ಬ್ರೇಕಿಂಗ್ ನ್ಯೂಸ್
12-06-23 06:14 pm HK News Desk ದೇಶ - ವಿದೇಶ
ಜೈಪುರ, ಜೂನ್ 12: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಮೇ 26ರಂದು ನಡೆದ ಸಾಮೂಹಿಕ ಮದುವೆ ಕಾರ್ಯಕ್ರಮ, ಬರೋಬ್ಬರಿ 2,143 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ವಿಶ್ವ ದಾಖಲೆಯೇ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿವ ಪ್ರಮೋದ್ ಜೈನ್ ಭಾಯಾ ಅವರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಯಿತು. ಹಸೆ ಮಣೆ ಏರಿದ ದಂಪತಿಗಳಿಗೆ ಗಣ್ಯರು ಆಶೀರ್ವದಿಸಿದರು.
ಅಂದ ಹಾಗೆ ಈ ಸಾಮೂಹಿಕ ಮದುವೆ ಸಮಾರಂಭವು ಎರಡು ದಾಖಲೆಗಳನ್ನು ನಿರ್ಮಿಸಿದೆ. 12 ಗಂಟೆಗಳಲ್ಲಿ ನಡೆದ ಅತೀ ಹೆಚ್ಚು ಮದುವೆ ಹಾಗೂ 24 ಗಂಟೆಗಳಲ್ಲಿ ನಡೆದ ಅತಿ ಹೆಚ್ಚು ಮದುವೆ ಎನ್ನುವ ದಾಖಲೆ ಈ ಸಾಮೂಹಿಕ ಮದುವೆ ಸಮಾರಂಭಕ್ಕೆ ದೊರಕಿದೆ. ಈ ಹಿಂದೆ 2013ರಲ್ಲಿ 963 ಜೋಡಿ ಮದುವೆಯಾಗಿದ್ದು, ಅದು ದಾಖಲೆಯನ್ನು ಹೊಂದಿತ್ತು. ಅದರ ದಾಖಲೆಯನ್ನು ಈಗಿನ ಸಮಾರಂಭ ಮುರಿದಿದೆ.
ಶ್ರೀ ಮಹಾವೀರ ಗೋಶಾಲಾ ಕಲ್ಯಾಣ ಸಂಸ್ಥಾನವು ಈ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಅದರಲ್ಲಿ ಹಿಂದೂಗಳ ಜತೆ ಮುಸ್ಲಿಂ ಜೋಡಿಗಳೂ ಮದುವೆ ಮಾಡಿಕೊಂಡಿರುವುದು ವಿಶೇಷ. ಪ್ರತಿ ದಂಪತಿಗೆ ಆಯಾ ಸಮುದಾಯದ ಪುರೋಹಿತರು, ಕ್ವಾಜಿಗಳ ಕೈಯಿಂದಲೇ ಮದುವೆ ಮಾಡಿಸಲಾಯಿತು. ಮದುವೆ ಮುಗಿದ ನಂತರ ರಾಜಸ್ಥಾನ ಸರ್ಕಾರದ ಅಧಿಕಾರಿಗಳು ದಂಪತಿಗಳಿಗೆ ಮದುವೆ ಪ್ರಮಾಣಪತ್ರಗಳನ್ನು ನೀಡಿದರು.
ಮದುವೆ ನಂತರ ಪ್ರತಿ ದಂಪತಿಗೆ ಆಭರಣ, ಹಾಸಿಗೆ, ಅಗತ್ಯ ಅಡುಗೆ ಪಾತ್ರೆಗಳು, ದೂರದರ್ಶನ, ರೆಫ್ರಿಜರೇಟರ್ಮ ಕೂಲರ್ನಂತಹ ಗೃಹೋಪಯೋಗಿ ಉಪಕರಣಗಳನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ.
A mass wedding ceremony in Rajasthan’s Baran has set a new world record, bringing together 2,143 couples in a joyous celebration of love and commitment. Organized by Shri Mahaveer Goshala Kalyan Sansthan, a registered trust dedicated to serving marginalized communities, this remarkable event aimed to help underprivileged individuals fulfil their dreams of marriage.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm