ಬ್ರೇಕಿಂಗ್ ನ್ಯೂಸ್
20-01-21 02:12 pm Headline Karnataka News Network ದೇಶ - ವಿದೇಶ
ಚೆನ್ನೈ, ಜ.20: ತಮಿಳ್ನಾಡಿನ ಹೆಸರಾಂತ ಉದ್ಯಮಿ, ಮಿಶನರಿಯಾಗಿ ಗುರುತಿಸಲ್ಪಟ್ಟಿರುವ ಜೀಸಸ್ ಕಾಲ್ಸ್ ಎನ್ನುವ ಸಂಸ್ಥೆಯ ನಿರ್ದೇಶಕ ಪೌಲ್ ದಿನಕರನ್ ಗೆ ಸೇರಿದ ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈ, ಕೊಯಂಬತ್ತೂರು ಸೇರಿದಂತೆ ತಮಿಳ್ನಾಡಿನ 28 ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.
ವಿದೇಶಿ ಫಂಡ್ ನಲ್ಲಿ ಅವ್ಯವಹಾರ ಮತ್ತು ಐಟಿ ತೆರಿಗೆ ವಂಚನೆಯ ಬಗ್ಗೆ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನಲ್ಲಿರುವ ಜೀಸಸ್ ಕಾಲ್ಸ್ ಮಿಷನರಿ ಸಂಸ್ಥೆಯ ಪ್ರಧಾನ ಕಚೇರಿ, ಪೌಲ್ ದಿನಕರನ್ ಅವರ ಮನೆ ಮತ್ತು ಕೊಯಂಬತ್ತೂರಿನಲ್ಲಿರುವ ಕಾರುಣ್ಯ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಎನ್ನುವ ಇಂಜಿನಿಯರಿಂಗ್ ಕಾಲೇಜಿನ ಕಚೇರಿಗೂ ದಾಳಿ ನಡೆದಿದೆ.
ಜೀಸಸ್ ಕಾಲ್ಸ್ ಎನ್ನುವ ಮಿಶನರಿ ಸಂಸ್ಥೆಯನ್ನು ಡಿಜಿಎಸ್ ದಿನಕರನ್ 1962ರಲ್ಲಿ ಸ್ಥಾಪಿಸಿದ್ದು, ಸದ್ಯ ಅವರ ಮಗ ಪೌಲ್ ದಿನಕರನ್ ಕುಟುಂಬಸ್ಥರು ನಡೆಸುತ್ತಿದ್ದಾರೆ. ಮಿಶನರಿ ಸಂಸ್ಥೆಯು ದೇಶ- ವಿದೇಶದಲ್ಲಿ ನೂರಾರು ಕಚೇರಿಗಳನ್ನು ಹೊಂದಿದೆ. ರಾಷ್ಟ್ರೀಯ ವಾಹಿನಿಗಳಲ್ಲಿ ಮಿಶನರಿ ಪ್ರಣೀತ ಕಾರ್ಯಕ್ರಮಗಳು ದಿನವೂ ಪ್ರಸಾರವಾಗುತ್ತಿದ್ದು, ಅದರಲ್ಲಿ ಪೌಲ್ ದಿನಕರನ್ ಪ್ರಚಾರಕರಾಗಿ ಭಾಗವಹಿಸುತ್ತಾರೆ. ಅಮೆರಿಕ, ಬ್ರಿಟನ್, ಜರ್ಮನಿ ಹೀಗೆ ಶ್ರೀಮಂತ ದೇಶಗಳಲ್ಲಿ ಕಚೇರಿಯನ್ನು ಹೊಂದಿದ್ದು ವಾರ್ಷಿಕ ಕೋಟ್ಯಂತರ ರೂಪಾಯಿ ಫಂಡ್ ರೂಪದಲ್ಲಿ ಸಂಸ್ಥೆಗೆ ದೇಣಿಗೆ ಬರುತ್ತದೆ. ಇದೇ ಹಣದಲ್ಲಿ ಮಿಶನರಿ ಚಟುವಟಿಕೆಗಳು ನಡೆಯುತ್ತಿದ್ದವು.
ಭಾರತದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮಿಶನರಿ ಸಂಸ್ಥೆಯಾಗಿ ಜೀಸಸ್ ಕಾಲ್ಸ್ ಗುರುತಿಸಲ್ಪಟ್ಟಿದೆ. ದಶಕಗಳಿಂದ ಕಾರ್ಯಾಚರಿಸುತ್ತಿರುವುದರಿಂದ ತಮಿಳುನಾಡಿನಲ್ಲಿ ಭಾರೀ ಸಂಖ್ಯೆಯಲ್ಲಿ ಕ್ರಿಸ್ತಿಯನ್ನರು ಈ ಸಂಸ್ಥೆಯ ಬೆಂಬಲಿಗರಾಗಿದ್ದಾರೆ. ಅಸೆಂಬ್ಲಿ ಚುನಾವಣೆ ಹತ್ತಿರ ಬಂದಿರುವುದರಿಂದ ಮಿಶನರಿ ಅನುಯಾಯಿಗಳು ಡಿಎಂಕೆಗೆ ಬೆಂಬಲ ನೀಡುತ್ತಿದ್ದಾರೆಂಬ ಭಯದಲ್ಲಿ ಇಂಥ ದಾಳಿಯನ್ನು ಆಡಳಿತಾರೂಢ ಎಐಎಡಿಎಂಕೆ ಮಾಡಿಸಿದೆ ಎಂದು ಸಂಸ್ಥೆಯ ಬೆಂಬಲಿಗರು ಕಿಡಿಕಾರಿದ್ದಾರೆ. ಡಿಜಿಎಸ್ ದಿನಕರನ್ ಮತ್ತು ಡಿಎಂಕೆಯ ಕರುಣಾಕರನ್ ಅತ್ಯಾಪ್ತರಾಗಿದ್ದು, ಡಿಜಿಎಸ್ ಸಂಸ್ಥೆ ತಮಿಳ್ನಾಡಿನಲ್ಲಿ ಅಗಾಧ ಪ್ರಮಾಣದಲ್ಲಿ ಬೆಳೆಯಲು ಡಿಎಂಕೆ ಅಭಯ ಇತ್ತು.
The Income Tax department on Wednesday conducted raids at 28 properties across Tamil Nadu belonging to evangelist Dr Paul Dhinakaran over alleged tax evasion.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 11:48 am
Mangalore Correspondent
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm