INS Vikrant in Goa, PM Narendra Modi: ಗೋವಾದಲ್ಲಿ ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ಪ್ರಧಾನಿ ಮೋದಿ ದೀಪಾವಳಿ ಆಚರಣೆ ; ಬ್ರಹ್ಮೋಸ್ ಕ್ಷಿಪಣಿಗೆ ಭಾರೀ ಬೇಡಿಕೆ, ಎಲ್ಲ ಶಕ್ತಿಗಿಂತ ಧೈರ್ಯಶಾಲಿ ಯೋಧರೇ ಮಿಗಿಲು ! 

20-10-25 08:34 pm       HK News Desk   ದೇಶ - ವಿದೇಶ

ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದಲ್ಲಿರುವ ಐಎನ್‌ಎಸ್‌ ವಿಕ್ರಾಂತ್‌ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಿಸಿದ್ದಾರೆ. ಇದೇ ವೇಳೆ, ಐಎನ್ಎಸ್ ವಿಕ್ರಾಂತ್, ಬ್ರಹ್ಮೋಸ್ ಕ್ಷಿಪಣಿ, ಬಲಿಷ್ಠ ಭಾರತೀಯ ಸೈನ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಪಣಜಿ, ಅ.20: ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದಲ್ಲಿರುವ ಐಎನ್‌ಎಸ್‌ ವಿಕ್ರಾಂತ್‌ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಿಸಿದ್ದಾರೆ. ಇದೇ ವೇಳೆ, ಐಎನ್ಎಸ್ ವಿಕ್ರಾಂತ್, ಬ್ರಹ್ಮೋಸ್ ಕ್ಷಿಪಣಿ, ಬಲಿಷ್ಠ ಭಾರತೀಯ ಸೈನ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಮ್ಮ ಸರ್ಕಾರವು ಭಾರತವನ್ನು ಜಗತ್ತಿನ ಅತಿದೊಡ್ಡ ರಕ್ಷಣಾ ಸಲಕರಣೆ ರಫ್ತು ದೇಶವನ್ನಾಗಿಸುವ ಗುರಿಯನ್ನು ಹೊಂದಿದೆ. 2014 ರಿಂದ 40ಕ್ಕೂ ಅಧಿಕ ಯುದ್ಧ ನೌಕೆ ಹಾಗೂ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ. ಸ್ವದೇಶಿ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಬಂದಿದೆ ಎಂದು ಹೇಳಿದ್ದಾರೆ. 

ಪ್ರತಿಯೊಬ್ಬರು ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಬಯಸುತ್ತಾರೆ. ನೀವು ನನ್ನ ಕುಟುಂಬವಿದ್ದಂತೆ. ನಿಮ್ಮೊಂದಿಗೆ ಈ ಹಬ್ಬವನ್ನು ಆಚರಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದ ಮೋದಿ, ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಾಂತ್ ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಯುದ್ಧನೌಕೆಯಲ್ಲ, 21ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಸಾಮರ್ಥ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ. 

PM Modi celebrates Diwali aboard INS Vikrant with Navy personnel off Goa  coast

BrahMos strikes fear in minds', says PM Modi onboard INS Vikrant -

Prime Minister Narendra Modi celebrated Diwali aboard India's pride, INS  Vikrant, sharing the festival of lights with naval officers and sailors  stationed off the coast of Goa. He joined them for dinner,

PM Modi Celebrates Diwali with Navy Personnel Aboard INS Vikrant | Udaipur  Kiran

INS Vikrant gave Pakistan sleepless nights,' says PM in Goa

PM Modi marks Diwali with Navy on INS Vikrant, watches MiG-29 fighter jets  take flight | In pics

'ಕೆಲವೇ ತಿಂಗಳ ಹಿಂದೆ, ವಿಕ್ರಾಂತ್ ಹೇಗೆ ಪಾಕಿಸ್ತಾನವನ್ನು ನಿದ್ದೆಗೆಡಿಸುವಂತೆ ಮಾಡಿತ್ತು ಎಂದು ನಾವು ನೋಡಿದ್ದೇವೆ. ಭಾರತದ ನೌಕಾಪಡೆ ಹುಟ್ಟುಹಾಕಿದ "ಭಯ", ವಾಯುಪಡೆಯು ಪ್ರದರ್ಶಿಸಿದ "ಅಸಾಧಾರಣ ಕೌಶಲ್ಯ" ಮತ್ತು ಭೂಸೇನೆಯ "ಶೌರ್ಯ", ಮೂರೂ ಸೇನಾಪಡೆಗಳ "ಅಸಾಧಾರಣ ಸಮನ್ವಯ" ಆಪರೇಷನ್ ಸಿಂಧೂರ ಸಮಯದಲ್ಲಿ ಕೆಲವೇ ದಿನಗಳಲ್ಲಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿತ್ತು ಎಂದು ಸ್ಮರಿಸಿದರು. 

ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಮತ್ತು ಆಕಾಶ್‌ನಂತಹ ಕ್ಷಿಪಣಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಇದರಿಂದಾಗಿ ಪ್ರಪಂಚದ ಹಲವು ದೇಶಗಳು ಈಗ ಈ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ಹೊಂದಿವೆ ಎಂದರು. ನಾನು ಮಿಲಿಟರಿ ಉಪಕರಣಗಳ ಗಮನಿಸುತ್ತಿದ್ದೆ. ಈ ದೊಡ್ಡ ಹಡಗುಗಳು, ಗಾಳಿಗಿಂತ ವೇಗವಾಗಿ ಚಲಿಸುವ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಪ್ರಭಾವಶಾಲಿಯಾಗಿವೆ, ಆದರೆ ಅವುಗಳನ್ನು ನಿಜವಾಗಿಯೂ ಪ್ರಭಾವಶಾಲಿಯಾಗಿಸಿದ್ದು ನಮ್ಮ ಯೋಧರ ಧೈರ್ಯ ಎಂದಿದ್ದಾರೆ.

Prime Minister Narendra Modi celebrated Diwali with Indian Navy personnel aboard the indigenous aircraft carrier INS Vikrant in Goa. During his address, he lauded the strength of India’s armed forces and emphasized the growing global demand for the homegrown BrahMos missile. Modi stated that since 2014, India has built over 40 warships and submarines and aims to become the world’s leading defense exporter.