Kasargod Rain: ಕಾಸರಗೋಡಿನಲ್ಲೂ ಧಾರಾಕಾರ ಮಳೆ ; ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜಿಗೆ ರಜೆ ಘೋಷಣೆ, ಕುಂಬಳೆ ಬಳಿ ಮರ ಬಿದ್ದು ವಿದ್ಯಾರ್ಥಿನಿ ಸಾವು 

04-07-23 12:04 pm       HK News Desk   ದೇಶ - ವಿದೇಶ

ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಕೇರಳದ ಗಡಿಭಾಗ ಕಾಸರಗೋಡು ಜಿಲ್ಲೆಯಾದ್ಯಂತ ಜುಲೈ 4ರಂದು ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಾಸರಗೋಡು, ಜುಲೈ 4: ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಕೇರಳದ ಗಡಿಭಾಗ ಕಾಸರಗೋಡು ಜಿಲ್ಲೆಯಾದ್ಯಂತ ಜುಲೈ 4ರಂದು ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಸೋಮವಾರ ಸಂಜೆ ಮತ್ತು ರಾತ್ರಿ ಭಾರೀ ಮಳೆಯಾಗಿದ್ದರಿಂದ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದರು. ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಮರ ಬಿದ್ದು ಮೃತಪಟ್ಟ ಘಟನೆ ಕುಂಬಳೆ ಬಳಿಯ ಅಂಗಡಿಮೊಗರು ಎಂಬಲ್ಲಿ ನಡೆದಿದೆ. ಅಂಗಡಿಮೊಗರು ಜಿಎಚ್ಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ, ಬಿಎಂ ಯೂಸುಫ್ ಎಂಬವರ ಪುತ್ರಿ ಆಯಿಷತ್ ನಿಹಾಂ(11) ಮೃತ ಬಾಲಕಿ. 

ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ನಡೆದು ಹೋಗುತ್ತಿದ್ದಾಗ ಶಾಲೆ ಬಳಿಯಲ್ಲೇ ಇದ್ದ ಮರದ ರೆಂಬೆ ವಿದ್ಯಾರ್ಥಿನಿಯರ ಮೇಲೆ ಬಿದ್ದಿದೆ. ಆಯಿಷತ್ ಗಂಭೀರ ಗಾಯಗೊಂಡಿದ್ದರೆ, ಇನ್ನೊಬ್ಬ ಬಾಲಕಿಗೂ ಗಾಯಗಳಾಗಿದ್ದವು. ಆಯಿಷಾಳನ್ನು ಕೂಡಲೇ ಆಸ್ಪತ್ರೆಗೆ ಒಯ್ದರೂ, ಬದುಕಿಸುವುದು ಸಾಧ್ಯವಾಗಿಲ್ಲ. ಜೊತೆಗೆ ತೆರಳುತ್ತಿದ್ದ ಬೇರೆ ವಿದ್ಯಾರ್ಥಿಗಳು ಸಮೀಪದಲ್ಲಿದ್ದರೂ, ಈ ವೇಳೆ ಅಪಾಯದಿಂದ ಪಾರಾಗಿದ್ದಾರೆ.

Kasargod heavy rains, school colleges delcared holiday, 11-yr-old girl killed as tree falls during heavy wind, rain. The deceased student has been identified as Aishat Min Ha (11), a sixth standard student of Angadi Moger Government Higher Secondary School.