ಬ್ರೇಕಿಂಗ್ ನ್ಯೂಸ್
22-09-25 06:58 pm HK News Desk ದೇಶ - ವಿದೇಶ
ನವದೆಹಲಿ, ಸೆ.22: ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ಮಧ್ಯರಾತ್ರಿ ಭಾರೀ ಸ್ಫೋಟ ಸಂಭವಿಸಿದ್ದು, ಉಗ್ರರು, ಸ್ಥಳೀಯ ನಾಗರಿಕರು ಸೇರಿ 24ಕ್ಕೂ ಹೆಚ್ಚು ಸಾವಿಗೀಡಾಗಿದ್ದಾರೆ. ತೆಹ್ರೀಕ್ ಇ- ತಾಲಿಬಾನ್ ಉಗ್ರರು ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಬಾಂಬ್ ತಯಾರಿಸುವ ಕಚ್ಛಾ ಸಾಮಗ್ರಿಗಳನ್ನು ಜನವಸತಿ ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿತ್ತು. ಅವುಗಳಿಗೆ ಬೆಂಕಿ ಹತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದ್ದು ಮಕ್ಕಳು, ಮಹಿಳೆಯರು ಸೇರಿ ಹತ್ತು ಜನ ಸ್ಥಳೀಯ ನಾಗರಿಕರು ಹಾಗೂ 14 ಜನ ಉಗ್ರರು ಸಾವನ್ನಪ್ಪಿದ್ದಾರೆ. ತೆಹ್ರೀಕ್ ಇ- ತಾಲಿಬಾನ್ ಉಗ್ರ ಸಂಘಟನೆಯ ಕಮಾಂಡರ್ ಗಳಾದ ಅಮಾನ್ ಗುಲ್ ಮತ್ತು ಮಸೂದ್ ಖಾನ್ ಕೂಡ ಮೃತರಲ್ಲಿ ಸೇರಿದ್ದಾರೆ ಎಂದು ಸ್ಥಳೀಯ ಪೊಲೀಸರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುವುದು, ಮಸೀದಿಗಳಲ್ಲಿ ಬಾಂಬ್ ತಯಾರಿಸುವ ಕಚ್ಚಾ ವಸ್ತುಗಳನ್ನು ಶೇಖರಿಸಿಡುವ ಆರೋಪ ಅಮಾನ್ ಗುಲ್ ಮತ್ತು ಮಸೂದ್ ಖಾನ್ ಮೇಲಿತ್ತು. ಇದೇ ವೇಳೆ, ಈ ಕೃತ್ಯವನ್ನು ಪಾಕಿಸ್ತಾನದ ಸೇನಾ ಪಡೆಯೇ ನಡೆಸಿದೆ ಎನ್ನುವ ಮಾಹಿತಿಯನ್ನೂ ಸ್ಥಳೀಯರು ಹೇಳುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಸೇನಾಪಡೆಯನ್ನು ಗುರಿಯಾಗಿಸಿ ತೆಹ್ರೀಕ್ ಇ- ತಾಲಿಬಾನ್ ಸಂಘಟನೆ ಬಾಂಬ್ ದಾಳಿ ನಡೆಸಿತ್ತು. ಅದರಲ್ಲಿ 12 ಮಂದಿ ಸೈನಿಕರು ಮಡಿದಿದ್ದು ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ದಕ್ಷಿಣ ವಜೀರಿಸ್ತಾನದಲ್ಲಿ ನಡೆದಿದ್ದ ಬಾಂಬ್ ದಾಳಿಯ ಹೊಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ತೆಹ್ರಿಕ್ ಸಂಘಟನೆ ಹೊತ್ತುಕೊಂಡಿತ್ತು.
ಖೈಬರ್ ಪಕ್ತುಂಖ್ವಾ ಪ್ರಾಂತ್ಯವು ಪಾಕಿಸ್ತಾನ- ಅಫ್ಘಾನಿಸ್ತಾನದ ಗಡಿಯಲ್ಲಿದ್ದು, ಅಫ್ಘಾನಲ್ಲಿ ತಾಲಿಬಾನ್ ಸರ್ಕಾರ ಚಾಲ್ತಿಗೆ ಬಂದ ಬಳಿಕ ಈ ಭಾಗದಲ್ಲಿ ಉಗ್ರವಾದಿ ಕೃತ್ಯಗಳು ಹೆಚ್ಚತೊಡಗಿದೆ. ಇದರ ಹಿಂದೆ ಅಫ್ಘಾನ್ ಕೈವಾಡ ಇದೆಯೆಂದು ಪಾಕ್ ಹೇಳಿದರೆ, ತಾಲಿಬಾನ್ ಸರಕಾರ ನಿರಾಕರಿಸುತ್ತ ಬಂದಿದೆ. ಇದೇ ವೇಳೆ, ಪಾಕಿಸ್ತಾನ ಜೈಲಿನಲ್ಲಿರುವ ಬಹಿಷ್ಕೃತ ನಾಯಕ ಇಮ್ರಾನ್ ಖಾನ್, ಪಾಕ್ ಸರಕಾರವನ್ನು ಟೀಕಿಸಿದ್ದು ಅಮಾಯಕ ಜನರ ಮೇಲೆ ಫೈಟರ್ ಜೆಟ್ ದಾಳಿ ನಡೆಸಿದ್ದರಿಂದ ಈ ದುರಂತ ಆಗಿದೆಯೆಂದು ಹೇಳಿದ್ದಾರೆ.
At least 24 people, including women, children, and militants, were killed in a massive explosion late Sunday night in Pakistan’s Khyber Pakhtunkhwa province. The blast reportedly occurred when crude bomb-making materials hidden inside a mosque by Tehreek-e-Taliban Pakistan (TTP) militants detonated.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm