ಬ್ರೇಕಿಂಗ್ ನ್ಯೂಸ್
23-09-25 08:29 pm HK News Desk ದೇಶ - ವಿದೇಶ
ನವದೆಹಲಿ, ಸೆ.23: ನವದೆಹಲಿಯ ಚೀನೀ ರಾಯಭಾರ ಕಚೇರಿ ಮೂಲಕ ಬೀಜಿಂಗ್ ಭಾರತದ ರಾಜಕಾರಣಿಗಳನ್ನು ಖರೀದಿಸಲು ಮತ್ತು ದೇಶದಲ್ಲಿ ಆಡಳಿತ ಬದಲಾವಣೆಗಾಗಿ ಸಕ್ರಿಯವಾಗಿ ಪ್ರಯತ್ನದಲ್ಲಿ ತೊಡಗಿದೆ ಎಂದು ಸ್ಫೋಟಕ ಮಾಹಿತಿಯನ್ನು ಟಿಬೆಟ್ ಸರ್ಕಾರದ ಮಾಜಿ ಅಧ್ಯಕ್ಷ ಡಾ. ಲೋಬ್ಸಾಂಗ್ ಸಂಗಯ್ ಬಹಿರಂಗಪಡಿಸಿದ್ದಾರೆ.
"ಗಣ್ಯರ ಸಹಕಾರ ಪಡೆದು ಸರ್ಕಾರ ಬದಲಾಯಿಸುವುದು ಪ್ರಾಚೀನ ಚೀನೀ ತಂತ್ರವಾಗಿದೆ ಎಂದು ಅವರು ಎನ್ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ರಾಜಕೀಯ ನಾಯಕರು, ಬುದ್ಧಿಜೀವಿಗಳು, ಉದ್ಯಮಿಗಳು, ಪತ್ರಕರ್ತರು ಮತ್ತು ಯೂಟ್ಯೂಬರ್ಗಳನ್ನು ಸಹ ಖರೀದಿಸುತ್ತಾರೆ. ಅವರು ಟಿಬೆಟ್, ಕ್ಸಿನ್ಜಿಯಾಂಗ್ ಮತ್ತು ಮಂಗೋಲಿಯಾದಲ್ಲಿ ಹೇಗೆ ನುಸುಳಿದರೋ ಭಾರತದಲ್ಲಿಯೂ ಅದೇ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಡಾ.ಲೋಬ್ಸಾಂಗ್ ಸಂಗಯ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೀಜಿಂಗ್ನ ರಾಜಕೀಯ ತಂತ್ರಗಳಿಗೆ ಭಾರತವೂ ಹೊರತಾಗಿಲ್ಲ. ದೆಹಲಿಯಲ್ಲಿ ನಡೆಯುವ ಚೀನೀ ರಾಯಭಾರ ಕಚೇರಿಯ ರಾಷ್ಟ್ರೀಯ ದಿನಾಚರಣೆಗೆ ಯಾರು ಹಾಜರಾಗುತ್ತಾರೆ ಎಂಬುದನ್ನು ಪರಿಶೀಲಿಸಿ. ಭಾರತದ ರಾಜಕಾರಣಿಗಳು, ವ್ಯಾಪಾರ ಮುಖಂಡರು ಮತ್ತು ಇತರರ ಛಾಯಾಚಿತ್ರಗಳನ್ನು ನೀವು ಕಾಣಬಹುದು. ಅವರೆಲ್ಲರನ್ನೂ ಖರೀದಿಸಿದ್ದಾರೆಂದಲ್ಲ, ಆದರೆ ಚೀನಿಯರು ಆ ಪ್ರಯತ್ನ ಮಾಡುತ್ತಲೇ ಇರುತ್ತಾರೆ" ಎಂದು ಡಾ. ಸಂಗಯ್ ಹೇಳಿದ್ದಾರೆ.
ಭಾರತದ ನೆರೆಹೊರೆ ದೇಶಗಳಲ್ಲಿ ಗೊಂದಲ ಉಂಟಾಗಿರುವ ಉದಾಹರಣೆ ಉಲ್ಲೇಖಿಸಿದ್ದಾರೆ. ಅಲ್ಲೆಲ್ಲಾ ಬೀಜಿಂಗ್ ತನಗೆ ಬೇಕಾದ ಆಡಳಿತಗಳನ್ನು ಬೆಂಬಲಿಸುತ್ತದೆ. ನೇಪಾಳದಲ್ಲಿ ಒಂದು ಪಕ್ಷ ಚೀನಾ ಪರವಾಗಿದ್ದರೆ, ಇನ್ನೊಂದು ಪಕ್ಷ ಭಾರತದ ಪರವಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್ನಲ್ಲಿ, ಚೀನಾ ಆಡಳಿತವೇ ಅಲ್ಲಿನ ನಾಯಕರನ್ನು ಬೆಳೆಸಿದೆ. ಪಾಕಿಸ್ತಾನದಲ್ಲಿ, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಚೀನಾವನ್ನು ಬೆಂಬಲಿಸುತ್ತವೆ. ಇದು ಆ ದೇಶದಲ್ಲಿ ನಾಯಕರನ್ನು ತಮ್ಮತ್ತ ಸೆಳೆಯುವ ತಂತ್ರವಾಗಿದೆ ಎಂದವರು ವಿವರಿಸಿದ್ದಾರೆ.
ಮಾಲ್ಡೀವ್ಸ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳವನ್ನು ಚೀನಾ ಏಕೆ ಬೆಂಬಲಿಸುತ್ತಿದೆ? ಭಾರತದ ಮೇಲೆ ದಾಳಿ ಮಾಡುವ ಭಯೋತ್ಪಾದಕರ ವಿರುದ್ಧದ ವಿಶ್ವಸಂಸ್ಥೆಯ ನಿರ್ಣಯಗಳನ್ನು ಅವರು ಏಕೆ ತಡೆಯುತ್ತಿದ್ದಾರೆ? ಏಕೆಂದರೆ ಅವರು ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ ಎಂದು ಸಂಗಯ್ ಹೇಳಿದರು. ನೀವು ಚೀನಾದೊಂದಿಗೆ ವ್ಯವಹರಿಸಬಹುದು. ಅದರಿಂದ ಲಾಭ ಪಡೆಯಬಹುದು ಎಂದು ಭಾವಿಸಿದರೆ, ಅದು ತಪ್ಪು. ಬೀಜಿಂಗ್ನ ಆಟ ಗಣ್ಯರನ್ನು ಹಿಡಿತದಲ್ಲಿಡುವುದೇ ಆಗಿದೆ ಮತ್ತು ಭಾರತ ತಡವಾಗುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಡಾ. ಸಂಗಯ್ ಹೇಳಿದ್ದಾರೆ.
Former Tibetan government-in-exile president Dr. Lobsang Sangay has made explosive allegations that Beijing, through its embassy in New Delhi, is actively attempting to “buy” Indian politicians and influence regime change in the country.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 07:17 pm
HK News Staffer
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
27-02-26 08:59 pm
Mangalore Correspondent
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
Kuntikana Kidnap, False: ಕುಂಟಿಕಾನದಲ್ಲಿ ಮಕ್ಕಳು...
27-02-26 05:00 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm