ಬ್ರೇಕಿಂಗ್ ನ್ಯೂಸ್
25-09-25 05:09 pm HK News Desk ದೇಶ - ವಿದೇಶ
ನವದೆಹಲಿ, ಸೆ.25 : ಆಪರೇಷನ್ ಸಿಂಧೂರ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷ ನೆಪದಲ್ಲಿ ಪಾಕ್ ನಾಯಕರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ತಮ್ಮ ಕಂತ್ರಿ ಬುದ್ಧಿ ತೋರಿದ್ದಾರೆ. ಪಾಕಿಸ್ತಾನವು ಶಾಲಾ ಪಠ್ಯಗಳಲ್ಲಿ, "ಭಾರತವೇ ದಾಳಿಗೆ ಪ್ರಚೋದಿಸಿದ್ದು ಪ್ರತಿಯಾಗಿ ಪಾಕ್ ಪಡೆ ದಾಳಿ ನಡೆಸಿ ಭಾರತದ ವಾಯುನೆಲೆಗಳನ್ನು ಧ್ವಂಸಗೊಳಿಸಿತು. ಕೊನೆಗೆ ಪಾಕಿಸ್ತಾನವೇ ಯುದ್ಧ ಗೆದ್ದಿತು ಎಂದು ಸುಳ್ಳು ಸೇರಿಸುವ ಮೂಲಕ ವಿಕೃತಿ ತೋರಿದೆ.
"ಭಾರತ ಆಕ್ರಮಿತ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಭಾರತ ಸುಳ್ಳು ಆರೋಪ ಹೊರಿಸಿದೆ. ಭಾರತೀಯ ಪಡೆಗಳು 2025ರ ಮೇ 6ರಂದು ನಮ್ಮ ಮೇಲೆ ದಾಳಿ ನಡೆಸುವ ಮೂಲಕ ಆಕ್ರಮಣಕಾರಿ ಧೋರಣೆ ಪ್ರದರ್ಶಿಸಿದವು. ಭಾರತದ ದಾಳಿಗೆ ನಮ್ಮ ಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿದವು. ಕಾಶ್ಮೀರದಲ್ಲಿರುವ ಅವರ మిలిటరి ನೆಲೆಗಳನ್ನು ಧ್ವಂಸಗೊಳಿಸಿದವು,'' ಎಂದು ಬಡಾಯಿ ಕೊಚ್ಚಿಕೊಂಡು ಹಸಿ ಸುಳ್ಳುಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ.
"ಭಾರತದ ಡ್ರೋನ್ ದಾಳಿಗೆ ಪಾಕಿಸ್ತಾನವು ಬುನ್ಯಾನ್ -ಉಮ್-ಮರ್ಸೂಸ್' ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತು. ಪಾಕ್ ವಾಯುಪಡೆಯು ಭಾರತದ ವಾಯುನೆಲೆಗಳೂ ಸೇರಿದಂತೆ 26 ವ್ಯೂಹಾತ್ಮಕ ಸೇನಾ ಸ್ಥಳಗಳ ಮೇಲೆ ದಾಳಿ ನಡೆಸಿತು. ಭಾರಿ ನಷ್ಟದ ಬಳಿಕ ಭಾರತವೇ ಶಾಂತಿಗೆ ಮೊರೆಯಿಟ್ಟಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ಮನವಿ ಮೇರೆಗೆ ಪಾಕಿಸ್ತಾನವು ದಾಳಿ ನಿಲ್ಲಿಸಲು ಒಪ್ಪಿತು" ಎಂಬ ಸುಳ್ಳುಗಳನ್ನು ಪಠ್ಯದಲ್ಲಿ ಸೇರಿಸಿ ಹೊಸ ಜನಾಂಗವನ್ನು ಮತ್ತೆ ಭಾರತ ವಿರೋಧಿ ಭಾವನೆ ಬರುವಂತೆ ಪಾಕ್ ವಿಕೃತಿ ಮೆರೆದಿದೆ.
ಭಾರತ ದಾಳಿಗೆ ತತ್ತರಿಸಿದ್ದ ಪಾಕಿಗರು
ಕಳೆದ ಮೇನಲ್ಲಿ ಭಾರತ ನಡೆಸಿದ್ದ 'ಆಪರೇಶನ್ ಸಿಂಧೂರ'ಕ್ಕೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿತ್ತು. ಭಾರತೀಯ ಪಡೆಗಳು ದಾಳಿ ನಡೆಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರೆ ತಯ್ಬಾ, ಜೈಶ್ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು ಅಮೃತಸರ, ಜಮ್ಮು, ಶ್ರೀನಗರ ಸೇರಿ 26 ಸ್ಥಳಗಳ ಮೇಲೆ ಡೋನ್ ದಾಳಿಗೆ ಯತ್ನಿಸಿತ್ತಾದರೂ ಭಾರತದ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯು ಈ ಆಕ್ರಮಣವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಪಾಕ್ನ ಈ ಪ್ರಚೋದನೆಗೆ ಪ್ರತಿಯಾಗಿ ಭಾರತವು ಕ್ಷಿಪಣಿ ದಾಳಿ ಮೂಲಕ ಪಾಕಿಸ್ತಾನದ ಮುರಿದ್, ನೂರ್ ಖಾನ್, ರಫೀಕಿ, ಸರ್ಗೋದಾ, ಚಕ್ ಲಾಲ, ರಹೀಮ್ ಯಾರ್ ಖಾನ್ ವಾಯುನೆಲೆಗಳನ್ನು ಧ್ವಂಸಗೊಳಿಸಿತ್ತು. ಇದರಿಂದ ಬೆಚ್ಚಿಬಿದ್ದ ಪಾಕಿಸ್ತಾನವು ಶಾಂತಿಗಾಗಿ ಭಾರತದ ಬಳಿ ಮೊರೆ ಇಟ್ಟಿತ್ತು.
In a blatant attempt to distort history, Pakistan has inserted false narratives about Operation Sindhoor into its school textbooks, portraying India as the aggressor and itself as the victor. The fabricated accounts claim that during the four-day conflict earlier this year, Pakistan destroyed Indian airbases and forced India to seek peace.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm