 11:35 am Headline Karnataka News Network ದೇಶ - ವಿದೇಶ
ಮುಂಬೈ, ಸೆಪ್ಟೆಂಬರ್ 11: ತನ್ನ ಮನೆಯನ್ನು ಕೆಡವಿದ ಸಿಟ್ಟಿನಲ್ಲಿರುವ ನಟಿ ಕಂಗನಾ ರನೌತ್ ಮತ್ತೆ ಶಿವಸೇನೆಯ ವಿರುದ್ಧ ಹರಿಹಾಯ್ದಿದ್ದಾರೆ. ಉದ್ಧವ್ ಠಾಕ್ರೆ ಹೆಸರೆತ್ತದೆ ಟ್ವೀಟ್ ವಾರ್ ನಡೆಸಿರುವ ಕಂಗನಾ, ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತವನ್ನು ಮಾರಿಕೊಂಡಿರುವ ಶಿವಸೇನೆ ಈಗ ಸೋನಿಯಾ ಸೇನೆ ಆಗಿಹೋಗಿದೆ ಎಂದು ಮೂದಲಿಸಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತ ಶಿವಸೇನೆ ಅಧಿಕಾರಕ್ಕಾಗಿ ನಾಚಿಕೆ ಇಲ್ಲದೆ ಹಿಂಬಾಗಿಲ ಮೂಲಕ ಮೈತ್ರಿ ಸರಕಾರ ಮಾಡಿಕೊಂಡಿದೆ. ಆಮೂಲಕ ಶಿವಸೇನೆ ಸೋನಿಯಾ ಸೇನೆ ಆಗಿ ಪರಿವರ್ತನೆ ಆಗುವಂತಾಗಿದೆ ಎಂದು ಹೇಳಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಒಂದು ಸಿದ್ಧಾಂತ ಇಟ್ಟುಕೊಂಡು ಶಿವಸೇನೆಯನ್ನು ಕಟ್ಟಿ ಬೆಳೆಸಿದ್ದರು. ಆದರೆ ಇಂದಿನವರು ಆ ಸಿದ್ಧಾಂತವನ್ನೇ ಮಾರಿಕೊಂಡಿದ್ದಾರೆ. ನಾನು ಇಲ್ಲದಿರುವ ವೇಳೆಯಲ್ಲಿ ನನ್ನ ಮನೆಯನ್ನು ಕೆಡವಿದ ಗೂಂಡಾಗಳನ್ನು ಆಡಳಿತದ ಒಂದು ಅಂಗ ಎನ್ನುವುದಿಲ್ಲ. ಹಾಗೆ ಹೇಳಿ ಸಂವಿಧಾನವನ್ನು ಅಪಮಾನಿಸಲು ಬಯಸುವುದಿಲ್ಲ ಎಂದಿದ್ದಾರೆ.

"ನಿಮ್ಮ ತಂದೆಯ ಒಳ್ಳೆತನದಿಂದ ನೀವು ಸಂಪತ್ತು ಪಡೆದಿರಬಹುದು. ಆದರೆ ನೀವು ಗೌರವ ಬೇಕಿದ್ದರೆ ಅದನ್ನು ಸ್ವತಃ ಗಳಿಸಬೇಕು. ನನ್ನ ಧ್ವನಿಯನ್ನು ನೀವು ಚಿವುಟಬಹುದು. ಆದರೆ ನನ್ನ ಧ್ವನಿ ಸಾವಿರ, ಲಕ್ಷಗಳ ಸಂಖ್ಯೆಯಲ್ಲಿ ಪರಿವರ್ತನೆ ಆಗಿ ನಿಮ್ಮತ್ತ ತೂರಿ ಬರಲಿದೆ. ಹಾಗಾದಾಗ, ನೀವು ಎಷ್ಟು ಮಂದಿಯ ಧ್ವನಿಯನ್ನು ಹತ್ತಿಕ್ಕಬಹುದು. ಸತ್ಯ ಮುಚ್ಚಿಟ್ಟು ಎಷ್ಟು ದಿನ ಓಡಾಡಬಹುದು. ನಿಮ್ಮ ಆಡಳಿತ ಸರ್ವಾಧಿಕಾರಿಯ ರಾಜಪ್ರಭುತ್ವ ಅಷ್ಟೇ ವಿನಾ ಬೇರೇನೂ ಅಲ್ಲ " ಎಂದು ಕಂಗನಾ ಕಟು ಮಾತುಗಳಿಂದ ತಿವಿದಿದ್ದಾರೆ.
ಶಿವಸೇನೆ ಆಗಲೀ, ಮಹಾರಾಷ್ಟ್ರ ಸರಕಾರದಿಂದ ಆಗಲೀ ಕಂಗನಾ ಟ್ವೀಟ್ ಬಗ್ಗೆ ಉತ್ತರ ನೀಡಲು ಮುಂದಾಗಿಲ್ಲ. ಶಿವಸೇನೆಯ ಯಾರು ಕೂಡ ತುಟಿ ಬಿಚ್ಚಬಾರದು ಎಂದು ಹುಕುಂ ಜಾರಿ ಮಾಡಲಾಗಿದೆ. ಅಗತ್ಯ ಬಿದ್ದರೆ ಪಕ್ಷದ ವಕ್ತಾರ ಸಂಜಯ್ ರಾವತ್ ಮಾತಾಡುತ್ತಾರೆ ಎನ್ನುವ ಸೂಚನೆ ನೀಡಲಾಗಿದೆ. ಆದರೆ ಚಿತ್ರನಟಿಯ ತಿವಿಯುವ ಬಾಣಗಳಿಗೆ ಉತ್ತರ ನೀಡಲು ರಾವುತ್ ಕೂಡ ಮುಂದೆ ಬಂದಿಲ್ಲ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm