ಬ್ರೇಕಿಂಗ್ ನ್ಯೂಸ್
24-06-21 11:11 am Headline Karnataka News Network ದೇಶ - ವಿದೇಶ
ಫಿಲಿಪೈನ್ಸ್, ಜೂನ್ 24: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಂಧಿಸಬೇಕಾಗುತ್ತದೆ. ಒಂದೋ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ. ಇಲ್ಲದಿದ್ದರೆ ಫಿಲಿಪೈನ್ಸ್ ಬಿಟ್ಟು ಹೋಗಿ. ಭಾರತಕ್ಕೋ, ಅಮೆರಿಕಕ್ಕೆ ಎಲ್ಲಾದ್ರೂ ಹೋಗಿ ಅಡಗಿಕೊಳ್ಳಿ.. ಹೀಗೆಂದು ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್ ಅಬ್ಬರಿಸಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಕೊರೊನಾ ಸೋಂಕಿಗೆ ಅತಿ ಹೆಚ್ಚು ಪೀಡಿತವಾಗಿರುವ ಫಿಲಿಪೈನ್ಸ್ ದೇಶದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಆದರೆ ಅಲ್ಲಿನ ಜನರು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಅಧ್ಯಕ್ಷ ರೋಡ್ರಿಗೋ, ನನ್ನ ಕೈಯಲ್ಲಿ ತಪ್ಪು ಕೆಲಸ ಮಾಡಿಸಬೇಡಿ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿ ಎದುರಾಗಿದೆ. ಎಲ್ಲರೂ ವ್ಯಾಕ್ಸಿನ್ ಹಾಕಿಸ್ಕೊಳ್ಳಲೇಬೇಕು. ಇಲ್ಲದಿದ್ದರೆ ನಾನು ಬಂಧಿಸಬೇಕಾಗುತ್ತದೆ. ಬಲವಂತವಾಗಿ ವ್ಯಾಕ್ಸಿನ್ ಚುಚ್ಚಬೇಕಾಗುತ್ತದೆ. ನಾವು ಈಗಾಗ್ಲೇ ಕಷ್ಟದಲ್ಲಿದ್ದು, ಇನ್ನಷ್ಟು ಕಠಿಣ ಸ್ಥಿತಿಗೆ ನೂಕಬೇಡಿ ಎಂದಿದ್ದಾರೆ.


ಆದರೆ, ನನ್ನ ಕೈಗಳಲ್ಲಿ ಆ ರೀತಿಯ ಕೆಲಸ ಮಾಡಿಸಬೇಡಿ. ಬಲವಂತದಿಂದ ಚುಚ್ಚುಮದ್ದು ಹಾಕಿಸುವುದನ್ನು ನೀವು ಬಯಸುವುದಿಲ್ಲ ಎಂದು ಗೊತ್ತು. ಆದರೆ, ವ್ಯಾಕ್ಸಿನ್ ಹಾಕಿಸದೇ ಇದ್ದವರು ಇಲ್ಲಿ ಉಳಿಯಬೇಡಿ. ನೀವು ಭಾರತಕ್ಕೋ, ಅಮೆರಿಕಕ್ಕೋ ಹೋಗಿಬಿಡಿ. ನೀವು ಹೆಚ್ಚು ಕಾಲ ಲಸಿಕೆ ಪಡೆಯದೇ ಇಲ್ಲಿ ಉಳಿದುಕೊಂಡರೆ ನೀವೇ ಇಲ್ಲಿ ವೈರಸ್ ಹರಡುತ್ತೀರಿ. ಹಾಗಾಗಿ ಆದಷ್ಟು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ರೋಡ್ರಿಗೋ ಜನರನ್ನು ಬೆದರಿಸಿದ್ದಾರೆ.
ಕೆಲವು ಮೂರ್ಖರು ಲಸಿಕೆ ಪಡೆಯದೇ ಉಳಿದುಕೊಂಡಿದ್ದಾರೆ. ಅವರೇ ವೈರಸನ್ನು ಹೆಚ್ಚು ಹರಡುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳುವಾಗ, ಬೇರೆಯವರಿಗೆ ಹರಡುತ್ತಾರೆ. ಯಾರು ಲಸಿಕೆ ಹಾಕಿಸಿಕೊಳ್ಳದೆ, ಓಡಾಟ ಮಾಡ್ತೀರೋ ಅಂಥವರಿಗೆ ನಾನೇ ವ್ಯಾಕ್ಸಿನ್ ಹಾಕಿಸುತ್ತೇನೆ. ಅವರಿಗೆ ಹಂದಿಗಳಿಗೆ ಕೊಡುವ ivermectin ಇಂಜೆಕ್ಷನ್ ಚುಚ್ಚುತ್ತೇನೆ. ಅದು ನಿಮ್ಮಲ್ಲಿರುವ ವೈರಸ್ಸನ್ನೂ ಕೊಲ್ಲುತ್ತದೆ. ಜೊತೆಗೆ, ನಿಮ್ಮನ್ನೂ ಮುಗಿಸುತ್ತದೆ ಎಂದು ರೋಡ್ರಿಗೋ ಗುಡುಗಿದ್ದಾರೆ.
The Philippines President Rodrigo Duterte said during a public address that people who are not willing to get vaccinated will be arrested. He also asked the vaccine decliners to go to India or America.
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
02-03-26 03:10 pm
HK News Staffer
ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ...
02-03-26 02:26 pm
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ; ಸೆನ್ಸೆಕ್ಸ್ 1,000...
02-03-26 01:34 pm
ಖಮೇನಿ ಯುಗಾಂತ್ಯ; ಹಂಗಾಮಿ ಸುಪ್ರೀಂ ಲೀಡರ್ ಸ್ಥಾನಕ್ಕ...
02-03-26 01:30 pm
Ayatollah Khamenei Killed: ಇರಾನ್ ಪರಮೋಚ್ಚ ನಾಯಕ...
01-03-26 09:52 am
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm