ಬ್ರೇಕಿಂಗ್ ನ್ಯೂಸ್
25-11-23 01:16 pm HK News Desk ದೇಶ - ವಿದೇಶ
ಲಕ್ನೋ, ನ.25: ಹಲಾಲ್ ಪ್ರಮಾಣಪತ್ರ, ಏಜನ್ಸಿಗಳಿಗೆ ಮತ್ತು ಅಂತಹ ಆಹಾರ ಪದಾರ್ಥಗಳಿಗೆ ಉತ್ತರ ಪ್ರದೇಶ ಸರ್ಕಾರ ನಿಷೇಧ ವಿಧಿಸಿದ ಕ್ರಮವನ್ನು ಮುಸ್ಲಿಂ ಧಾರ್ಮಿಕ ಮುಖಂಡರು ಸ್ವಾಗತಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಬರೇಲಿ ನಗರದಲ್ಲಿ ಇರುವ ಆಲಾ ಹಜರತ್ ದರ್ಗಾದ ಮೌಲಾನಾ ಶಹಾಬುದ್ದೀನ್ ಉತ್ತರ ಪ್ರದೇಶ ಸರ್ಕಾರದ ನಿಷೇಧ ಕ್ರಮ ಸರಿ ಎಂದಿದ್ದಾರೆ. ಆಲಾ ಹಜರತ್ ದರ್ಗಾಗೆ ಉತ್ತರ ಪ್ರದೇಶ ಮಾತ್ರವಲ್ಲ, ದೇಶಾದ್ಯಂತ ಅಪಾರ ಸಂಖ್ಯೆಯ ಅನುಯಾಯಿಗಳಿದ್ದು ದರ್ಗಾದ ಮುಖ್ಯಸ್ಥರೇ ಸರ್ಕಾರದ ಕ್ರಮವನ್ನು ಸಮರ್ಥಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹಲಾಲ್ ಪ್ರಮಾಣ ಪತ್ರದ ಮುದ್ರೆಯೊಂದಿಗೆ ಆಹಾರ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟದ ಮೇಲೆ ನಿರ್ಬಂಧ ವಿಧಿಸಿ ಆದೇಶ ಮಾಡಿದೆ. ಸರಕಾರದ ಕ್ರಮವನ್ನು ಮೌಲಾನಾ ಅವರು ಸಮರ್ಥಿಸಿಕೊಂಡಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಹಲಾಲ್ ಪ್ರಮಾಣ ಪತ್ರವು ಷರಿಯಾ ನಿಯಮಾವಳಿಗಳನ್ನು ಪೂರ್ಣಗೊಳಿಸೋದಿಲ್ಲ ಎಂದು ಮೌಲಾನಾ ಶಹಾಬುದ್ದೀನ್ ಅವರು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮೌಲಾನಾ ಅವರು, ಹಲಾಲ್ ಪ್ರಮಾಣ ಪತ್ರ ಅನ್ನೋದು ಕೇವಲ ಮಾರುಕಟ್ಟೆ ತಂತ್ರಗಾರಿಕೆ. ಹಲಾಲ್ ಪ್ರಮಾಣ ಪತ್ರ ಮುಂದಿಟ್ಟು ತಮ್ಮ ಉತ್ಪನ್ನಗಳ ಮಾರಾಟ ಹೆಚ್ಚಿಸಿಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಲಾಲ್ ಪ್ರಮಾಣ ಪತ್ರವನ್ನು ಉತ್ಪನ್ನಗಳ ಮೇಲೆ ಮುದ್ರಿಸಿ ದಂಧೆಕೋರರು ಹಣ ಮಾಡುತ್ತಿದ್ದಾರೆ. ಈ ತಂತ್ರಗಾರಿಕೆ ಮೂಲಕ ಅಲ್ಪಸಂಖ್ಯಾತರ ಭಾವನೆಗಳ ಜೊತೆ ಆಟವಾಡಿ ಅವರಿಗೆ ಮೋಸ ಮಾಡಲಾಗುತ್ತಿದೆ ಎಂದು ಮೌಲಾನಾ ಶಹಾಬುದ್ದೀನ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ. ಹಲಾಲ್ ಪ್ರಮಾಣ ಪತ್ರವನ್ನು ಸಾಮಾನ್ಯವಾಗಿ ಮಾಂಸಹಾರ ಉತ್ಪನ್ನಗಳಿಗೆ ನೀಡಲಾಗುತ್ತದೆ. ಆದರೆ ಕೆಲವರು ಹಲಾಲ್ ಚಿಹ್ನೆಯನ್ನು ಜೇನು ತುಪ್ಪ, ಬಿಸ್ಕೇಟ್, ತರಕಾರಿ ಹಾಗೂ ಇನ್ನಿತರ ವಸ್ತುಗಳ ಮೇಲೂ ಮುದ್ರಿಸುತ್ತಿದ್ದಾರೆ. ಇದು ಖಡಾ ಖಂಡಿತವಾಗಿ ತಪ್ಪು ಎಂದು ಮೌಲಾನಾ ಅವರು ಹೇಳಿದ್ದಾರೆ.
Maulana Shahabuddin welcomed Yogi Adityanath government’s decision to ban halal products in Uttar Pradesh. Maulana Shahabuddin is the head priest of Ala Hazrat Dargah in Bareilly, UP. Maulana Shahabuddin says that Halar certification is a business trick and it is not in compliance with Sharia law.
28-03-25 10:47 pm
Bangalore Correspondent
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
28-03-25 04:15 pm
HK News Desk
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
Uber, Ola, Sahkar Taxi: ಓಲಾ, ಉಬರ್ ರೀತಿಯಲ್ಲೇ ಸ...
27-03-25 04:07 pm
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
28-03-25 11:16 pm
Udupi Correspondent
Mangalore University, Rajendra Kumar, Rohan M...
28-03-25 07:38 pm
Cow Transport, Kaikamba, Bajrang Dal, Mangalo...
28-03-25 11:52 am
Mangalore Jail, Mobile Jammer: ಎತ್ತಿಗೆ ಜ್ವರ ಬ...
27-03-25 08:45 pm
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
28-03-25 09:25 pm
Mangalore Correspondent
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm
Bangalore Murder, Techie: ಮುದ್ದಾದ ಪತ್ನಿಯನ್ನು...
28-03-25 06:12 pm
Kodagu Murder, Four Killed: ಕೊಡಗು ; ಅತ್ತೆ - ಮ...
28-03-25 05:41 pm
CISF Arrest, Robbery, Kolkata: ಐಟಿ ಅಧಿಕಾರಿಗಳ...
27-03-25 01:37 pm