ಬ್ರೇಕಿಂಗ್ ನ್ಯೂಸ್
06-12-23 06:27 pm HK News Desk ದೇಶ - ವಿದೇಶ
ನವದೆಹಲಿ, ಡಿ.6: ಪಾಕಿಸ್ತಾನದಲ್ಲಿ ಮತ್ತೊಬ್ಬ ನಟೋರಿಯಸ್ ಉಗ್ರನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಸಾಯಿಸಿದ್ದಾರೆ. 2015ರ ಜಮ್ಮು ಕಾಶ್ಮೀರದ ಉಧಂಪುರ್ ದಾಳಿಯ ರೂವಾರಿ, ಲಷ್ಕರ್ ಇ- ತೈಬಾ ಸಂಘಟನೆಯ ಉಗ್ರ ಹನ್ಝ್ಲಾ ಅದ್ನಾನ್ ಎಂಬಾತ ಅಪರಿಚಿತರ ಗುಂಡೇಟು ಬಿದ್ದು ಕೊಲೆಯಾಗಿದ್ದಾನೆ.
ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ನಿಕಟವರ್ತಿಯಾಗಿದ್ದ ಅದ್ನಾನ್ ಡಿ.2 ಮತ್ತು 3ರ ನಡುವಿನ ರಾತ್ರಿ ವೇಳೆ ತನ್ನ ಮನೆಯಲ್ಲಿದ್ದಾಗಲೇ ಬಂದೂಕುಧಾರಿಗಳ ಗುಂಡೇಟಿಗೆ ಒಳಗಾಗಿದ್ದಾನೆ, ನಾಲ್ಕು ಗುಂಡುಗಳು ಆತನ ದೇಹ ಸೇರಿದ್ದವು. ಗಂಭೀರ ಸ್ಥಿತಿಯಲ್ಲಿದ್ದ ಹನ್ಝ್ಲಾನನ್ನು ಪಾಕಿಸ್ತಾನದ ಮಿಲಿಟರಿ ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿತ್ತು. ಡಿ.5ರಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇತ್ತೀಚೆಗೆ ರಾವಲ್ಪಿಂಡಿಯಿಂದ ಕರಾಚಿಯನ್ನು ಕಾರಸ್ಥಾನ ಮಾಡಿಕೊಂಡು ಲಷ್ಕರ್ ಉಗ್ರವಾದಿ ಕಾರ್ಯಾಚರಣೆಯನ್ನು ಅದ್ನಾನ್ ಮುಂದುವರಿಸಿದ್ದ.

2015ರ ಉಧಂಪುರ್ ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಮೃತಪಟ್ಟು 12 ಮಂದಿ ಯೋಧರು ಗಾಯಗೊಂಡಿದ್ದರು. 2016ರಲ್ಲಿ ಜಮ್ಮು ಕಾಶ್ಮೀರದ ಪಾಂಪೋರ್ ಏರಿಯಾದಲ್ಲಿ ಲಷ್ಕರ್ ಉಗ್ರರ ದಾಳಿಗೆ ಎಂಟು ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದರು. ಇವರೆಡೂ ಕೃತ್ಯದ ಹಿಂದೆ ಉಗ್ರ ಹನ್ಝ್ಲಾ ಅದ್ನಾನ್ ಮಾಸ್ಟರ್ ಮೈಂಡ್ ಆಗಿದ್ದ ಅನ್ನುವುದನ್ನು ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ಪತ್ತೆ ಮಾಡಿದ್ದರು. ಡಿ.2ರಂದು ಐಎಸ್ಐ ಪರವಾಗಿ ಕೆಲಸ ಮಾಡುತ್ತಿದ್ದ ಖಲೀಸ್ತಾನಿ ಉಗ್ರನೊಬ್ಬ ಕರಾಚಿಯಲ್ಲಿ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ.

ಮತ್ತೊಬ್ಬ ಉಗ್ರವಾದಿಗೆ ಗುಂಡೇಟು
ಅಹ್ಲೇ ಸುನ್ನತ್ ವಾಲೇ ಜಮಾತ್ ಎನ್ನುವ ನಿಷೇಧಿತ ಸಂಘಟನೆಯ ಸ್ಥಳೀಯ ನಾಯಕನಾಗಿದ್ದ ಬಿಲಾಲ್ ಮುರ್ಶಿದ್ ಎಂಬಾತನಿಗೆ ಡಿ.6ರಂದು ಬೈಕಿನಲ್ಲಿ ಬಂದಿದ್ದ ಇಬ್ಬರು ಗುಂಡು ಹಾರಿಸಿದ್ದಾರೆ. ಬಿಲಾಲ್ ಮುರ್ಶಿದ್ ದೇಹಕ್ಕೆ ಐದಾರು ಗುಂಡುಗಳು ಹೊಕ್ಕಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. ಬಂದೂಕುಧಾರಿಗಳು ಬೈಕಿನಲ್ಲಿ ಬಂದು ಬಿಲಾಲನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆಂದು ಪತ್ರಿಕೆ ಬರೆದಿದೆ.
Adnan Ahmed, considered to be a close aide of Lashkar-e-Taiba (LeT) founder and 26/11 Mumbai terror attacks mastermind Hafiz Saeed, was shot dead in Pakistan’s Karachi city.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 03:55 pm
HK News Staffer
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
17-07-26 12:58 pm
HK News Staffer
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm
ದೆಹಲಿಯಿಂದ ಕಾರಿನಲ್ಲಿ 5 ಕೋಟಿ ಮೌಲ್ಯದ ಎಂಡಿಎಂಎ ಡ್ರ...
16-07-26 05:10 pm
ಗುರುವಾಯನಕೆರೆ ವಿದ್ಯುತ್ ಸಬ್ ಸ್ಟೇಶನ್ ಬಳಿ ಶವ ಪತ್ತ...
16-07-26 02:29 pm