ಬ್ರೇಕಿಂಗ್ ನ್ಯೂಸ್
16-07-21 08:51 pm Headline Karnataka News Network ದೇಶ - ವಿದೇಶ
ಕಂದಹಾರ್, ಜುಲೈ 16: ಅಫ್ಘಾನಿಸ್ತಾನವನ್ನು ಅಮೆರಿಕದ ಪಡೆಗಳು ಬಿಟ್ಟು ಹೋಗುತ್ತಿದ್ದಂತೆ ಪ್ರಬಲವಾಗಿರುವ ತಾಲಿಬಾನ್ ಪಡೆಗಳು ದೇಶದ ಜನರ ಮೇಲೆ ಫತ್ವಾ ಕಾನೂನನ್ನು ಹೇರಿದೆ. ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಮಹಿಳೆಯರು ಹೊರಗೆ ಬಾರದಂತೆ ನಿಷೇಧ ಹೇರಿದೆ.
ಮಹಿಳೆಯರು ಹೊರಗೆ ಬರುವಂತಿಲ್ಲ. ಬರುವುದಿದ್ದರೂ ಜೊತೆಗೆ ಯಾರಾದ್ರೂ ಒಬ್ಬ ಕುಟುಂಬದ ಪುರುಷ ಸದಸ್ಯ ಇರಬೇಕು. ಪುರುಷರು ಗಡ್ಡ ತೆಗೆಯುವಂತಿಲ್ಲ ಎಂದು ಫತ್ವಾ ಕಾನೂನನ್ನು ಜನರ ಮೇಲೆ ಹೇರಲಾಗಿದೆ.
ಅಲ್ಲದೆ, ಗ್ರಾಮಸ್ಥರು ತಮ್ಮಲ್ಲಿರುವ 15 ವರ್ಷ ಮೇಲ್ಪಟ್ಟ ಹೆಣ್ಮಕ್ಕಳು ಮತ್ತು 45 ವರ್ಷದ ಒಳಗಿನ ವಿಧವಾ ಸ್ತ್ರೀಯರ ಪಟ್ಟಿಯನ್ನು ಕೊಡಬೇಕು. ಹೆಣ್ಮಕ್ಕಳನ್ನು ತಾಲಿಬಾನ್ ಚಳವಳಿಗಾರರಿಗೆ ಮದುವೆ ಮಾಡಿಸಬೇಕು. ಈ ಕೆಲಸವನ್ನು ದೇಶದಲ್ಲಿರುವ ಇಮಾಮ್, ಮುಲ್ಲಾಗಳು ಮಾಡಬೇಕು ಎನ್ನುವ ಆದೇಶವುಳ್ಳ ಕರಪತ್ರಗಳು ಅಲ್ಲಿನ ಜಾಲತಾಣದಲ್ಲಿ ವೈರಲ್ ಆಗಿವೆ.
ಆದರೆ, ಈ ಬಗ್ಗೆ ಅಲ್ಲಿನ ಸರಕಾರದ ಕಡೆಯಿಂದ ಆ ರೀತಿಯ ಯಾವುದೇ ಆದೇಶ ಪತ್ರವನ್ನು ನೀಡಲಾಗಿಲ್ಲ ಎಂದು ನಿರಾಕರಿಸಲಾಗಿದೆ. ಇವು ಆಧಾರ ರಹಿತ ಆರೋಪಗಳು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾನೆ. ಆದರೆ, ತಾಲಿಬಾನ್ ಆಕ್ರಮಿತ ಪ್ರದೇಶದ ನಾಗರಿಕರು ಈ ರೀತಿಯ ಆದೇಶ ನೀಡಿರುವುದು ಸತ್ಯ ಎಂದು ಹೇಳಿಕೊಂಡಿದ್ದಾರೆ.
ರಾತ್ರಿ ಹೊತ್ತು ಯಾರು ಕೂಡ ಹೊರಗೆ ಬರುವಂತಿಲ್ಲ. ಕೆಂಪು ಮತ್ತು ಹಸಿರು ಬಟ್ಟೆಯನ್ನು ತೊಡುವಂತಿಲ್ಲ. ಇವು ಅಲ್ಲಿನ ಧ್ವಜದ ಬಣ್ಣವಾಗಿರುವುದರಿಂದ ಅದನ್ನು ಧರಿಸುವಂತಿಲ್ಲ. ಗಂಡಸರು ತಲೆಗೆ ರುಮಾಲು ಸುತ್ತಬೇಕು. ಗಡ್ಡೆ ತೆಗೆಯಬಾರದು. 16 ವರ್ಷದ ಮೇಲ್ಪಟ್ಟ ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ ಎಂದು ತಾಲಿಬಾನಿಗಳು ಆದೇಶ ನೀಡಿರುವುದಾಗಿ ತಜಕಿಸ್ತಾನಕ್ಕೆ ಹೊಂದಿಕೊಂಡಿರುವ ಯುವಾನ್ ಜಿಲ್ಲೆಯ ನಾಗರಿಕರು ಹೇಳಿದ್ದಾರೆ.
Hardline Taliban social norms are allegedly back in some areas of Afghanistan where the group reportedly gained upper hand Days after the Taliban captured a remote district in Afghanistan's north, they issued their first orders in the form of a letter to the local imam, according to a report by noted news agency AFP.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 11:32 am
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm