ಬ್ರೇಕಿಂಗ್ ನ್ಯೂಸ್
22-08-20 11:02 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 22: ಭಾರತ ಸರಕಾರ ವಿಶ್ವ ಸಂಸ್ಥೆ ಮತ್ತು ವಿಶ್ವ ರಾಷ್ಟ್ರಗಳಿಗೆ ಹಾಕಿದ ಒತ್ತಡಕ್ಕೆ ಕೊನೆಗೂ ಫಲ ಸಿಕ್ಕಿದೆ. ಪಾಕಿಸ್ಥಾನ ಕಡೆಗೂ ತನ್ನಲ್ಲಿರುವ 88 ಉಗ್ರರ ಪಟ್ಟಿಯನ್ನು ವಿಶ್ವ ಸಂಸ್ಥೆಗೆ ನೀಡಿದ್ದು ಉಗ್ರರಿಗೆ ಆರ್ಥಿಕ ನಿರ್ಬಂಧ ವಿಧಿಸುವುದಾಗಿ ಹೇಳಿಕೊಂಡಿದೆ. ಇದೇ ವೇಳೆ, ಈ ಪಟ್ಟಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನನ್ನೂ ಆ ಪಟ್ಟಿಗೆ ಸೇರಿಸಿದ್ದು ದಾವೂದ್ ಪಾಕಿಸ್ಥಾನದಲ್ಲೇ ಇರುವುದನ್ನು ಒಪ್ಪಿಕೊಂಡಿದೆ.
1993ರ ಮುಂಬೈ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿರುವುದಾಗಿ ಭಾರತ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು. ಆದರೆ, ಪಾಕ್ ಸರಕಾರ ಮಾತ್ರ ದಾವೂದ್ ಪಾಕಿಸ್ತಾನದ ನೆಲದಲ್ಲಿ ಇಲ್ಲ ಎಂದೇ ವಾದಿಸಿತ್ತು. ಈಗ 88 ಮಂದಿಯ ವಿಳಾಸ ಸಹಿತ ಹೆಸರನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ದಾವೂದ್ ವಿಳಾಸ ಕರಾಚಿ, ಕ್ಲಿಫ್ಟನ್ ಮಾರ್ಕೆಟ್ ಏರಿಯಾ ಎಂದು ನಮೂದಿಸಿರುವುದು ಆತನ ಬಗ್ಗೆ ಸುಳ್ಳಾಡುತ್ತಾ ಬಂದ ಪಾಕ್ ಬಣ್ಣವನ್ನು ಬಯಲು ಮಾಡಿದೆ.

ಈಗ ಉಗ್ರರ ವಿಚಾರದಲ್ಲಿ ವಿಶ್ವ ರಾಷ್ಟ್ರಗಳ ಒತ್ತಡಕ್ಕೆ ಮಣಿದ ಪಾಕ್ ಸರಕಾರ ಈಗ ಉಗ್ರರು, ಉಗ್ರ ಸಂಘಟನೆಗಳು ಸೇರಿ 88 ಮಂದಿಯನ್ನು ಗ್ರೇ ಲಿಸ್ಟ್ ಗೆ ಸೇರಿಸಿ ಆದೇಶ ಮಾಡಿದೆ. ಈ ಮೂಲಕ ಉಗ್ರರು ಅಥವಾ ಸಂಘಟನೆಗಳು ವಿದೇಶಗಳಿಂದ ಹಣ ಪಡೆಯುವಂತಿಲ್ಲ. ಪಾಕ್ ನೆಲದಲ್ಲಿ ಹಣದ ವಹಿವಾಟು ಮಾಡುವಂತೆಯೂ ಇಲ್ಲ. ಇವರ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದಾಗಿ ಪಾಕ್ ಹೇಳಿಕೊಂಡಿದೆ. ಇದರಲ್ಲಿ ಮುಂಬೈ ದಾಳಿಗೆ ಸಂಚು ನಡೆಸಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಜೈಶ್ ಇ - ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕೂಡ ಸೇರಿದ್ದಾನೆ. ಅಲ್ಲದೆ, ಉಗ್ರ ಸಂಘಟನೆಗಳಾದ ಜಮಾತ್ ಉದ್ ದಾವಾ, ಜೆಇಎಂ, ತಾಲಿಬಾನ್, ಡಾಯೆಶ್, ಹಕ್ಕಾನಿ ಗ್ರೂಪ್, ಅಲ್ ಕಾಯಿದಾ ಮತ್ತಿತರ ಮುಂಚೂಣಿ ಗುಂಪುಗಳು ಸೇರಿವೆ.
ಭಾರತದ ಪ್ರಧಾನಿ ಮೋದಿ ಅಮೆರಿಕ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಪಾಕಿಸ್ಥಾನವನ್ನು ಉಗ್ರ ಪೋಷಕ ರಾಷ್ಟ್ರವೆಂದು ಪರಿಗಣಿಸುವಂತೆ ಒತ್ತಡ ಹೇರಿದ್ದರು. ಅಲ್ಲದೆ, ವಿಶ್ವಸಂಸ್ಥೆಯಲ್ಲಿ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ರಾಷ್ಟ್ರಗಳು ಆರ್ಥಿಕ ನೆರವು ನೀಡಬಾರದೆಂದು ಒತ್ತಾಯಿಸಿದ್ದರು. ಅಮೆರಿಕ ಆರ್ಥಿಕ ನೆರವು ನಿಲ್ಲಿಸಿದ್ದು ಪಾಕಿಸ್ತಾನ ಸರಕಾರ ಉಗ್ರರ ವಿಚಾರದಲ್ಲಿ ಗಟ್ಟಿ ನಿಲುವು ತಾಳುವಂತೆ ಮಾಡಿದೆ. ಆದರೆ, ಈ ನಿರ್ಬಂಧ ಎಷ್ಟರ ಮಟ್ಟಿಗೆ ಫಲದಾಯಕ ಎನ್ನೋದು ನೋಡಬೇಕಷ್ಟೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm