ಬ್ರೇಕಿಂಗ್ ನ್ಯೂಸ್
03-12-25 03:04 pm HK News Desk ದೇಶ - ವಿದೇಶ
ನವದೆಹಲಿ, ಡಿ.3 : ಅಫ್ಘಾನಿಸ್ತಾನದಲ್ಲಿ ಒಂದು ಕುಟುಂಬದ 13 ಜನರನ್ನು ಕೊಂದ ಹಂತಕನನ್ನು ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಗುಂಡಿಟ್ಟು ಹತ್ಯೆ ಮಾಡಿಸುವ ಮೂಲಕ ಪ್ರತೀಕಾರದ ಶಿಕ್ಷೆ ಜಾರಿ ಮಾಡಲಾಗಿದೆ.
ಅಫ್ಘಾನ್ ಸುಪ್ರೀಂ ಕೋರ್ಟ್ ಆದೇಶ ಮತ್ತು ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಅನುಮೋದನೆಯಂತೆ ಬೃಹತ್ ಮೈದಾನದಲ್ಲಿ ಜನರನ್ನು ಸೇರಿಸಿ ಕ್ರೂರವಾಗಿ ಮರಣ ದಂಡನೆಯನ್ನು ನೀಡಲಾಗಿದೆ. ಈ ಶಿಕ್ಷೆಯನ್ನು ಸುಮಾರು 80,000 ಜನರು ವೀಕ್ಷಿಸಿದ್ದಾರೆ ಎನ್ನಲಾಗಿದೆ.
ಅಬ್ದುಲ್ ರೆಹಮಾನ್ ಮತ್ತು ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದಿದ್ದ ಅಪರಾಧಕ್ಕಾಗಿ ಮಂಗಲ್ ಎಂಬ ವ್ಯಕ್ತಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕೆಳ ಹಂತದ ಕೋರ್ಟಿನಲ್ಲಿ ಷರಿಯಾ ಕಾನೂನಿನಂತೆ ಕಣ್ಣಿಗೆ ಕಣ್ಣು ಎನ್ನುವ ನ್ಯಾಯದಂತೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಮೂರು ಹಂತದ ಕೋರ್ಟುಗಳಲ್ಲಿ ಶಿಕ್ಷೆ ಘೋಷಣೆಯಾದ ಬಳಿಕ ಸಂತ್ರಸ್ತ ಕುಟುಂಬಕ್ಕೆ ಕ್ಷಮೆ ಮತ್ತು ಶಿಕ್ಷೆ ಜಾರಿಗೊಳಿಸುವ ಕುರಿತು ಆಯ್ಕೆ ನೀಡಲಾಗಿತ್ತು. ಸಂತ್ರಸ್ತ ಕುಟುಂಬ ಕಿಸಾಸ್ಗೆ (ಷರಿಯಾ ಪ್ರಕಾರ ಪ್ರತೀಕಾರ) ಒತ್ತಾಯಿಸಿದ್ದರಿಂದ ಸಾರ್ವಜನಿಕ ಮರಣದಂಡನೆ ಶಿಕ್ಷೆ ಜಾರಿ ಮಾಡಲಾಗಿದೆ.
ವಿಚಿತ್ರ ಅಂದರೆ, ಸಂತ್ರಸ್ತ ಕುಟುಂಬದ 13 ವರ್ಷದ ಬಾಲಕನಿಂದ ಈ ಶಿಕ್ಷೆ ಕೊಡಿಸಲಾಗಿದೆ. ಆರೋಪಿ ಮಂಗಲ್ ಎಂಬ ವ್ಯಕ್ತಿಗೆ ಬಾಲಕ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಮೊದಲಿಗೆ ಆರೋಪಿಯನ್ನು ದೊಡ್ಡ ಮೈದಾನಕ್ಕೆ ಕರೆತಂದಿದ್ದು, ನಂತರ ಷರಿಯಾ ಕಾನೂನಿನಂತೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ವೇಳೆ, ತಾಲಿಬಾನ್ ಅಧಿಕಾರಿಗಳು ಮತ್ತು ಸಂತ್ರಸ್ತರ ಕುಟುಂಬ ಸೇರಿದಂತೆ ಸುಮಾರು 80,000 ಜನರು ಮರಣ ದಂಡನೆಯನ್ನು ವೀಕ್ಷಿಸಿದ್ದಾರೆಂದು ಅಫ್ಘಾನ್ ವರದಿಗಳು ತಿಳಿಸಿವೆ.
ಆರೋಪಿ ಮಂಗಲ್ ಖಾನ್ ರಹೀಂ ಖಾನ್ ಎಂಬಾತನ ಮಗನಾಗಿದ್ದು ಖೋಸ್ಟ್ ಪ್ರಾಂತ್ಯದಲ್ಲಿ ಅಬ್ದುಲ್ ರೆಹಮಾನ್ ಕುಟುಂಬವನ್ನು ಸಾಮೂಹಿಕ ಹತ್ಯೆಗೈದ ಆರೋಪ ಎದುರಿಸುತ್ತಿದ್ದ. 2021ರಲ್ಲಿ ತಾಲಿಬಾನಿಗಳು ಅಧಿಕಾರ ಪಡೆದ ಬಳಿಕ ಜಾರಿಗೊಳಿಸಿದ 11ನೇ ಸಾರ್ವಜನಿಕ ಮರಣ ದಂಡನೆ ಇದಾಗಿದ್ದು ಕಠಿಣ ಷರಿಯಾ ಕಾನೂನನ್ನು ಕಟುವಾಗಿ ಆಚರಣೆಗೆ ತರುತ್ತಿರುವುದನ್ನು ತೋರಿಸಿದೆ.
In Afghanistan, a man convicted of killing 13 members of the same family was executed publicly in accordance with a Supreme Court order approved by Taliban leader Hibatullah Akhundzada. Reports say the execution was carried out before nearly 80,000 people in a large stadium.
15-04-26 03:15 pm
HK News Staffer
ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ ; ಸಿಎಂ ರಾಜ...
14-04-26 02:04 pm
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
15-04-26 05:29 pm
HK News Staffer
ಚಿಕ್ಕೋಡಿಯಲ್ಲಿ ಮಾನಗೇಡಿ ಹತ್ಯೆ; ಪತಿಯನ್ನು ಬಿಟ್ಟು...
15-04-26 05:03 pm
ಕೌಟುಂಬಿಕ ಕಲಹ ; 14 ವರ್ಷದ ಮಗಳನ್ನು ಉಸಿರುಗಟ್ಟಿಸಿ...
14-04-26 11:16 pm
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am