ಬ್ರೇಕಿಂಗ್ ನ್ಯೂಸ್
17-09-21 10:28 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.17 : ಜಿಎಸ್ಟಿ ಮಂಡಳಿ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲನ್ನು ಜಿಎಸ್ಟಿ ವ್ಯಾಪ್ತಿಗೆ ತರುವಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯಗಳು ಒಮ್ಮತಕ್ಕೆ ಬರಲು ವಿಫಲವಾಗಿವೆ. ಪೆಟ್ರೋಲಿಯಂ ಉತ್ಪನ್ನಗಳಿಂದ ರಾಜ್ಯ ಮತ್ತು ಕೇಂದ್ರಕ್ಕೆ ಭರಪೂರ ತೆರಿಗೆಯ ಲಾಭ ದಕ್ಕುತ್ತಿರುವುದರಿಂದ ಇದನ್ನು ಬಿಟ್ಟುಕೊಡಲು ರಾಜ್ಯಗಳು ಕೂಡ ಒಪ್ಪುತ್ತಿರಲಿಲ್ಲ.
ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಯಡಿ ಏಕರೂಪದ ತೆರಿಗೆಗೆ ಒಳಪಡಿಸುವ ಪ್ರಸ್ತಾವಕ್ಕೆ ಮೊದಲಿನಿಂದಲೂ ಕೆಲವು ರಾಜ್ಯಗಳು ವಿರೋಧ ಸೂಚಿಸಿದ್ದವು. ಒಂದೂವರೆ ವರ್ಷಗಳ ನಂತರ ಜಿಎಸ್ಟಿ ಮಂಡಳಿಯ ಸಭೆ ಇಂದು ಲಕ್ನೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದಿತ್ತು. ಸಭೆಯಲ್ಲಿ ಕೆಲವು ಔಷಧಿಗಳಿಗೆ ರಿಯಾಯ್ತಿ ನೀಡಿದರೆ, ಕೆಲವು ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ತೆರಿಗೆ ವಿಧಿಸಲಾಗಿದೆ.
ಆದರೆ, ಪೆಟ್ರೋಲ್, ಡೀಸೆಲ್ ಬಗ್ಗೆ ಅಭಿಪ್ರಾಯ ನೀಡುವುದಕ್ಕೆ ರಾಜ್ಯಗಳು ವಿರೋಧ ಸೂಚಿಸಿವೆ. ಹಾಗಾಗಿ, ಈ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯೇ ಬೇಡವೆಂದು ಸಚಿವೆ ನಿರ್ಮಲಾ ಸೀತಾರಾಮನ್ ನಿರ್ಧಾರಕ್ಕೆ ಬಂದಿದ್ದಾರೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ ಅನ್ನುವ ನಿರೀಕ್ಷೆ ದೇಶಾದ್ಯಂತ ಇತ್ತು. ಕಳೆದ ನಾಲ್ಕು ತಿಂಗಳಿಂದ ಒಂದೇ ಸಮನೆ ತೈಲ ದರ ಏರಿಕೆ ಆಗಿದ್ದರಿಂದ ತೆರಿಗೆಯನ್ನು ಇಳಿಸಲೇಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು. ಜನ ಸಾಮಾನ್ಯರಿಗೂ ತೈಲ ದರ ಭಾರೀ ಹೊರೆ ಆಗಿರುವುದರಿಂದ ತೆರಿಗೆ ಇಳಿಸುವಂತೆ ಆಗ್ರಹ ಬಂದಿತ್ತು.
ಈ ನಡುವೆ, ಕೇರಳ ಹೈಕೋರ್ಟಿನಲ್ಲಿ ಇದೇ ವಿಚಾರದ ಅರ್ಜಿಯಲ್ಲಿ ವಿಚಾರಣೆ ನಡೆದು ಕೇಂದ್ರ ಸರಕಾರಕ್ಕೆ ನೋಟೀಸ್ ನೀಡಲಾಗಿತ್ತು. ಜಿಎಸ್ಟಿ ವ್ಯಾಪ್ತಿಗೆ ಯಾಕೆ ತರಲಾಗಿಲ್ಲ ಎಂದು ಪ್ರಶ್ನಿಸಿ, ಆರು ವಾರದಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿತ್ತು.
Finance Minister Nirmala Sitharaman is chairing the 45th Goods and Services Tax (GST) Council meeting today in Lucknow. The crucial meeting is expected to review over 50 items in the form of rate changes and clarifications.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm