ಹಿಂದುತ್ವ, ದೇವರು ಬಿಜೆಪಿಗರ ಖಾಸಗಿ ಆಸ್ತಿಯಲ್ಲ ; ಉಜ್ಜಯಿನಿಯಲ್ಲಿ ಡಿಕೆ ಶಿವಕುಮಾರ್ 

11-06-23 08:45 pm       HK News Desk   ದೇಶ - ವಿದೇಶ

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದುತ್ವ, ದೇವರು ಇದ್ಯಾವುದು ಬಿಜೆಪಿಗರ ಖಾಸಗಿ ಆಸ್ತಿಯಲ್ಲ ಎಂದು ಹೇಳಿದ್ದಾರೆ.

ಉಜ್ಜಯಿನಿ, ಜೂನ್ 11: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದುತ್ವ, ದೇವರು ಇದ್ಯಾವುದು ಬಿಜೆಪಿಗರ ಖಾಸಗಿ ಆಸ್ತಿಯಲ್ಲ ಎಂದು ಹೇಳಿದ್ದಾರೆ. 

ಮಹಾಕಾಳೇಶ್ವರ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದ ಡಿ.ಕೆ. ಶಿವಕುಮಾರ್ ಅವರು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭಸ್ಮವನ್ನು ಸ್ವೀಕರಿಸಿದರು. 'ಹಿಂದುತ್ವ, ದೇವಾಲಯಗಳು ಅಥವಾ ದೇವರು ಯಾವ ರಾಜಕೀಯ ಪಕ್ಷದ ಆಸ್ತಿಯೂ ಅಲ್ಲ! ಅದು ಪ್ರತಿಯೊಬ್ಬರಿಗೂ ಸೇರಿದ್ದು. ಇದ್ಯಾವುದು ಕೂಡ ಬಿಜೆಪಿಯ ವೈಯಕ್ತಿಕ ಆಸ್ತಿಯಲ್ಲ ಎಂದು ಹೇಳಿದರು. 

Karnataka Deputy Chief Minister DK Shivakumar Worship Lord Mahakal In Ujjain  Madhya Pradesh ANN | MP News: कर्नाटक के उपमुख्यमंत्री डीके शिवकुमार पहुंचे  भगवान महाकाल की शरण में ...

D K Shivakumar visits Mahakaleshwar, Kalabhairava temples in Ujjain;  predicts thumping Cong victory in year-end MP

ಸಮಾಜದ ಪ್ರತಿಯೊಂದು ವರ್ಗ, ಸಂಸ್ಕೃತಿ, ಧರ್ಮ ಮತ್ತು ಭಾಷೆಯಲ್ಲಿ ಕಾಂಗ್ರೆಸ್​ಗೆ ಅಪಾರ ನಂಬಿಕೆ ಇದೆ. ಮಹಾಕಾಳೇಶ್ವರ ಸನ್ನಿಧಿಗೆ ಇದು ನನ್ನ ನಾಲ್ಕನೇ ಭೇಟಿ. ನನ್ನ ಕಷ್ಟದ ಸಮಯಗಳಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ಚುನಾವಣೆಗೂ ಮುನ್ನ ಭಗವಂತನಲ್ಲಿ ಈ ಬಾರಿ ಅಧಿಕಾರ ಪ್ರಾಪ್ತಿಯಾಗುವಂತೆ ಪ್ರಾರ್ಥಿಸಿದ್ದೆ, ಅದರಂತೆ ಈಗ ನಮಗೆ ಅಧಿಕಾರ ಲಭಿಸಿದೆ' ಎಂದು ಸುದ್ದಿಗಾರರಿಗೆ ಹೇಳಿದರು.

Karnataka Deputy Chief Minister D K Shivakumar took part in the Bhasm Aarti’ held at dawn on Sunday in the Mahakaleshwar Temple and then prayed at the Kalabhairava temple, both in Ujjain in Madhya Pradesh.Shivakumar said Hindutva, temples and gods were not the private property of the Bharatiya Janata Party and predicted a thumping victory for the Congress in the year-end MP Assembly polls.