ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇಂದ್ರ ಪಟೇಲ್ ಬಿಟ್ಟು ಉಳಿದೆಲ್ಲ ಸಚಿವರು ರಾಜಿನಾಮೆ, ಜಾತಿ ಸಮೀಕರಣ ಆಧರಿಸಿ ಹೊಸ ಸಂಪುಟ ರಚನೆಗೆ ಕಸರತ್ತು 

16-10-25 10:52 pm       HK News Desk   ದೇಶ - ವಿದೇಶ

ಗುಜರಾತ್ ನಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಭೂಪೇಂದ್ರ ಪಟೇಲ್ ಹೊರತುಪಡಿಸಿ ಇಡೀ ಸಚಿವ ಸಂಪುಟ ಖಾಲಿಯಾಗಿದ್ದು, ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಜ್ಯದಲ್ಲಿ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಹೊಸತಾಗಿ 27 ಸಚಿವರು ಪ್ರಮಾಣ ಸ್ವೀಕರಿಸಲಿದ್ದಾರೆ. 

ಅಹ್ಮದಾಬಾದ್, ಅ.16 : ಗುಜರಾತ್ ನಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಭೂಪೇಂದ್ರ ಪಟೇಲ್ ಹೊರತುಪಡಿಸಿ ಇಡೀ ಸಚಿವ ಸಂಪುಟ ಖಾಲಿಯಾಗಿದ್ದು, ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಜ್ಯದಲ್ಲಿ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಹೊಸತಾಗಿ 27 ಸಚಿವರು ಪ್ರಮಾಣ ಸ್ವೀಕರಿಸಲಿದ್ದಾರೆ. 

ರಾಜೀನಾಮೆ ನೀಡಿರುವ ಸಚಿವರ ಪೈಕಿ ಯಾರು ಸಚಿವ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ, ಹೊಸತಾಗಿ ಯಾರು ಸಚಿವ ಸ್ಥಾನಕ್ಕೆ ಏರಲಿದ್ದಾರೆ ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗುರುವಾರ ಸಂಜೆ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ಹೊಸ ಸಚಿವರ ಪಟ್ಟಿಯನ್ನು ಸಲ್ಲಿಸಲಿದ್ದಾರೆ‌. ಶುಕ್ರವಾರ ಬೆಳಿಗ್ಗೆ 11:30 ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಪುಟ ಪುನರಚನೆಯು ಹೊಸ ಉಪ ಮುಖ್ಯಮಂತ್ರಿ, ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಮರು ರೂಪಿಸಬಹುದು. ಅನೇಕ ಹೊಸ ಮುಖಗಳು ಸಚಿವ ಸ್ಥಾನಕ್ಕೆ ಬರಲಿದ್ದು, ಕೆಲವು ಹಳೆಯ ಸಚಿವರು ನೇಪಥ್ಯಕ್ಕೆ ಸರಿಯುವ ನಿರೀಕ್ಷೆಯಿದೆ. ಎಲ್ಲಾ ಶಾಸಕರು ಮತ್ತು ನಿರ್ಗಮಿತ ಸಚಿವರು ಗಾಂಧಿನಗರದಲ್ಲೇ ಇರುವಂತೆ ಸೂಚಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಗುಜರಾತ್‌ಗೆ ಬಂದಿದ್ದು, ಪ್ರಮುಖ ರಾಜ್ಯ ನಾಯಕರೊಂದಿಗೆ ಗೌಪ್ಯ ಸಭೆಗಳನ್ನು ನಡೆಸಿದ್ದಾರೆ.

In a dramatic political development, the entire Gujarat Cabinet, except Chief Minister Bhupendra Patel, has resigned ahead of a major reshuffle. A new team of 27 ministers is set to be sworn in on Friday morning at 11:30 AM. The new Cabinet will reportedly be formed based on caste and regional balance, with both fresh and experienced faces likely to find place.