ಬ್ರೇಕಿಂಗ್ ನ್ಯೂಸ್
31-07-24 03:36 pm HK News Desk ದೇಶ - ವಿದೇಶ
ವಯನಾಡ್, ಜುಲೈ.31: ಭೀಕರ ಭೂಕುಸಿತ ಸಂಭವಿಸಿದ್ದರಿಂದ ಚೂರಲ್ಮಲ ಎಸ್ಟೇಟ್ ಕ್ವಾಟರ್ಸ್ ಕೊಚ್ಚಿಕೊಂಡು ಹೋಗಿ 9 ಜನ ಕನ್ನಡಿಗರು ನಾಪತ್ತೆಯಗಿದ್ದಾರೆ.
ಗುರುಮಲ್ಲಣ್ಣ (60), ಸಾವಿತ್ರಿ (54), ಸಬೀತಾ (43), ಶಿವಣ್ಣ (50), ಅಪ್ಪಣ್ಣ (39), ಅಶ್ವಿನ್ (13), ಜೀತು (11), ದಿವ್ಯ (35), ರತ್ನ (48) ಜಲಪ್ರಳಯದಲ್ಲಿ ನಾಪತ್ತೆಯಾಗಿರುವ ಕನ್ನಡಿಗರು.
ಘಟನೆಯಲ್ಲಿ 11 ಜನ ನಾಪತ್ತೆಯಾಗಿದ್ದು, ಇಬ್ಬರ ಮೃತದೇಹ ಸಿಕ್ಕಿದೆ. ಇನ್ನೂ 9 ಜನರ ಮೃತದೇಹ ಸಿಗಲಿಲ್ಲ ಎಂದು ತಿಳಿದು ಬಂದಿದೆ.
ನೀರಲ್ಲಿ ಯಾರಿಗೂ ಇಳಿಯುವುದಕ್ಕೆ ಆಗುತ್ತಿಲ್ಲ. ಅವರನ್ನು ಹುಡುಕಬೇಕೆಂದರೆ 90 ಕಿ.ಮೀ. ದೂರ ಹೋಗಿ ಹುಡುಕಬೇಕು. ಆದರೆ ಅವರು ಅಲ್ಲಿ ಇದ್ದಾರೋ, ಇಲ್ವೋ ಗೊತ್ತಿಲ್ಲ? ಇವಾಗ 30-40 ಶವಗಳು ಸಿಕ್ಕಿದ್ದಾವೆ ಎಂದು ಹೇಳುತ್ತಿದ್ದಾರೆ ನೋಡಬೇಕು ಎಂದು ನಾಪತ್ತೆಯಾದವರ ಸಂಬಂಧಿಕ ರವಿ ಅಸಾಹಾಯಕತೆಯನ್ನು ತೊಡಿಕೊಂಡಿದ್ದಾರೆ.
ನಾವು ಸರಕಾರದಿಂದ ಕೊಡಿಸಲಾಗಿದ್ದ ಮನೆಯಲ್ಲಿದ್ದಿವಿ. ನಮ್ಮ ಸಂಬಂಧಿಕರು ಅವರಿದ್ದ ಸ್ವಂತ ಮನೆಯಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಮನೆಯಲ್ಲಿರುವುದರಿಂದ ಹೀಗೆ ಆಗುವುದಿಲ್ಲವೆಂದು ನಂಬಿ ಅವರು ಅಲ್ಲೇ ಉಳಿದುಕೊಂಡಿದ್ದರು. ಹೀಗೆ ಆಗುತ್ತೆ ಎಂದು ಯಾರು ತಿಳಿದುಕೊಂಡಿಲ್ಲ. ಇವಾಗ ಹೋದವರು ನಮ್ಮ ನಾದಿನಿಯ ಕುಟುಂಬದವರು ಎಂದು ಹೇಳುತ್ತಾ, ನಮ್ಮ ದೊಡ್ಡಪ್ಪನ ಮಗಳು ಮತ್ತು ಭಾವನಿಗೆ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ದುಃಖತಪ್ತರಾಗಿ ತಿಳಿಸಿದರು.
2018-19 ರಲ್ಲಿಯೂ ಕೂಡ ಇಲ್ಲಿ ಸ್ವಲ್ಪ ಭೂಕುಸಿತ ಸಂಭವಿಸಿತ್ತು. ಅದರ ಅನುಭವ ನಮಗಿದೆ. ಆ ಹೆದರಿಕೆಯಿಂದ ಜನರು ಬೇರೆ ಕಡೆಗೆ ಸ್ಥಳಾಂತರ ಆಗಿದ್ದರು. ನಾವು ಬಂದಾಗ ಹೆಚ್ಚು ಜನ ಕನ್ನಡಿಗರು ಇಲ್ಲಿ ಇದ್ದರು. ಹೀಗೆ ಆಗಿದ್ದರಿಂದ ಇವಾಗ ಎಲ್ಲರೂ ವಾಪಸ್ ಹೋಗಿದ್ದಾರೆ. ಇವಾಗ 500 ಜನ ಕನ್ನಡಿಗರು ಇಲ್ಲಿ ಇರಬಹುದು ಎಂದವರು ನೆನಪಿಸಿಕೊಂಡರು.
ರವಿ ಮತ್ತು ಅವರ ಸಂಬಂಧಿಕರು ಮೂಲತಃ ಕರ್ನಾಟಕದ ಗುಂಡ್ಲುಪೇಟೆಯ ನಿವಾಸಿಯಾಗಿದ್ದಾರೆ. ಕನ್ನಡಿಗರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕೇರಳದಲ್ಲಿ ಉಂಟಾಗಿರುವ ಭೂ ಕುಸಿತದಲ್ಲಿ ಒಟ್ಟು 9 ಮಂದಿ ಕನ್ನಡಿಗರ ಶವ ಪತ್ತೆಯಾಗಿವೆ. ಚಾಮರಾಜನಗರ ಮೂಲದ ನಾಲ್ವರು, ಮಂಡ್ಯ ಜಿಲ್ಲೆಯ ಮೂವರು, ಕೆಆರ್ ಪೇಟೆ ಮೂಲದ ಇಬ್ಬರು ಕನ್ನಡಿಗರು ಸಾವನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kerala Wayanad landslide, nine from Karnataka found dead. Four people from chamarajanagar, three from mandya and two from KR Pete.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm