ಬ್ರೇಕಿಂಗ್ ನ್ಯೂಸ್
11-11-20 07:30 pm Headline Karnataka News Network ದೇಶ - ವಿದೇಶ
ಮುಂಬೈ, ನ.11: 2020ನೇ ಹಣಕಾಸು ವರ್ಷದಲ್ಲಿ ಒಟ್ಟು 7,804 ಕೋಟಿ ರು.ಗಳನ್ನು ಸಮಾಜ ಸೇವೆಗೆ ನೀಡುವ ಮೂಲಕ ದೇಶದ ನಂ.1 ದಾನಿಯಾಗಿ ವಿಪ್ರೋ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್ಜಿ ಹೊರಹೊಮ್ಮಿದ್ದಾರೆ. ಈ ವರ್ಷ ಇವರು ದಿನಕ್ಕೆ ಸರಾಸರಿ 22 ಕೋಟಿ ರು. ಮಾಡಿದ್ದಾರೆ
ಕಳೆದ ವರ್ಷ ಎಚ್ಸಿಎಲ್ ಕಂಪನಿಯ ಶಿವ ನಾಡಾರ್ 826 ಕೋಟಿ ರು. ದಾನ ಮಾಡುವ ಮೂಲಕ ಅತಿದೊಡ್ಡ ದಾನಿಯಾಗಿದ್ದರು. ಈ ವರ್ಷ ಅವರು 795 ಕೋಟಿ ರು. ದಾನ ಮಾಡಿದ್ದಾರೆ. ಕಳೆದ ವರ್ಷ 426 ಕೋಟಿ ರು. ನೀಡಿದ್ದ ಅಜೀಂ ಪ್ರೇಮ್ಜಿ ಈ ವರ್ಷ ಅದನ್ನು ಭಾರಿ ಪ್ರಮಾಣದಲ್ಲಿ ಏರಿಸಿ ನಂ.1 ದಾನಿಯಾಗಿದ್ದಾರೆ.
ಶಿವ ನಾಡಾರ್ 2ನೇ ಅತಿ ದೊಡ್ಡ ದಾನಿಯಾಗಿದ್ದಾರೆ. ದೇಶದ ನಂ.1 ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ 458 ಕೋಟಿ ರು. ನೀಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಹುರುನ್ ರಿಪೋರ್ಟ್ ಇಂಡಿಯಾ ಹಾಗೂ ಎಡೆಲ್ಗಿವ್ ಫೌಂಡೇಶನ್ಗಳು ಸೇರಿ ಈ ಪಟ್ಟಿ ಸಿದ್ಧಪಡಿಸಿವೆ.
2020ರಲ್ಲಿ ದೇಶದಲ್ಲಿ ದಾನಿಗಳಿಂದ ಹರಿದುಬಂದ ಒಟ್ಟು ಮೊತ್ತ 12,050 ಕೋಟಿ ರು.ಗೆ ಏರಿಕೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.175 ಹೆಚ್ಚು. ಇನ್ನು, ಈ ವರ್ಷ ಒಟ್ಟು ದಾನಿಗಳ ಸಂಖ್ಯೆ 78ಕ್ಕೆ (ಕಳೆದ ವರ್ಷ 72) ಏರಿಕೆಯಾಗಿದೆ. ನಂದನ್ ನಿಲೇಕಣಿ 159 ಕೋಟಿ, ಅವರ ಪತ್ನಿ ರೋಹಿಣಿ 47 ಕೋಟಿ ದಾನ ಮಾಡಿದ್ದಾರೆ.
Azim Premji, the founder-chairman of Wipro, topped the list of philanthropists in India for 2020 with Rs 7,904 in donations. He donated Rs 22 crore per day, according to EdelGive Hurun India Philanthropy List 2020.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
17-03-25 08:01 pm
Mangalore Correspondent
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm