ಬ್ರೇಕಿಂಗ್ ನ್ಯೂಸ್
14-07-23 02:16 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 14: ಫ್ರಾನ್ಸ್ ತೆರಳುವ ಭಾರತೀಯರಿಗೆ ಶುಭಸುದ್ದಿ. ಶೀಘ್ರದಲ್ಲೇ ಫ್ರಾನ್ಸ್ನಲ್ಲಿ ಭಾರತದ ಯುಪಿಐ ಬಳಸಿ ಹಣ ಪಾವತಿ ಸೌಲಭ್ಯ ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫ್ರಾನ್ಸ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಘೋಷಣೆ ಮಾಡಿದ್ದಾರೆ.
ಪ್ಯಾರಿಸ್ನ ಐಫೆಲ್ ಟವರ್ನ ಮೊದಲ ಮತ್ತು ಎರಡನೇ ಹಂತಗಳಿಗೆ ಹೋಗಲು ಭಾರತೀಯ ಪ್ರವಾಸಿಗರು ರೂಪಾಯಿಗಳಲ್ಲಿ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತದೆ. "ಭಾರತ ಮತ್ತು ಫ್ರಾನ್ಸ್ನಲ್ಲಿ ಯುಪಿಐ ಬಳಕೆಗೆ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ಮುಂಬರುವ ದಿನಗಳಲ್ಲಿ ಇದು ಐಫೆಲ್ ಟವರ್ನಿಂದ ಪ್ರಾರಂಭವಾಗುತ್ತದೆ, ಅಂದರೆ ಭಾರತೀಯ ಪ್ರವಾಸಿಗರು ರೂಪಾಯಿಗಳಲ್ಲಿ ಟಿಕೆಟ್ ಕೊಳ್ಳಲು ಸಾಧ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಫ್ರಾನ್ಸ್ನಲ್ಲಿ UPI ಪರಿಚಯದಿಂದಾಗಿ ಭಾರತೀಯ ಪ್ರವಾಸಿಗರು ವಿದೇಶೀ ವಿನಿಮಯ ಕಾರ್ಡ್ಗಳನ್ನು ಅವಲಂಬಿಸಬೇಕಾಗಿಲ್ಲ ಅಥವಾ ದೊಡ್ಡ ಮೊತ್ತದ ಹಣವನ್ನು ಕೈಯಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಅವರು ತಮ್ಮ ಮೊಬೈಲ್ ಫೋನ್ಗಳಲ್ಲಿ ತಡೆರಹಿತ ಪಾವತಿಗಳನ್ನು ಮಾಡಬಹುದು.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐನ ಪ್ರಾಯೋಗಿಕ ಬಳಕೆಯನ್ನು ಏಪ್ರಿಲ್ 2016 ರಲ್ಲಿ ಆರಂಭಿಸಿತ್ತು. ಇದರಲ್ಲಿ 21 ಸದಸ್ಯ ಬ್ಯಾಂಕ್ಗಳು ಸೇರಿದ್ದವು. ಅಂದಿನಿಂದ, UPI ಬಳಕೆಯು ದೇಶಾದ್ಯಂತ ಮಹತ್ತರವಾಗಿ ಬೆಳೆದಿದ್ದು ಡಿಜಿಟಲ್ ಇಂಡಿಯಾ ಭಾಗವಾಗಿ ಬಹುತೇಕ ಜನಸಾಮಾನ್ಯರು ಯುಪಿಐ ಪಾವತಿಗೆ ಒಗ್ಗಿಕೊಂಡಿದ್ದಾರೆ. ಈಗ ಸಣ್ಣ ಪ್ರಮಾಣದ 5- 10 ರೂ.ನಂತಹ ಸಣ್ಣ ಮೊತ್ತವನ್ನೂ ಯುಪಿಐ ಮೂಲಕ ಪಾವತಿಸುತ್ತಾರೆ.
2022 ರಲ್ಲಿ ಫ್ರಾನ್ಸ್ನಲ್ಲಿ ವೇಗದ ಮತ್ತು ಸುರಕ್ಷಿತ ಆನ್ಲೈನ್ ಪಾವತಿ ವ್ಯವಸ್ಥೆಯಾದ ಲೈರಾದೊಂದಿಗೆ ಭಾರತದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿತ್ತು. ಈ ವರ್ಷ, ಯುಪಿಐ ಸಿಂಗಾಪುರದ ಪಾವತಿ ವ್ಯವಸ್ಥೆಯಾದ PayNow ಜೊತೆಗೂ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ದೇಶಗಳ ನಡುವೆ ಗಡಿಯಾಚೆಗಿನ ವಹಿವಾಟುಗಳನ್ನು ಸಕ್ರಿಯಗೊಳಿಸಲು ಭಾರತ ಮುಂದಾಗಿದೆ. ಆಮೂಲಕ ಭಾರತೀಯರು ಈ ದೇಶಗಳಿಗೆ ಹೋದಲ್ಲಿ ಭವಿಷ್ಯದಲ್ಲಿ ಯುಪಿಐ ಪಾವತಿಯ ಸೌಲಭ್ಯ ಪಡೆಯಲಿದ್ದಾರೆ.
India's most successful payments system UPI will be used in France, Prime Minister Narendra Modi said while addressing the Indian community in Paris today. "India and France have agreed to use UPI in France. In the coming days, it will begin from the Eiffel Tower, which means Indian tourists will now be able to pay in rupees," PM Modi said, referring to the Unified Payments System, or UPI.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm