ಬ್ರೇಕಿಂಗ್ ನ್ಯೂಸ್
11-09-20 11:35 am Headline Karnataka News Network ದೇಶ - ವಿದೇಶ
ಮುಂಬೈ, ಸೆಪ್ಟೆಂಬರ್ 11: ತನ್ನ ಮನೆಯನ್ನು ಕೆಡವಿದ ಸಿಟ್ಟಿನಲ್ಲಿರುವ ನಟಿ ಕಂಗನಾ ರನೌತ್ ಮತ್ತೆ ಶಿವಸೇನೆಯ ವಿರುದ್ಧ ಹರಿಹಾಯ್ದಿದ್ದಾರೆ. ಉದ್ಧವ್ ಠಾಕ್ರೆ ಹೆಸರೆತ್ತದೆ ಟ್ವೀಟ್ ವಾರ್ ನಡೆಸಿರುವ ಕಂಗನಾ, ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತವನ್ನು ಮಾರಿಕೊಂಡಿರುವ ಶಿವಸೇನೆ ಈಗ ಸೋನಿಯಾ ಸೇನೆ ಆಗಿಹೋಗಿದೆ ಎಂದು ಮೂದಲಿಸಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತ ಶಿವಸೇನೆ ಅಧಿಕಾರಕ್ಕಾಗಿ ನಾಚಿಕೆ ಇಲ್ಲದೆ ಹಿಂಬಾಗಿಲ ಮೂಲಕ ಮೈತ್ರಿ ಸರಕಾರ ಮಾಡಿಕೊಂಡಿದೆ. ಆಮೂಲಕ ಶಿವಸೇನೆ ಸೋನಿಯಾ ಸೇನೆ ಆಗಿ ಪರಿವರ್ತನೆ ಆಗುವಂತಾಗಿದೆ ಎಂದು ಹೇಳಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಒಂದು ಸಿದ್ಧಾಂತ ಇಟ್ಟುಕೊಂಡು ಶಿವಸೇನೆಯನ್ನು ಕಟ್ಟಿ ಬೆಳೆಸಿದ್ದರು. ಆದರೆ ಇಂದಿನವರು ಆ ಸಿದ್ಧಾಂತವನ್ನೇ ಮಾರಿಕೊಂಡಿದ್ದಾರೆ. ನಾನು ಇಲ್ಲದಿರುವ ವೇಳೆಯಲ್ಲಿ ನನ್ನ ಮನೆಯನ್ನು ಕೆಡವಿದ ಗೂಂಡಾಗಳನ್ನು ಆಡಳಿತದ ಒಂದು ಅಂಗ ಎನ್ನುವುದಿಲ್ಲ. ಹಾಗೆ ಹೇಳಿ ಸಂವಿಧಾನವನ್ನು ಅಪಮಾನಿಸಲು ಬಯಸುವುದಿಲ್ಲ ಎಂದಿದ್ದಾರೆ.
"ನಿಮ್ಮ ತಂದೆಯ ಒಳ್ಳೆತನದಿಂದ ನೀವು ಸಂಪತ್ತು ಪಡೆದಿರಬಹುದು. ಆದರೆ ನೀವು ಗೌರವ ಬೇಕಿದ್ದರೆ ಅದನ್ನು ಸ್ವತಃ ಗಳಿಸಬೇಕು. ನನ್ನ ಧ್ವನಿಯನ್ನು ನೀವು ಚಿವುಟಬಹುದು. ಆದರೆ ನನ್ನ ಧ್ವನಿ ಸಾವಿರ, ಲಕ್ಷಗಳ ಸಂಖ್ಯೆಯಲ್ಲಿ ಪರಿವರ್ತನೆ ಆಗಿ ನಿಮ್ಮತ್ತ ತೂರಿ ಬರಲಿದೆ. ಹಾಗಾದಾಗ, ನೀವು ಎಷ್ಟು ಮಂದಿಯ ಧ್ವನಿಯನ್ನು ಹತ್ತಿಕ್ಕಬಹುದು. ಸತ್ಯ ಮುಚ್ಚಿಟ್ಟು ಎಷ್ಟು ದಿನ ಓಡಾಡಬಹುದು. ನಿಮ್ಮ ಆಡಳಿತ ಸರ್ವಾಧಿಕಾರಿಯ ರಾಜಪ್ರಭುತ್ವ ಅಷ್ಟೇ ವಿನಾ ಬೇರೇನೂ ಅಲ್ಲ " ಎಂದು ಕಂಗನಾ ಕಟು ಮಾತುಗಳಿಂದ ತಿವಿದಿದ್ದಾರೆ.
ಶಿವಸೇನೆ ಆಗಲೀ, ಮಹಾರಾಷ್ಟ್ರ ಸರಕಾರದಿಂದ ಆಗಲೀ ಕಂಗನಾ ಟ್ವೀಟ್ ಬಗ್ಗೆ ಉತ್ತರ ನೀಡಲು ಮುಂದಾಗಿಲ್ಲ. ಶಿವಸೇನೆಯ ಯಾರು ಕೂಡ ತುಟಿ ಬಿಚ್ಚಬಾರದು ಎಂದು ಹುಕುಂ ಜಾರಿ ಮಾಡಲಾಗಿದೆ. ಅಗತ್ಯ ಬಿದ್ದರೆ ಪಕ್ಷದ ವಕ್ತಾರ ಸಂಜಯ್ ರಾವತ್ ಮಾತಾಡುತ್ತಾರೆ ಎನ್ನುವ ಸೂಚನೆ ನೀಡಲಾಗಿದೆ. ಆದರೆ ಚಿತ್ರನಟಿಯ ತಿವಿಯುವ ಬಾಣಗಳಿಗೆ ಉತ್ತರ ನೀಡಲು ರಾವುತ್ ಕೂಡ ಮುಂದೆ ಬಂದಿಲ್ಲ.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm