ಬ್ರೇಕಿಂಗ್ ನ್ಯೂಸ್
06-11-20 01:34 pm Headline Karnataka News Network ದೇಶ - ವಿದೇಶ
ನವದೆಹಲಿ, ನವೆಂಬರ್ 06: ಕೊರೊನಾ ವೈರಸ್ ಪುನುಗು ಬೆಕ್ಕಿನ ಜಾತಿಯ ಪ್ರಾಣಿಗಳಿಂದ ಹರಡುತ್ತಿದೆ ಎನ್ನುವ ಗುಮಾನಿ ವಿಜ್ಞಾನಿಗಳಲ್ಲಿದೆ. ಈಗಾಗ್ಲೇ ಸ್ಪೇನ್, ನೆದರ್ಲೇಂಡ್ ದೇಶಗಳಲ್ಲಿ ಲಕ್ಷಾಂತರ ಮುಂಗುಸಿ ಅಥವಾ ಪುನುಗು ಜಾತಿಯ ಅಲ್ಲಿನ ಜನ ಇಂಗ್ಲಿಷ್ ಭಾಷೆಯಲ್ಲಿ ಮಿಂಕ್ ಎಂದು ಕರೆಯುವ ಪ್ರಾಣಿಗಳನ್ನು ಕೊಂದು ಹಾಕಿದ್ದಾರೆ.
ಇದೇ ವೇಳೆ, ಯುರೋಪ್ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಮಿಂಕ್ ಪ್ರಾಣಿಗಳನ್ನು ಹೊಂದಿರುವ ಡೆನ್ಮಾರ್ಕ್ ತನ್ನ ದೇಶದಲ್ಲಿರುವ ಎಲ್ಲ ಪ್ರಾಣಿಗಳನ್ನು ಕೊಲ್ಲುವಂತೆ ಆದೇಶ ಮಾಡಿದೆ. ಅಲ್ಲಿ ಸರಿಸುಮಾರು 17 ಮಿಲಿಯನ್ ಮುಂಗುಸಿ ಜಾತಿಯ ಮಿಂಕ್ ಪ್ರಾಣಿಗಳಿದ್ದು ಅವುಗಳನ್ನು ಪೂರ್ತಿ ಕೊಂದು ಹಾಕುವುದೇ ಅಲ್ಲಿನ ಸರಕಾರಕ್ಕೆ ಚಿಂತೆಯಾಗಿದೆ.
17 ಮಿಲಿಯನ್ ಅಂದರೆ, ಸಾಮಾನ್ಯ ಲೆಕ್ಕದಲ್ಲಿ ಲೆಕ್ಕ ಹಾಕುವುದಾದರೆ 1.70 ಕೋಟಿ ಮಿಂಕ್ ಪ್ರಾಣಿಗಳಿದ್ದು, ಅವುಗಳೆಲ್ಲವನ್ನೂ ಕೊಲ್ಲಲು ಡೆನ್ಮಾರ್ಕ್ ಪ್ರಧಾನಿ ಮೀಟ್ ಪ್ರೆಡರಿಕ್ಸನ್ ಆದೇಶ ಮಾಡಿದ್ದಾರೆ. ಪ್ರತಿ ದಿನವೂ ಮಿಂಕ್ ಫಾರ್ಮ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಅದರ ಮಾಲೀಕರಿಗೆ ಕೊರೊನಾ ಸೋಂಕು ಕಂಡುಬರುತ್ತಿರುವುದನ್ನು ಅಲ್ಲಿನ ಸರಕಾರ ಪತ್ತೆ ಮಾಡಿದೆ. ಆದರೆ, ಸೋಂಕು ಮಾನವನಿಂದ ಪ್ರಾಣಿಗಳಿಗೆ ಹರಡಿದೆಯೇ ಅಥವಾ ಪ್ರಾಣಿಗಳ ಮೂಲಕ ಮಾನವನಿಗೆ ಹರಡುತ್ತಿದೆಯೇ ಎನ್ನುವುದು ದೃಢಪಟ್ಟಿಲ್ಲ.



ಪ್ರಾಣಿಗಳನ್ನು ತಪಾಸಣೆ ಮಾಡುವಾಗ ಅದರಲ್ಲೂ ಕೊರೊನಾ ವೈರಸ್ ಇರುವುದು ಕಂಡುಬಂದಿದೆ. ಹೀಗಾಗಿ ನಮ್ಮ ಜನರ ಹಿತವನ್ನು ಕಾಪಾಡುವುದು ಮುಖ್ಯ. ಆದ್ದರಿಂದ ಈ ಪ್ರಾಣಿಗಳನ್ನು ಕೊಂದು ಇನ್ನಿಲ್ಲವಾಗಿಸುವುದೇ ಸದ್ಯದ ದೊಡ್ಡ ಜವಾಬ್ದಾರಿ ಎಂದಿದ್ದಾರೆ ಅಲ್ಲಿನ ಪ್ರಧಾನಿ.
ಈ ನಡುವೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪ್ಯಾರಿಸ್ ಮೂಲದ ವಿಜ್ಞಾನಿಗಳು ಮಿಂಕ್ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸೋಂಕು ಹರಡುತ್ತಿದೆಯೇ ಅನ್ನುವ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.
The world’s largest mink producer, Denmark, says it plans to cull more than 15 million of the animals, due to fears that a Covid-19 mutation moving from mink to humans could jeopardise future vaccines.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 05:32 pm
Mangalore Correspondent
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm