ಬ್ರೇಕಿಂಗ್ ನ್ಯೂಸ್
27-07-24 09:15 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 27: ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳು ಜನಸಂಖ್ಯಾ ಸ್ಫೋಟದ ಬಗ್ಗೆ ಚಿಂತೆಯಲ್ಲಿದ್ದರೆ, ಪೂರ್ವೋತ್ತರ ರಾಷ್ಟ್ರ ಜಪಾನ್ ಮಾತ್ರ ಜನಸಂಖ್ಯೆ ಇಳಿಕೆಯಾಗುತ್ತಿರುವ ಚಿಂತೆಯಲ್ಲಿದೆ. ಕಳೆದ 15 ವರ್ಷಗಳಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚು ದಾಖಲಾಗುತ್ತಿದ್ದು ಜಪಾನ್ ಸರಕಾರದ ಚಿಂತೆಗೆ ಕಾರಣವಾಗಿದೆ.
2023ರಲ್ಲಿ ಜಪಾನ್ನ ಒಟ್ಟು ಜನಸಂಖ್ಯೆಯಲ್ಲಿ 5.32 ಲಕ್ಷ ಜನರು ಕಡಿಮೆಯಾಗಿದ್ದಾರೆ. ಈ ವರ್ಷ ದೇಶದಲ್ಲಿ 7.30 ಲಕ್ಷ ಮಕ್ಕಳು ಜನಿಸಿದ್ದು, ಇದು ಸಾರ್ವಕಾಲಿಕವಾಗಿ ಅತಿ ಕಡಿಮೆ ಜನನ ಸಂಖ್ಯೆಯಾಗಿದೆ. ಇದೇ ವರ್ಷ ಜಪಾನ್ನಲ್ಲಿ 15.8 ಲಕ್ಷ ಜನ ಮೃತಪಟ್ಟಿದ್ದಾರೆ. 2024ರ ಜನವರಿ ವರೆಗಿನ ಲೆಕ್ಕಾಚಾರದಲ್ಲಿ ಜಪಾನ್ನ ಒಟ್ಟು ಜನಸಂಖ್ಯೆ 12.49 ಕೋಟಿಗೆ ಕುಸಿತ ಕಂಡಿದೆ. ಉದಾಹರಣೆಗೆ ನಮ್ಮ ದೇಶದ ಉತ್ತರ ಪ್ರದೇಶ ರಾಜ್ಯವೊಂದರ ಜನಸಂಖ್ಯೆಯೇ 24 ಕೋಟಿ ಇದೆ.
ಒಂದು ವೇಳೆ ಜಪಾನ್ನ ಜನಸಂಖ್ಯೆ ಇದೇ ಪ್ರಮಾಣದಲ್ಲಿ ಕುಸಿದರೆ 2070ರ ವೇಳೆ ದೇಶದ ಜನಸಂಖ್ಯೆಯು ಶೇ. 30ಕ್ಕಿಂತ ಹೆಚ್ಚು ಕುಸಿತಗೊಂಡು ಒಟ್ಟು ಸಂಖ್ಯೆ 5.8 ಕೋಟಿಗೆ ಇಳಿಯಬಹುದು. ಈ ಪೈಕಿ 10 ಜನರಲ್ಲಿ ನಾಲ್ಕು ಮಂದಿ 65 ವರ್ಷದ ಮೇಲ್ಪಟ್ಟವರು ಇರಲಿದ್ದಾರೆ. ಹಾಗಾಗಿಯೇ ಜಪಾನ್ಗೆ ಇದು ತಲೆನೋವಿನ ವಿಚಾರವಾಗಿದೆ.
15 ವರ್ಷಗಳಿಂದ ಜನಸಂಖ್ಯೆ ಇಳಿಯುತ್ತಲೇ ಇರುವುದರಿಂದ ಜಪಾನ್ ಸರಕಾರ ದೇಶದಲ್ಲಿ ಜನರ ಸಂಖ್ಯೆ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಕ್ಕಳು ಮಾಡಿಕೊಳ್ಳುವ ದಂಪತಿಗಳಿಗೆ ಪ್ರೋತ್ಸಾಹಧನ ನೀಡಲು ಬಜೆಟ್ನಲ್ಲಿ ಬರೋಬ್ಬರಿ 5.30 ಟ್ರಿಲಿಯನ್ ಯೆನ್ (ಭಾರತೀಯ ರೂಪಾಯಿ ಲೆಕ್ಕದಲ್ಲಿ 2.85 ಲಕ್ಷ ಕೋಟಿ ರೂ.) ಹಣವನ್ನು ಮೀಸಲಿಟ್ಟಿತ್ತು. ಆದರೆ ಈ ಕ್ರಮವೂ ಫಲಕೊಟ್ಟಿಲ್ಲ ಎನ್ನಲಾಗುತ್ತಿದೆ. ಮಹಿಳೆಯರು ಶೋಕಿ ಜೀವನಕ್ಕೆ ಶರಣಾಗಿರುವುದು, ಮದುವೆ ಮಾಡಿ ಮಕ್ಕಳನ್ನು ಸಾಕುವುದಕ್ಕೆ ಹಿಂದೇಟು ಹಾಕುತ್ತಿರುವುದು, ಕುಟುಂಬ ಜೀವನ ತೊರೆಯುವುದು, ಮದುವೆ ಸಂಬಂಧ ಮಾಡಿಕೊಳ್ಳದೇ ಇರುವುದು ಜನಸಂಖ್ಯೆ ಇಳಿಕೆಗೆ ಕಾರಣ ಎನ್ನಲಾಗುತ್ತದೆ.
Japan is currently grappling with a population crisis - as recent government data showed that the country has registered a decline of over half a million (531,700) people in 2023. The number of births in 2023 reached a record low at 730,000, while deaths in Japan also reached a record high at 1.58 million. Japan's total population was 124.9 million as of January 1, according to the Internal Affairs Ministry
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm