ಬ್ರೇಕಿಂಗ್ ನ್ಯೂಸ್
08-08-24 12:34 pm HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್ 8: 50 ಕೇಜಿ ಕುಸ್ತಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕೇವಲ 100 ಗ್ರಾಮ್ ಭಾರದ ಕಾರಣಕ್ಕೆ ಹೊರಬಿದ್ದ ಭಾರತೀಯ ತಾರೆ ವಿನೇಶ್ ಫೋಗಟ್ ಒಲಿಂಪಿಕ್ ಕ್ರೀಡಾ ಕೋರ್ಟ್ ಕದ ತಟ್ಟಿದ್ದಾರೆ.
ಒಲಿಂಪಿಕ್ಸ್ ಕೂಟದ ಯಾವುದೇ ಕ್ರೀಡೆಯಲ್ಲಿ ತಕರಾರು ಉಂಟಾದರೆ, ತಾತ್ಕಾಲಿಕವಾಗಿ ರೂಪಿಸಲಾಗುವ ಮಧ್ಯಸ್ಥಿಕೆ ಕೋರ್ಟಿನಲ್ಲಿ ಪ್ರಶ್ನೆ ಮಾಡಲು ಅವಕಾಶ ಇದೆ. ಅದರಂತೆ, ಫೈನಲ್ ಸುತ್ತಿಗೇರಿದ ತನಗೆ ಬೆಳ್ಳಿ ಪದಕ ಕೊಡಬೇಕೆಂದು ವಿನೇಶ್ ಕೋರ್ಟಿನಲ್ಲಿ ಆಗ್ರಹ ಮಾಡಿದ್ದಾರೆ. ಬುಧವಾರ ಕೋರ್ಟ್ ಕದ ತಟ್ಟಿದ್ದು, ಗುರುವಾರ (ಇಂದು) ಈ ಬಗ್ಗೆ ತೀರ್ಪು ನೀಡಲಿದೆ. ವಿನೇಶ್ ಪರವಾಗಿ ತೀರ್ಪು ಬಂದಲ್ಲಿ ಬೆಳ್ಳಿ ಪದಕ ಭಾರತದ ಪಾಲಾಗಲಿದೆ.
50 ಕೇಜಿ ವಿಭಾಗದಲ್ಲಿ ಕೊನೆ ಕ್ಷಣದಲ್ಲಿ 100 ಗ್ರಾಮ್ ಹೆಚ್ಚುವರಿ ಭಾರ ಹೊಂದಿದ್ದಾರೆಂದು ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್ ಕೂಟದಿಂದ ಅನರ್ಹ ಮಾಡಲಾಗಿತ್ತು. ಇದರಿಂದಾಗಿ ಅಂತಿಮ ಸುತ್ತಿಗೆ ಬಂದಿದ್ದರೂ, ಯಾವುದೇ ಪದಕ ಸಿಗದಂತಾಗಿದೆ. ಕಂಚು ಮತ್ತು ಚಿನ್ನವನ್ನು ಮಾತ್ರ ಕ್ರಮವಾಗಿ ಜಪಾನ್ ಮತ್ತು ಅಮೆರಿಕದ ಕ್ರೀಡಾಪಟುಗಳಿಗೆ ನೀಡಲಾಗಿತ್ತು.
ಏನಿದು ಆರ್ಬಿಟ್ರೇಶನ್ ಕೋರ್ಟ್
1984ರಲ್ಲಿ ವಿಶ್ವ ಮಟ್ಟದ ಕ್ರೀಡಾಕೂಟಗಳಲ್ಲಿ ಎದುರಾಗುವ ತಕರಾರುಗಳ ಬಗ್ಗೆ ತೀರ್ಮಾನಿಸಲು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (ಸಿಎಎಸ್) ರೂಪಿಸಲಾಗಿತ್ತು. ಇದರ ಹೆಡ್ ಕ್ವಾರ್ಟರ್ ಮಾತ್ರ ಸ್ವಿಜರ್ಲೆಂಡಿನಲ್ಲಿದ್ದರೆ, ಕೋರ್ಟ್ ಕಲಾಪ ಅಮೆರಿಕದ ನ್ಯೂಯಾರ್ಕ್ ಮತ್ತು ಸಿಡ್ನಿಯಲ್ಲಿ ನಡೆಯುತ್ತದೆ. ಒಲಿಂಪಿಕ್ಸ್ ಸಂದರ್ಭದಲ್ಲಿ ಮಾತ್ರ ಕೂಟ ನಡೆಯುವ ರಾಷ್ಟ್ರಗಳಲ್ಲೇ ತಾತ್ಕಾಲಿಕ ಕೋರ್ಟ್ ಸ್ಥಾಪನೆಯಾಗುತ್ತದೆ.
A dramatic 24 hours, which began with Vinesh Phogat being disqualified from competing in the gold medal bout for the 50kg weight class for being 100 grams over the permissible limit, ended with Vinesh retiring from the sport in an early morning tweet. “Mom, forgive me. Wrestling beat me, I’ve lost. Your dreams and my courage are broken. I don’t have strength anymore to fight,” she posted on X early on Thursday.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm