ಬ್ರೇಕಿಂಗ್ ನ್ಯೂಸ್
30-04-24 02:52 pm HK News Desk ದೇಶ - ವಿದೇಶ
ನವದೆಹಲಿ, ಎ.30: ಭಾರತದಲ್ಲಿ ಕೋವಿಶೀಲ್ಡ್ ಹೆಸರಲ್ಲಿ ಕೋವಿಡ್ ಸೋಂಕಿಗೆ ಎದುರಾಗಿ ನೀಡಲಾಗಿದ್ದ ಆಕ್ಸ್ ಫರ್ಡ್ ಆಸ್ಟ್ರಾ ಜೆನೆಕಾ ಕಂಪನಿಯ ವ್ಯಾಕ್ಸಿನ್ ಅಪರೂಪಕ್ಕೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಮಾತೃ ಕಂಪನಿ ಮೊದಲ ಬಾರಿಗೆ ಕೋರ್ಟಿನಲ್ಲಿ ಒಪ್ಪಿಕೊಂಡಿದೆ.
ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಈ ವ್ಯಾಕ್ಸಿನನ್ನು ವ್ಯಾಪಕವಾಗಿ ಬಳಕೆ ಮಾಡಲಾಗಿತ್ತು. ಇದರಿಂದ ಅಡ್ಡ ಪರಿಣಾಮ ಎದುರಿಸಿದ ಕುಟುಂಬಸ್ಥರು, ಸಾವಿಗೆ ತುತ್ತಾದ ಕುಟುಂಬಸ್ಥರು ಇಂಗ್ಲೆಂಡಿನಲ್ಲಿ ಆಸ್ಟ್ರಾ ಜೆನೆಕಾ ಕಂಪನಿಯ ವ್ಯಾಕ್ಸಿನ್ ವಿರುದ್ಧ ಕೋರ್ಟ್ ಹೋರಾಟ ಆರಂಭಿಸಿದ್ದರು. ಜಾಮಿ ಸ್ಕಾಟ್ ಎನ್ನುವ ವ್ಯಕ್ತಿ 2021ರಲ್ಲಿ ಈ ವ್ಯಾಕ್ಸಿನ್ ಪಡೆದ ಬಳಿಕ ಶಾಶ್ವತವಾಗಿ ಮೆದುಳಿಗೆ ಸಂಬಂಧಿಸಿದ ತೊಂದರೆಗೆ ಒಳಗಾಗಿದ್ದರು. ಆ ವ್ಯಕ್ತಿ ಸೇರಿದಂತೆ ಇಂಗ್ಲೆಂಡಿನಲ್ಲಿ ಹಲವರಿಗೆ ಥ್ರೋಂಬೋಸಿಸ್ ಎನ್ನುವ ತೊಂದರೆ ಕಾಣಿಸಿಕೊಂಡಿತ್ತು. Thrombocytopenia Syndrome (TTS) ಎನ್ನುವ ವೈಜ್ಞಾನಿಕ ಹೆಸರುಳ್ಳ ಈ ತೊಂದರೆ ಕಾಣಿಸಿಕೊಂಡರೆ ರಕ್ತ ಹೆಪ್ಪುಗಟ್ಟುವುದು ಮತ್ತು ದೇಹದಲ್ಲಿ ಪ್ಲೇಟ್ ಲೆಟ್ಸ್ ಕಣಗಳ ಕೊರತೆ ಉಂಟಾಗುವುದೆಂದು ಹೇಳಲಾಗುತ್ತದೆ.
ಇಂಗ್ಲೆಂಡಿನ ಹೈಕೋರ್ಟಿನಲ್ಲಿ ಆಸ್ಟ್ರಾ ಝೆನೆಕಾ ಕಂಪನಿಯ ಪರ ವಕೀಲರು ಸುದೀರ್ಘ ವಿಚಾರಣೆ ಬಳಿಕ ತಮ್ಮ ವ್ಯಾಕ್ಸಿನ್ ಕಾರಣದಿಂದ ಅಪರೂಪಕ್ಕೆ ಟಿಟಿಎಸ್ ಎನ್ನುವ ತೊಂದರೆ ಕಾಣಿಸಿಕೊಳ್ಳಬಹುದು ಎಂದಿರುವುದು ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡಿನಲ್ಲಿ ಭಾರೀ ವಿರೋಧ, ಕೋರ್ಟ್ ಹೋರಾಟ, ಸಾವಿಗೆ ತುತ್ತಾದ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಒತ್ತಾಯದಿಂದಾಗಿ ಆಸ್ಟ್ರಾ ಝೆನೆಕಾ ಉತ್ಪಾದಿಸಿದ ವ್ಯಾಕ್ಸಿನ್ ಬಳಕೆಗೆ ನಿಷೇಧ ಹೇರಲಾಗಿತ್ತು. ಇದೀಗ ಕಂಪನಿಯು ಲಸಿಕೆಯ ಕಾರಣದಿಂದ ಅಪರೂಪಕ್ಕೆ ಇಂತಹ ತೊಂದರೆ ಕಾಣಿಸಿಕೊಳ್ಳಬಹುದು ಎಂದು ಒಪ್ಪಿಕೊಂಡಿರುವುದು ಮೃತ ಕುಟುಂಬಸ್ಥರಿಗೆ ಮತ್ತು ಅದರಿಂದಾಗಿ ತೊಂದರೆ ಎದುರಿಸುತ್ತಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕೆಂಬ ಒತ್ತಾಯಕ್ಕೆ ಬಲ ಬಂದಿದೆ.
A big update has emerged in connection with COVID vaccine and its rare side effects, which are being questioned by several health experts. British-Swedish multinational pharmaceutical and biotechnology company AstraZeneca has admitted in court papers that its COVID vaccine, Covishield, can cause rare side effect The Telegraph reported.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm