ಬ್ರೇಕಿಂಗ್ ನ್ಯೂಸ್
16-09-25 10:11 pm HK News Desk ದೇಶ - ವಿದೇಶ
ಲಖನೌ, ಸೆ.16: ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅದರ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ಸರ್ಕಾರ ಬೀದಿನಾಯಿಗಳ ಬಗ್ಗೆ ಹೊಸತೊಂದು ಆದೇಶ ಜಾರಿಗೊಳಿಸಿದೆ. ಅದೇನೆಂದರೆ, ಮನುಷ್ಯರಿಗೆ ಎರಡು ಬಾರಿ ಕಚ್ಚುವ ನಾಯಿಗೆ ಆಜೀವ ಪರ್ಯಂತ ಶಿಕ್ಷೆಯನ್ನು ವಿಧಿಸುವಂತೆ ಅಲ್ಲಿನ ಸರ್ಕಾರ ಆದೇಶಿಸಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಿತ್ ಅವರ ಕಚೇರಿಯಿಂದ ಹೊರಬಿದ್ದಿರುವ ಆದೇಶದಲ್ಲಿ ಹೀಗಿದೆ... ಪದೇ ಪದೇ ರೊಚ್ಚಿಗೇಳುವ ನಾಯಿಗಳು ಯಾವುದೇ ಮನುಷ್ಯನನ್ನು ಕಚ್ಚಿದರೆ, ಆ ನಾಯಿಯನ್ನು ಹತ್ತಿರದ ಶ್ವಾನಕೇಂದ್ರಕ್ಕೆ ಸ್ಥಳೀಯ ಸರ್ಕಾರ ಕರೆದೊಯ್ಯಬೇಕು. ಅಲ್ಲಿ ಆ ನಾಯಿಗೆ ಈ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಒಂದು ವೇಳೆ ಅಂಥ ಶಸ್ತ್ರಚಿಕಿತ್ಸೆ ಆಗಿಲಿದಿದ್ದರೆ ಆ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ 10 ದಿನಗಳವರೆಗೆ ಶ್ವಾನಕೇಂದ್ರದಲ್ಲೇ ಅವಗಾಹನೆಗಾಗಿ ಬಿಡಬೇಕು.
ಒಂದು ವೇಳೆ, ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದ್ದರೂ 10 ದಿನಗಳ ಕಾಲ ಶ್ವಾನಕೇಂದ್ರದಲ್ಲೇ ಆ ನಾಯಿಗಳನ್ನು ಇರಿಸಬೇಕು. ಅಲ್ಲಿಂದ ಆ ಶ್ವಾನಗಳನ್ನು ಬಿಡುಗಡೆ ಮಾಡುವಾಗ ಅದಕ್ಕೆ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಆ ಮೂಲಕ ಆ ನಾಯಿಯು ಮತ್ಯಾರನ್ನಾದರೂ ಕಚ್ಚುತ್ತದೆಯೇ ಎಂಬದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಅದು ಮತ್ತೊಮ್ಮೆ ಮನುಷ್ಯರಿಗೆ ಕಚ್ಚಿದರೆ, ಶ್ವಾನಕೇಂದ್ರದಲ್ಲೇ ಅದನ್ನು ಶಾಶ್ವತವಾಗಿ ಇರಿಸಬೇಕು ಅಂದರೆ, ಆಜೀವ ಪರ್ಯಂತ ಅದಕ್ಕೆ ಜೈಲು ಶಿಕ್ಷೆಯ ರೀತಿಯಲ್ಲಿ ಅದನ್ನು ಶ್ವಾನಕೇಂದ್ರದಲ್ಲೇ ಇರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
Amid growing nationwide concern over the menace of stray dog attacks, the Yogi Adityanath-led Uttar Pradesh government has introduced a strict new policy: any stray dog that bites a human twice will face lifetime detention in a government-run dog shelter.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 09:03 pm
HK News Staffer
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm