ಬ್ರೇಕಿಂಗ್ ನ್ಯೂಸ್
17-05-24 05:59 pm HK News Desk ದೇಶ - ವಿದೇಶ
ಲಕ್ನೋ, ಮೇ.17: ಎಸ್ಪಿ ಮತ್ತು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಮನ ಮಂದಿರಕ್ಕೆ ಬುಲ್ಡೋಜರ್ ನುಗ್ಗಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಾರ್ಟಿಯ ಮುಖಂಡನೊಬ್ಬ ರಾಮ ನವಮಿಯಂದೇ ರಾಮನ ಮಂದಿರ ಉಪಯೋಗಕ್ಕಿಲ್ಲದ್ದು ಎಂದು ಹೇಳುತ್ತಾನೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಸುಪ್ರೀಂ ಕೋರ್ಟಿನ ತೀರ್ಪನ್ನು ರದ್ದುಪಡಿಸುವ ಬಗ್ಗೆ ಮಾತನಾಡುತ್ತದೆ. ಅವರಿಗೆ ಕುಟುಂಬ ಮತ್ತು ಅಧಿಕಾರ ಮಾತ್ರ ಬೇಕು. ಎಸ್ಪಿ ಅಧಿಕಾರಕ್ಕೆ ಬಂದರೆ ರಾಮನ ಮಂದಿರಕ್ಕೆ ಬುಲ್ಜೋಜರ್ ನುಗ್ಗಿಸಿ, ರಾಮನನ್ನು ಮತ್ತೆ ಟೆಂಟಿನಲ್ಲಿ ಕೂರಿಸುವ ಕೆಲಸ ಮಾಡಲಿದ್ದಾರೆ ಎಂದು ಆರೋಪಿಸಿದ ಮೋದಿ, ಆದರೆ ಬುಲ್ಡೋಜರ್ ಎಲ್ಲಿಗೆ ನುಗ್ಗಿಸಬೇಕು ಎನ್ನುವುದನ್ನು ಕಾಂಗ್ರೆಸ್ ಮತ್ತು ಎಸ್ಪಿ ನಾಯಕರು ಉತ್ತರ ಪ್ರದೇಶದ ಸಿಎಂ ಯೋಗಿ ಬಳಿ ಕಲಿಯಬೇಕು ಎಂದು ಹೇಳಿದ್ದಾರೆ.
ಎಸ್ಪಿ- ಕಾಂಗ್ರೆಸ್ ಪಾಲಿಗೆ ವೋಟ್ ಬ್ಯಾಂಕಿಗಿಂತ ಮೇಲಿನದ್ದು ಯಾವುದೂ ಇಲ್ಲ. ತುಷ್ಟೀಕರಣಕ್ಕಾಗಿಯೇ ಶರಣಾಗತಿ ಮಾಡಿಕೊಂಡಿದೆ. ಮೋದಿ ಈ ದೇಶಕ್ಕೆ ತುಷ್ಟೀಕರಣ ರಾಜಕೀಯದ ಸತ್ಯವನ್ನು ಹೇಳುತ್ತಿದ್ದರೆ, ಎಸ್ಪಿ- ಕಾಂಗ್ರೆಸ್ ಮಾತ್ರ ಮೋದಿ ಹಿಂದು- ಮುಸ್ಲಿಮರನ್ನು ಒಡೆಯುತ್ತಿದ್ದಾರೆ ಎಂದು ದೂರುತ್ತಿದೆ. ಇವರ ವೋಟ್ ಬ್ಯಾಂಕ್ ರಾಜಕೀಯವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಮುಸ್ಲಿಂ ಸೋದರಿಯರು ಮತ್ತು ತಾಯಂದಿರು ತ್ರಿಪಲ್ ತಲಾಖ್ ನಿಷೇಧದಿಂದ ಸಂತಸಗೊಂಡಿದ್ದು, ಬಿಜೆಪಿಯನ್ನು ಹರಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಮತ್ತೆ ಗೆಲುವು ಸಾಧಿಸುವುದನ್ನು ತಿಳಿದು ಇಂಡಿಯಾ ಒಕ್ಕೂಟ ನಡುಗುತ್ತಿದೆ. ಜೂನ್ 4ರ ದಿನ ಹೆಚ್ಚು ದೂರವಿಲ್ಲ. ಇಡೀ ಜಗತ್ತು ನೋಡುತ್ತಿದೆ, ಮೋದಿ ಸರಕಾರ ಹ್ಯಾಟ್ರಿಕ್ ಆಗುವುದನ್ನು ಕಾಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
Prime Minister Narendra Modi on Friday claimed that the Congress and Samajwadi Party would bulldoze the Ram temple if elected to power. He suggested they take “tuition” from Uttar Pradesh Chief Minister Yogi Adityanath on “where to run bulldozers.” The Prime Minister made the comment while addressing an election rally in Barabanki, Uttar Pradesh.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm