ಬ್ರೇಕಿಂಗ್ ನ್ಯೂಸ್
10-09-20 11:32 am Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟೆಂಬರ್ 10: ಇತ್ತೀಚೆಗೆ ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ ಜಿ ವಿಡಿಯೋ ಗೇಮ್ ಮತ್ತೆ ಭಾರತಕ್ಕೆ ಬರಲು ಶತಪ್ರಯತ್ನ ಮಾಡುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದ ಪಬ್ ಜಿ ಗೇಮ್ ಭಾರತದ್ದೇ ಕಂಪನಿ ಒಂದಕ್ಕೆ ವಿತರಣೆಯ ಗುತ್ತಿಗೆ ನೀಡಲು ಬಯಸಿದೆ. ಇದಕ್ಕಾಗಿ ಭಾರತದ ಕಂಪನಿಯ ತಲಾಶೆ ಆರಂಭಿಸಿದೆ.
ಸೌತ್ ಕೊರಿಯಾ ಮೂಲದ ಪಬ್ ಜಿ ಗೇಮ್ಗಳನ್ನು ಚೀನಾ ಮೂಲದ ಟೆನ್ಸೆಂಟ್ ಕಂಪನಿ ಭಾರತ ಮತ್ತು ಚೀನಾದಲ್ಲಿ ಮಾರ್ಕೆಟ್ ಮಾಡಿತ್ತು. ಈಗ ಭಾರತದಲ್ಲಿ ಚೀನಾ ಮೂಲದ ಕಂಪನಿಗಳ ಮೇಲೆ ನಿಯಂತ್ರಣ ಹೇರಿದ್ದರಿಂದ ಟೆನ್ಸೆಂಟ್ ಕಂಪನಿಯ ಜೊತೆಗಿನ ಒಪ್ಪಂದವನ್ನು ಕಡಿದುಕೊಳ್ಳಲಿದ್ದು ಭಾರತದಲ್ಲಿ ಭಾರತದ್ದೇ ಕಂಪನಿಗೆ ವಿತರಣೆ ಹಕ್ಕನ್ನು ನೀಡಲು ಮುಂದಾಗಿದೆ. ಆಮೂಲಕ ಭಾರತೀಯರ ಮನಗೆದ್ದಿದ್ದ ಪಬ್ ಜಿ ಗೇಮ್ಗಳನ್ನು ಮತ್ತೆ ಭಾರತಕ್ಕೆ ತರಲು ಯೋಜನೆ ಹಾಕಲಾಗಿದೆ.
ಹೊಸ ಒಪ್ಪಂದ ಕುದುರಿಸಲಿರುವ ಭಾರತೀಯ ಅಥವಾ ಇನ್ನಾವುದೇ ಕಂಪನಿಗೆ ಸಂಪೂರ್ಣ ಭಾರತೀಯ ಮಾರುಕಟ್ಟೆಯ ಹೊಣೆಯನ್ನು ನೀಡುವ ಭರವಸೆ ನೀಡಿದೆ. ಇದಕ್ಕಾಗಿ ಭಾರತದ್ದೇ ಕಂಪನಿ ಸಿಗಬಹುದೇ ಅನ್ನುವ ನೆಲೆಯಲ್ಲಿ ಪಬ್ ಜಿ ಕಾರ್ಪೊರೇಷನ್ ಹುಡುಕಾಟ ಆರಂಭಿಸಿದೆ. ಭಾರತದಲ್ಲಿ ಅಂದಾಜು 20 ಕೋಟಿ ಗ್ರಾಹಕರು ಪಬ್ ಜಿ ಗೇಮ್ ಆಟಕ್ಕೆ ಇದ್ದರು. ಹೀಗಾಗಿ ಅನಿರೀಕ್ಷಿತ ಎನ್ನುವಂತೆ ಪಬ್ ಜಿಯನ್ನು ಭಾರತ ಸರಕಾರ ಬ್ಯಾನ್ ಮಾಡಿದ್ದು ಕಂಪನಿಗೆ ದೊಡ್ಡ ನಷ್ಟ ಉಂಟುಮಾಡಿತ್ತು. ಚೀನಾದ ಇಲೆಕ್ಟ್ರಾನಿಕ್ ದೈತ್ಯ ಟೆನ್ಸೆಂಟ್ ಕಂಪನಿಯ ಷೇರು ಒಂದೇ ದಿನದಲ್ಲಿ ಪಾತಾಳಕ್ಕೆ ಬಿದ್ದು 14 ಬಿಲಿಯನ್ ಡಾಲರ್ ನಷ್ಟ ಆಗಿತ್ತು ಎನ್ನುವ ಲೆಕ್ಕಾಚಾರ ನೀಡಲಾಗಿತ್ತು.
17-10-25 08:39 pm
HK News Desk
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
17-10-25 05:25 pm
HK News Desk
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
17-10-25 09:36 pm
Mangalore Correspondent
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
17-10-25 03:27 pm
Bangalore Correspondent
Vitla Honeytrap case, Police, Mangalore: ಬಶೀರ...
17-10-25 03:23 pm
ಆತ್ಮಶಕ್ತಿ ಬೆನ್ನಲ್ಲೇ ಒಡಿಯೂರು ಸಹಕಾರಿ ಬ್ಯಾಂಕಿಗೂ...
17-10-25 11:56 am
ಕೆಪಿಸಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಹಲವ...
17-10-25 11:53 am
ಹುಷಾರಿಲ್ಲದ ವೈದ್ಯೆ ಪತ್ನಿಯನ್ನು ಕೈಯಾರೆ ಇಂಜೆಕ್ಷನ್...
15-10-25 04:51 pm